ವಿಜಯಪುರ: ಕ್ಷುಲ್ಲಕ ಕಾರಣಕ್ಕೆ ಪೊಲೀಸ್ ಪೇದೆ ಮತ್ತು ಹೆಂಡತಿ ಅಮಾಯಕ ಸಣ್ಣ ವ್ಯಾಪಾರಸ್ಥನ ಮೇಲೆ ಹಲ್ಲೆ ಮಾಡಿದ ಘಟನೆ ವಿಜಯಪುರದಲ್ಲಿ ನಡೆದಿದೆ.
ನಗರದ ಗಾಂಧಿ ಚೌಕ ಬಳಿ ಅಪ್ರಾಪ್ತ ಬಾಲಕ ಶೋಹೆಲ್ ಹುಸೇನ್ ರಾಮಪುರ್ ಎಂಬಾತನ ಮೇಲೆ ಹಲ್ಲೆ ಮಾಡಿದ್ದಾರೆ. ಮೆಕ್ಕೆತೆನೆ(ಜೋಳ)ವನ್ನ ಸರಿಯಾಗಿ ಬೇಯಿಸಿ ಕೊಡಲಿಲ್ಲ ಅನ್ನೋ ಕಾರಣಕ್ಕೆ ಬಾಲಕನ ಮೇಲೆ ಗಾಂಧಿಚೌಕ ಪೊಲೀಸ್ ಪೇದೆ ಎಸ್ಎಸ್ ಸಾಲೋಡ್ಗಿ ಮತ್ತು ಪತ್ನಿ ಸೇರಿ ಹಲ್ಲೆ ನಡೆಸಿದ್ದಾರೆ.
ಸದ್ಯ ಹಲ್ಲೆಗೊಳಗಾದ ಬಾಲಕ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಆದ್ರೆ ಹಲ್ಲೆ ಮಾಡಿದ ಪೇದೆ ಮೇಲೆ ದೂರು ದಾಖಲಿಸಲು ಹೋದರೆ ಗಾಂಧಿ ಚೌಕ ಪೊಲೀಸರು ಮಾತ್ರ ದೂರು ದಾಖಲಿಸದೆ ಬಾಲಕನ ಕುಟುಂಬಸ್ಥರನ್ನು ನಿಂದಿಸಿ ಕಳಿಸಿದ್ದಾರೆ ಎನ್ನಲಾಗಿದೆ. ಇದರಿಂದ ನ್ಯಾಯಕ್ಕಾಗಿ ಹಲ್ಲೆಗೊಳಗಾದ ಬಾಲಕ ಮತ್ತು ಕುಟುಂಬಸ್ಥರು ಗೋಗರೆಯುತ್ತಿದ್ದಾರೆ.