ಮುಂಬೈ: ಬಿಜೆಪಿ ಮತ್ತು ಆರ್ಎಸ್ಎಸ್ಗೆ ಸಂವಿಧಾನವು ಖಾಲಿಯಾಗಿ ಕಾಣಬಹುದು. ಆದ್ರೆ ಕಾಂಗ್ರೆಸ್ ಮತ್ತು ಇಂಡಿಯಾ ಒಕ್ಕೂಟಕ್ಕೆ ಅದು ದೇಶದ DNA ಎಂದು ರಾಹುಲ್ ಗಾಂಧಿ (Rahul Gandhi) ತಿರುಗೇಟು ನೀಡಿದ್ದಾರೆ. ಸಂವಿಧಾನದ (Constitution) ಖಾಲಿ ಪ್ರತಿ ಎಂಬ ಬಿಜೆಪಿಯ ಟೀಕೆಗೆ ರಾಹುಲ್ ಗಾಂಧಿ ಪ್ರತ್ಯುತ್ತರ ನೀಡಿದರು.
ಈ ಹೋರಾಟವು ಸಿದ್ಧಾಂತದ ಹೋರಾಟ, ಒಂದು ಕಡೆ ಕಾಂಗ್ರೆಸ್ (Congress) ಮತ್ತು ಇಂಡಿಯಾ ಒಕ್ಕೂಟ ಇದೆ ಇನ್ನೊಂದು ಕಡೆ ಬಿಜೆಪಿ-ಆರ್ಎಸ್ಎಸ್ (BJP-RSS) ಇದೆ. ದೇಶವು ಸಂವಿಧಾನದ ಮೂಲಕ ನಡೆಯಬೇಕು ಎಂದು ನಾವು ಹೇಳುತ್ತೇವೆ. ಆದರೆ ಪ್ರಧಾನಿ ಏನನ್ನೂ ಬರೆಯದೆ ಖಾಲಿ ಪುಸ್ತಕ ಎಂದು ಹೇಳುತ್ತಾರೆ. ಈ ಪುಸ್ತಕವು ಆರ್ಎಸ್ಎಸ್-ಬಿಜೆಪಿಗೆ ಮಾತ್ರ ಖಾಲಿಯಾಗಿದೆ, ನಮಗೆ ಇದು ದೇಶದ ಡಿಎನ್ಎ (DNA) ಎಂದು ರಾಹುಲ್ ಗಾಂಧಿ ಹೇಳಿದರು.
ಸಂವಿಧಾನವು ಅಂಬೇಡ್ಕರ್, ಫುಲೆಜಿ, ಶಿವಾಜಿ ಮಹಾರಾಜ್, ಭಗವಾನ್ ಬುದ್ಧ, ಮಹಾತ್ಮ ಗಾಂಧಿ ಅವರ ಚಿಂತನೆಗಳನ್ನು ಒಳಗೊಂಡಿದೆ. ಇದು ನಮಗೆ ಬರೀ ಪುಸ್ತಕವಲ್ಲ, ನಮಗೆ ಇದು ಸಾವಿರಾರು ವರ್ಷಗಳ ಹಿಂದಿನ ಚಿಂತನೆ ಮತ್ತು ಅದರಲ್ಲಿ ಏನು ಬರೆಯಲಾಗಿದೆ ಅದಕ್ಕಾಗಿ ಭಾರತದಲ್ಲಿ ಜನರು ಸಾವಿರಾರು ವರ್ಷಗಳಿಂದ ಸಾಯುತ್ತಿದ್ದಾರೆ ಮತ್ತು ಹೋರಾಡುತ್ತಿದ್ದಾರೆ ಎಂದು ಅವರು ಹೇಳಿದರು. ಇದನ್ನೂ ಓದಿ: ಮೋದಿ ತಮ್ಮ ಜೀವನದಲ್ಲಿ ಒಮ್ಮೆಯೂ ಸಂವಿಧಾನ ಓದಿಲ್ಲ: ರಾಹುಲ್ ಗಾಂಧಿ
ಮಹಾರಾಷ್ಟ್ರ ಜನರ ಸರ್ಕಾರವನ್ನು ಆಡಳಿತ ಪಕ್ಷವು ರಾಜ್ಯದ ಜನತೆಯಿಂದ ಕದ್ದಿದೆ. ಪ್ರಧಾನಿ ಮತ್ತು ಬಿಜೆಪಿಯವರು ಮುಚ್ಚಿದ ಕೋಣೆಗಳಲ್ಲಿ ಈ ಸಂವಿಧಾನವನ್ನು ರಹಸ್ಯವಾಗಿ ಹತ್ಯೆ ಮಾಡಿದ್ದಾರೆ. ಅದಾನಿ ಜೊತೆಗೆ ನಡೆದ ಸಭೆಯಲ್ಲಿ ಶಾಸಕರನ್ನು ಕೋಟ್ಯಂತರ ರೂಪಾಯಿಗಳಿಗೆ ಖರೀದಿಸಲು ನಿರ್ಧರಿಸಲಾಯಿತು. ಇದನ್ನೂ ಓದಿ: ಉತ್ತರ ಪ್ರದೇಶ ಆಸ್ಪತ್ರೆಯಲ್ಲಿ ಅಗ್ನಿ ಅವಘಡ – 10 ಮಕ್ಕಳು ಸಜೀವ ದಹನ
ಮಹಾರಾಷ್ಟ್ರದ ಸರ್ಕಾರವನ್ನು ಜನರಿಂದ ಏಕೆ ಕದ್ದಿದೆ ಎಂದು ನಾನು ನಿಮಗೆ ಹೇಳುತ್ತೇನೆ. ನಮ್ಮ ಸರ್ಕಾರವನ್ನು ‘ಧಾರಾವಿ’ಗಾಗಿ ಕದಿಯಲಾಗಿದೆ. ಬಿಜೆಪಿಯ ಜನರು – ಪ್ರಧಾನಿ ಮೋದಿ, ಅಮಿತ್ ಶಾ, ಧಾರಾವಿಯ ಬಡವರ ಭೂಮಿಯನ್ನು ಅದಾನಿಗೆ ನೀಡಲು ಬಯಸಿದ್ದರು. ಹೀಗಾಗಿ ಸ್ನೇಹಿತ ಗೌತಮ್ ಅದಾನಿ ಮಹಾ ಸರ್ಕಾರವನ್ನು ಕೆಡವಿದರು ಎಂದು ರಾಹುಲ್ ಗಾಂಧಿ ಆರೋಪಿಸಿದರು.
ಪ್ರಧಾನಿ ತಮ್ಮ ಭಾಷಣಗಳಲ್ಲಿ ಹೇಳಿದ್ದನ್ನೇ ಹೇಳುತ್ತಿದ್ದಾರೆ ಎಂದು ನನ್ನ ಸಹೋದರಿ ಹೇಳಿದರು. ನರೇಂದ್ರ ಮೋದಿ ಅವರಿಗೆ ಜ್ಞಾಪಕ ಶಕ್ತಿ ಕಡಿಮೆಯಾಗಿದೆ ಎಂದು ನಾನು ಹೇಳಿದರೆ ಸಂಜೆ ಟಿವಿಗಳಲ್ಲಿ ಮೋದಿ ಜ್ಞಾಪಕ ಹೆಚ್ಚಿದೆ ಎಂದು ಸುದ್ದಿ ಬರುತ್ತದೆ. ಅವರಿಗೆ ಒಮ್ಮೆ ಹೇಳಿದರೆ 70 ವರ್ಷ ನೆನಪಿನಲ್ಲಿಡಬಲ್ಲರು ಎಂದು ಹೇಳುತ್ತಾರೆ ಎಂದು ವ್ಯಂಗ್ಯ ಮಾಡಿದರು. ಇದನ್ನೂ ಓದಿ: ದೆಹಲಿಗೆ ಹೊರಟ ನಂದಿನಿ – ನ.21ರಿಂದ ರಾಷ್ಟ್ರ ರಾಜಧಾನಿಯಲ್ಲೂ ಸಿಗಲಿದೆ ಕೆಎಂಎಫ್ ಉತ್ಪನ್ನಗಳು