ಉತ್ತರ ಕರ್ನಾಟಕ ಆಳುವ, ಆಯ್ಕೆಯಾಗುವ ಕನಸು ಕೇವಲ ಭ್ರಮೆ: ಬಿಎಸ್‍ವೈಗೆ ಎಚ್.ಕೆ ಪಾಟೀಲ್ ಟಾಂಗ್

Public TV
1 Min Read
H K PATIL AND BSY

ಗದಗ: ಉತ್ತರ ಕರ್ನಾಟಕದಲ್ಲಿ ಆಳುವ, ಆಯ್ಕೆಯಾಗುವ ಕನಸು ಕೇವಲ ಭ್ರಮೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಎಚ್.ಕೆ ಪಾಟೀಲ್ ಟಾಂಗ್ ನೀಡಿದ್ದಾರೆ.

ಉತ್ತರ ಕರ್ನಾಟಕದಲ್ಲಿ ಬಿಎಸ್‍ವೈ ಸ್ಪರ್ಧಿಸಲಿದ್ದಾರೆಂಬ ಹಿನ್ನಲೆಯಲ್ಲಿ ಇಂದು ಗದಗದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಉತ್ತರ ಕರ್ನಾಟಕ ನಾಯಕರನ್ನ ಅವಮಾನಿಸುವ ಕೆಲಸ ಬಿಜೆಪಿ ಮಾಡ್ತಿದೆ. ಈ ಹಿಂದೆ ಸ್ಪರ್ಧಿಸಿದ್ದ ಘಟಾನುಘಟಿಗಳು ಉತ್ತರ ಕರ್ನಾಟಕದಲ್ಲಿ ಸೋತು ಸುಣ್ಣವಾಗಿದ್ದಾರೆ. ಇದೇ ಇತಿಹಾಸ ಮುಂದೇಯೂ ಮರುಕಳಿಸಲಿದೆ ಅಂದ್ರು.

ಉತ್ತರ ಕರ್ನಾಟಕ ಆಳುವ, ಆಯ್ಕೆಯಾಗುವ ಕನಸು ಕೇವಲ ಭ್ರಮೆ. ಉತ್ತರ ಕರ್ನಾಟಕ ರಾಜಕೀಯದಲ್ಲಿ ಲಘುವಾಗಿ ಪರಿಣಮಿಸಬಾರದು. ಲಘುವಾಗಿ ಕಂಡವರಿಗೆ ಉತ್ತರ ಕರ್ನಾಟಕ ಉತ್ತರ ನೀಡುತ್ತೆ. ಇಲ್ಲಿ ಹಣ ಇದ್ದ ರಾಜಕಾರಣಿಗಳು ಕಡಿಮೆ. ಆದ್ರೆ ಜನಪ್ರೀಯತೆ ಪಡೆದ ಜನಪ್ರತಿನಿಧಿಗಳು ಹೆಚ್ಚು ಅಂತ ಹೇಳಿದ್ರು.

Share This Article