ಬೆಂಗಳೂರು: ಕ್ರಿಕೆಟ್ (Cricket) ಆಟದಲ್ಲಿ ಇಂಗ್ಲಿಷ್, ಕನ್ನಡ, ಹಿಂದಿಯಲ್ಲಿ ಕಾಮಿಂಟ್ರಿ ಕೇಳಿರ್ತೀರಿ. ಆದರೆ ಬೆಂಗಳೂರಿನಲ್ಲಿ ಕನ್ನಡಿಗರೊಬ್ಬರು ಸಂಸ್ಕೃತದಲ್ಲಿ ಕಾಮೆಂಟ್ರಿ ಕೊಟ್ಟು ವೈರಲ್ ಆಗಿದ್ದಾರೆ. ಇಷ್ಟು ಮಾತ್ರವಲ್ಲ ಪ್ರಧಾನಿ ನರೇಂದ್ರ ಮೋದಿ (Narendra Modi) ಈ ಗಲ್ಲಿ ಕ್ರಿಕೆಟ್ ನ ಸಂಸ್ಕೃತ ಕಾಮೆಂಟರಿ (Sanksrit Comentary) ಗೆ ಮೆಚ್ಚುಗೆ ವ್ಯಕ್ತಪಡಿಸಿ ರೀ ಟ್ವೀಟ್ ಮಾಡಿದ್ದಾರೆ.
ಹೌದು. ಒಂದೇ ಒಂದು ವೀಡಿಯೋ ಈಗ ಸಿಕ್ಕಾಪಟ್ಟೆ ವೈರಲ್ ಆಗಿದೆ. ಬೆಂಗಳೂರಿನ ಗಿರಿನಗರದಲ್ಲಿರುವ ಸಂಸ್ಕೃತ ವಠಾರ, ಅಂದರೆ ಸಂಸ್ಕೃತ ಭಾರತೀ ಆವರಣದಲ್ಲಿ ಸಂಸ್ಕೃತವೇ ವ್ಯಾವಹಾರಿಕ ಭಾಷೆ. ಅಲ್ಲಿನ ವಿದ್ಯಾರ್ಥಿಗಳು ಕ್ರಿಕೆಟ್ ಆಡುವಾಗ ಸಂಸ್ಕೃತ ವಿದ್ವಾಂಸರಾದ ಲಕ್ಷ್ಮೀನಾರಾಯಣ್ ಸಂಸ್ಕೃತದಲ್ಲಿ ಕಾಮೆಂಟರಿ ಮಾಡಿದ್ರು. ಆ ವೀಡಿಯೋವನ್ನ ಸಂಸ್ಕೃತ ಮತ್ತು ಕ್ರಿಕೆಟ್ ಎಂದು ಟ್ವೀಟ್ ಮಾಡಿದ್ರು. ಅದು ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಇದಕ್ಕೆ ಇನ್ನೊಂದು ಪ್ರಮುಖ ಕಾರಣ ಅಂದ್ರೆ ಪ್ರಧಾನಿ ನರೇಂದ್ರ ಮೋದಿ (Narendra Modi). ಮೋದಿಯರು ಈ ವೀಡಿಯೋ ರೀಟ್ವಿಟ್ ಮಾಡಿದ್ದರ ಪರಿಣಾಮ ಲಕ್ಷಾಂತರ ಮಂದಿ ವೀಡಿಯೋ ನೋಡಿ ಶೇರ್ ಮಾಡಿದ್ದಾರೆ.
Sanskrit and cricket pic.twitter.com/5fWmk9ZMZy
— LAKSHMI NARAYANA B.S (BHUVANAKOTE) (@chidsamskritam) October 2, 2022
ಪ್ರಧಾನಿ ಮೋದಿ ಸಂಸ್ಕೃತ ಕ್ರಿಕೆಟ್ ಕಾಮೆಂಟರಿಯನ್ನ ರಿಟ್ವೀಟ್ ಮಾಡಿದ ನಂತರ ದೇಶಾದ್ಯಂತ ಪ್ರಶಂಸೆ ಮಹಾಪೂರವೇ ಹರಿದು ಬರ್ತಿದೆ. ಕ್ರಿಕೆಟ್ ಕಾಮೆಂಟರಿ ಮಾಡಿದ ಸಂಸ್ಕೃತ ಪಂಡಿತ ಲಕ್ಷ್ಮೀ ನಾರಾಯಣ ಎಂಬವರು ಪಬ್ಲಿಕ್ ಟಿವಿ ಜೊತೆ ಮುಕ್ತವಾಗಿ ಮಾತನಾಡಿ ಖುಷಿ ವ್ಯಕ್ತಪಡಿಸಿದ್ರು. ಸಂಸ್ಕೃತ ಭಾರತೀ ಆವರಣದಲ್ಲಿ ಸಂಸ್ಕೃತವೇ ವ್ಯಾವಹಾರಿಕ ಭಾಷೆ. ಇಲ್ಲಿ ನಿತ್ಯ ಕ್ರಿಕೆಟ್ ಆಡೋ ವಠಾರದ ಹುಡುಗರನ್ನ ನೋಡಿ ಸಂಸ್ಕೃತದಲ್ಲೇ ಕಾಮೆಂಟರಿ ಮಾಡಿದರೆ ಹೇಗೆ ಅಂತ ಮಾಡಿದ್ವಿ ಎಂದು ಹೇಳಿದ್ದಾರೆ.
This is heartening to see…Congrats to those undertaking this effort.
During one of the #MannKiBaat programmes last year I had shared a similar effort in Kashi. Sharing that as well. https://t.co/bEmz0u4XvO https://t.co/A2ZdclTTR7
— Narendra Modi (@narendramodi) October 4, 2022
ಈ ಸಂಸ್ಕೃತದ ಕಾಮೆಂಟರಿ ವೀಡಿಯೋ ಟ್ವೀಟ್ ಮಾಡಿದ್ದನ್ನ ಪ್ರಧಾನಿ ಗುರುತಿಸಿ ರಿಟ್ವೀಟ್ ಮಾಡಿದ ನಂತರ ಈಗ ದೇಶದ ದಿಗ್ಗಜ ಕ್ರಿಕೆಟರ್ ಗಳಿಂದಲೂ ಸಂಸ್ಕೃತ ಕಾಮೆಂಟರಿಗೆ ಪ್ರಶಂಸೆ ವ್ಯಕ್ತವಾಗುತ್ತಿದೆ. ಸದ್ಯ ಪ್ರಧಾನಿ ರಿಟ್ವೀಟ್ ದೇಶದ ಮೂಲ ಭಾಷೆ ಸಂಸ್ಕೃತಕ್ಕೆ ಸಿಕ್ಕ ಜಯ ಎಂದು ಅಲ್ಲಿನ ವಿದ್ಯಾರ್ಥಿಗಳು ಸಹ ಖುಷಿಯಲ್ಲಿದ್ದಾರೆ.
ಒಟ್ಟಾರೆ ಬೆಂಗಳೂರಿನ ಗಿರಿನಗರದ ಸಂಸ್ಕೃತಿ ಭಾರತೀ ಆವರಣದ ಸಂಸ್ಕೃತ ಕ್ರಿಕೆಟ್ ಕಾಮೆಂಟರಿ ದೇಶವ್ಯಾಪಿ ಸದ್ದು ಮಾಡ್ತಿದೆ. ಇದಕ್ಕೆ ಪ್ರಧಾನಿ ಮೋದಿ ಮೆಚ್ಚುಗೆ ಮತ್ತಷ್ಟು ಖುಷಿ ಹೆಚ್ಚು ಮಾಡಿದೆ. ಇದನ್ನೂ ಓದಿ: ಎಲ್ಲರೂ ಉದ್ಯೋಗದ ಹಿಂದೆ ಓಡುತ್ತಿದ್ದಾರೆ, ಎಷ್ಟು ಜನರಿಗೆ ಉದ್ಯೋಗ ನೀಡಲು ಸಾಧ್ಯ: ಮೋಹನ್ ಭಾಗವತ್ ಪ್ರಶ್ನೆ