Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Bengaluru City

ಪಾಕ್‌ ಏಜೆಂಟರ ರೀತಿ ಕಾಂಗ್ರೆಸ್ ನಾಯಕರು ಮಾತಾಡ್ತಿದ್ದಾರೆ: ರವಿಕುಮಾರ್ ಕಿಡಿ

Public TV
Last updated: May 17, 2025 4:04 pm
Public TV
Share
3 Min Read
N Ravikumar
SHARE

ಬೆಂಗಳೂರು: ಭಾರತ ಹಾಗೂ ಭಾರತೀಯ ಸೇನೆಯ ವಿರುದ್ಧ ಕಾಂಗ್ರೆಸ್ (Congress) ನಾಯಕರು ಪಾಕಿಸ್ತಾನದ (Pakistan) ಏಜೆಂಟ್ ‌ರೀತಿ ವರ್ತನೆ ಮಾಡುತ್ತಿದ್ದಾರೆ ಎಂದು ವಿಧಾನ ಪರಿಷತ್ ವಿಪಕ್ಷ ಸಚೇತಕ ರವಿಕುಮಾರ್ (N.Ravikumar) ವಾಗ್ದಾಳಿ ನಡೆಸಿದ್ದಾರೆ.

ಕಾಂಗ್ರೆಸ್ ಶಾಸಕ ಕೊತ್ತೂರು ಮಂಜುನಾಥ್ (Kothur Manjunath), ಸಚಿವ ಪ್ರಿಯಾಂಕ್ ಖರ್ಗೆ, ಸಂತೋಷ್ ಲಾಡ್, ದಿನೇಶ್ ಗುಂಡೂರಾವ್ ಹೇಳಿಕೆ ವಿಚಾರವಾಗಿ ಅವರು ಪ್ರತಿಕ್ರಿಯಿಸಿದರು. ಈ ವೇಳೆ, ಪಾಕಿಸ್ತಾನ ಪರವಾದ ವಕ್ತಾರರು ರಾಜ್ಯದಲ್ಲಿ ಜಾಸ್ತಿ ಆಗಿದ್ದಾರೆ. ಮಂಜುನಾಥ್, ಸಂತೋಷ್ ಲಾಡ್, ಪ್ರಿಯಾಂಕ್ ಖರ್ಗೆ ಪಾಕ್ ವಕ್ತಾರರು. ಪಾಕಿಸ್ತಾನದವರು ಮಾತಾಡಿದ ರೀತಿ ಮಾತಾಡ್ತಿದ್ದಾರೆ. ಪಾಕಿಸ್ತಾನವೇ ಭಾರತ‌ ದಾಳಿ ಒಪ್ಪಿಕೊಂಡಿದೆ.‌ ಉಗ್ರರ ಹತ್ಯೆ ಆಗಿದ್ದಕ್ಕೆ ಅವರ ಕುಟುಂಬಕ್ಕೆ ಪಾಕ್‌ ಸರ್ಕಾರ ಹಣ ಕೊಟ್ಟಿದೆ‌. ಮಂಜುನಾಥ್ ಅವರು ಸಾಕ್ಷಿ ಕೇಳ್ತಾರೆ. ಪ್ರಿಯಾಂಕ್ ಖರ್ಗೆ ಯಾರನ್ನ ನಂಬಬೇಕು ಅಂತ ಕೇಳ್ತಾರೆ. ಖರ್ಗೆ ಅವರೇ ನೀವು ಭಾರತದವರನ್ನ ನಂಬುತ್ತಾರಾ ಪಾಕಿಸ್ತಾನವನ್ನ ನಂಬುತ್ತಿರಾ? ನಿಮ್ಮ ಮಾತು ಕೇಳಿದ್ರೆ ಪಾಕಿಸ್ತಾನ ಪರ ಇದ್ದಂತೆ ಆಗ್ತಿದೆ.ಪ್ರಿಯಾಂಕ್ ಖರ್ಗೆ ಮಾತು ಕೇಳಿ ಕ್ಷೇತ್ರದ ಮತದಾರರೇ ಮತ ಹಾಕಿ ತಪ್ಪು ಮಾಡಿದ್ದೇವೆ ಅಂತಿದ್ದಾರೆ ಅನಿಸುತ್ತಿದೆ ಎಂದು ಅಸಮಾಧಾನ ಹೊರಹಾಕಿದರು. ಇದನ್ನೂ ಓದಿ: ಕಾಂಗ್ರೆಸ್‌ನವ್ರಿಗೆ ಪಾಕ್‌ ಫ್ರೀ ವೀಸಾ ಕೊಡುತ್ತೆ, ಮಂಜುನಾಥ್ ನೋಡ್ಕೊಂಡು ಬರಲಿ: ಯತ್ನಾಳ್ ಕಿಡಿ

Kothur Manjunath

ಕಾಂಗ್ರೆಸ್ ವಿಪಕ್ಷವಾಗಿ ಟೀಕೆ ಮಾಡಿ, ಆದರೆ ಸೈನಿಕರನ್ನ ಬಲಿಕೊಟ್ಟು ಟೀಕೆ ಮಾಡಬೇಡಿ. ದೇಶಕ್ಕೆ ಸೈನಿಕರು ಹುತಾತ್ಮರಾಗಿದ್ದಾರೆ. ಇದು ಕಾಂಗ್ರೆಸ್ ನಾಯಕರು, ಸಚಿವರಿಗೆ ಗೊತ್ತಿಲ್ಲವಾ? ಇವರಿಗೆ ಇತಿಹಾಸ ಗೊತ್ತಿಲ್ಲ. ಮಂಜುನಾಥ್ ಇತಿಹಾಸ ಗೊತ್ತಾ? ಅಡಿ ಜಮೀನಿಗೆ ಎಷ್ಟು ಅಂತ ಮಾತ್ರ ಗೊತ್ತು ಇವರಿಗೆ. ಗೊತ್ತಿಲ್ಲ ಎಂದರೆ ಪಾಕಿಸ್ತಾನದಲ್ಲಿ ಭಯೋತ್ಪಾದನೆ ಹೇಗಿದೆ ಅಂತ ತೋರಿಸೋಕೆ ಕಳಿಸ್ತೀವಿ ಹೋಗಿ ಬನ್ನಿ. ಮತ ಬ್ಯಾಂಕ್‌ಗೆ ಹೀಗೆ ಪಾಕಿಸ್ತಾನ ಪರವಾಗಿ ಗುಲಾಮಿ ತರ ವರ್ತನೆ ಸರಿಯಲ್ಲ ಎಂದು ಕಿಡಿಕಾರಿದ್ದಾರೆ.

ಪ್ರಿಯಾಂಕ್ ಖರ್ಗೆ ಬಗ್ಗೆ ಅವರ ತಂದೆ ವ್ಯಥೆ ಪಡುತ್ತಿದ್ದಾರೆ ಅನ್ನಿಸುತ್ತೆ. ಮರಿ ಖರ್ಗೆ ಅವರೇ ದೇಶಕ್ಕೆ ಅಪಮಾನ ‌ಮಾಡ್ತಿದ್ದೀರಾ. ಸಂತೋಷ್ ಲಾಡ್ ಅವರಿಗೆ ಸಚಿವ ಸ್ಥಾನದಿಂದ ತೆಗೆಯುತ್ತಾರೆ ಎಂಬ ಭಯ ಇರಬಹುದು. ಅದಕೋಸ್ಕರ ಅವರು ಪಾಕಿಸ್ತಾನ ಪರ ಮಾತಾಡ್ತಿದ್ದಾರೆ. ನಿಮಗೇನು ಅವಾರ್ಡ್ ಸಿಗೊಲ್ಲ. ನಿಮ್ಮನ್ನ ಡಿಸಿಎಂ ಆಗಿ ಮಾಡೋದಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.

ಸಾಧನ ಸಮಾವೇಶ ಮಾಡೋಕೆ ಹೊರಟಿದ್ದಾರೆ. ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಅಂತ ಕೂಗಿರೋಕೆ ಸಾಧನೆ ಸಮಾವೇಶನಾ? PFI ಅವರ ಮೇಲಿನ ಕೇಸ್ ತೆಗೆದಿದ್ದಕ್ಕೆ ಸಾಧನೆ ಸಮಾವೇಶನಾ? ನಿಮ್ಮ ಸಾಧನೆ ಏನಿದೆ? ಎಷ್ಟು ಅಭಿವೃದ್ಧಿ ಆಗಿದೆ ಹೇಳಿ. ಗ್ಯಾರಂಟಿ ಗ್ಯಾರಂಟಿ ಅಂತೀರಾ ಏನ್ ಗ್ಯಾರಂಟಿ. ಭಯೋತ್ಪಾದಕರ ಕೇಸ್ ತೆಗೆದಿದ್ದು ಗ್ಯಾರಂಟಿನಾ? ಲಾಡ್, ಖರ್ಗೆ, ದಿನೇಶ್ ಗುಂಡೂರಾವ್ ಅವರೇ ನಿಮ್ಮ ಸರ್ಕಾರದ ಅಭಿವೃದ್ಧಿ ಬಗ್ಗೆ ಮಾತಾಡಿ. ಯಾಕೆ ಮೋದಿ ವಿರುದ್ಧ ಮಾತಾಡ್ತೀರಾ? ಪಾಕಿಸ್ತಾನ ಪರವಾದ ಗುಲಾಮಿ ತನ ಒಳ್ಳೆಯದಲ್ಲ ಎಂದಿದ್ದಾರೆ.

ಕಾಂಗ್ರೆಸ್ ಹೈಕಮಾಂಡ್ ‌ಇದ್ದರೆ ಸೇನೆ ಬಗ್ಗೆ ಮಾತಾಡಿರೋದರ ಬಗ್ಗೆ ತನಿಖೆ ಮಾಡಲಿ. ಯಾವ ರೋಗ ಬಂದಿದೆ ಅಂತ ತನಿಖೆ ಮಾಡಲಿ. ಟ್ರಂಪ್ ಹೇಳಿದ್ದು, ಪಾಕಿಸ್ತಾನ ಪ್ರಧಾನಿ ಹೇಳಿದ್ದೇ ನಿಜನಾ? ಮೋದಿ ಹೇಳೋದು ನಂಬೊಲ್ಲವಾ? ನಾಚಿಕೆ ಆಗ್ಬೇಕು ಕಾಂಗ್ರೆಸ್‌ಗೆ. ಕಾಂಗ್ರೆಸ್‌ನ ದಡ್ಡತನದ ವರ್ತನೆ ಇದು. ಕಾಂಗ್ರೆಸ್‌ಗೆ ರೋಗ ಬಂದಿದೆ. ಬಿಜೆಪಿಯನ್ನು ಟೀಕೆ ಮಾಡೋ ಭರದಲ್ಲಿ ಸೇನೆಯನ್ನ ಹೀಯಾಳಿಸೋದು, ಸೈನಿಕರನ್ನ ಕುಗ್ಗಿಸೋದು ಸರಿಯಲ್ಲ. ರಾಹುಲ್ ಗಾಂಧಿ ಭಾರತದ ಬಗ್ಗೆ ಟೀಕೆ ಮಾಡ್ತಿದ್ದಾರೆ. ಕಾಂಗ್ರೆಸ್‌ನವರು ಹೀಗೆ ಮಾತಾಡೋದು ನೋಡಿದ್ರೆ ಕಾಂಗ್ರೆಸ್ ‌ಪಾಕಿಸ್ತಾನದ ರೂಲಿಂಗ್ ಪಾರ್ಟಿ ಏಜೆಂಟ್ ಆಗಿದೆ. ಮಿತ್ರ ಪಕ್ಷ ಆಗಿದೆ ಅಥವಾ ಪಾಕಿಸ್ತಾನದ ರೂಲಿಂಗ್ ಪಾರ್ಟಿ ಜೊತೆ ಕಾಂಗ್ರೆಸ್ ಮೈತ್ರಿ ಮಾಡಿಕೊಂಡಿದೆಯೇ ಎಂದು ಪ್ರಶ್ನಿಸಿದ್ದಾರೆ.

ಭಯೋತ್ಪಾದಕರನ್ನು ಸೇನೆ ಹೊಡೆದು ಹಾಕಿದೆ. ಸೇನೆ ನಿರ್ಧಾರ ಮಾಡಿದೆ ಅವರಿಗೆ ಬಿಡಿ. ಇಂದಿರಾಗಾಂಧಿ ತರಹ ಶಿಮ್ಲಾ ಒಪ್ಪಂದವನ್ನು ಮಾಡಿದ ರೀತಿ ಮೋದಿಯವರು ಮಾಡೋದಿಲ್ಲ. ರಾಹುಲ್ ಗಾಂಧಿ ರೀತಿ ದೇಶಕ್ಕೆ ಅಪಕೀರ್ತಿ ತರುವ ಕೆಲಸವನ್ನು ಮೋದಿ ಮಾಡೋದಿಲ್ಲ ಎಂದು ತೀವ್ರ ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಭಯೋತ್ಪಾದನೆ ವಿರುದ್ಧ ಸರ್ವಪಕ್ಷ ನಿಯೋಗ – ಕಾಂಗ್ರೆಸ್‌ ಕೊಟ್ಟ 4 ಹೆಸರು ಬಿಟ್ಟು ಶಶಿ ತರೂರ್‌ ಆಯ್ಕೆಮಾಡಿದ ಕೇಂದ್ರ!

TAGGED:bjpcongressindiaKothur ManjunathN.RavikumarOperation Sindoorpakistan
Share This Article
Facebook Whatsapp Whatsapp Telegram

Cinema Updates

Kamal Haasan
ಕಮಲ್‌ ಹಾಸನ್‌ಗೆ ಮತ್ತೆ ಶಾಕ್‌ – ತುರ್ತು ವಿಚಾರಣೆ ನಡೆಸಲ್ಲ ಎಂದ ಸುಪ್ರೀಂ ಕೋರ್ಟ್‌
21 hours ago
Chitradurga Renukaswamy Father
ಮಗನ ಸಾವಿನ ನೋವು ನಿರಂತರವಾಗಿ ಕಾಡ್ತಿದೆ – ಮೃತ ರೇಣುಕಾಸ್ವಾಮಿ ತಂದೆ
2 days ago
virat kohli sumalatha ambareesh
ಕಾಲ್ತುಳಿತ ಪ್ರಕರಣದಲ್ಲಿ ಕೊಹ್ಲಿ ವಿರುದ್ಧ ಮಾತನಾಡುವುದು ಮೂರ್ಖತನ: ಸುಮಲತಾ ಬೇಸರ
2 days ago
madenur manu
ಮಡೆನೂರು ಮನು ಪರಪ್ಪನ ಅಗ್ರಹಾರ ಜೈಲಿನಿಂದ ರಿಲೀಸ್
3 days ago

You Might Also Like

rahul gandhi siddaramaiah dk shivakumar
Bengaluru City

ಸಿದ್ದು ಸಂಪುಟಕ್ಕೆ ನಡೆಯುತ್ತಾ ಮೇಜರ್‌ ಸರ್ಜರಿ? – 10 ಸಚಿವರಿಗೆ ಕೊಕ್‌ ಸಾಧ್ಯತೆ

Public TV
By Public TV
11 minutes ago
E Khata BBMP
Bengaluru City

ಕಟ್ಟಡ ನಕ್ಷೆ ಮಂಜೂರಾತಿಗೆ ಇ-ಖಾತಾ ಕಡ್ಡಾಯ – ಜುಲೈ 1ರಿಂದ ಬಿಬಿಎಂಪಿಯ ಹೊಸ ರೂಲ್ಸ್ ಜಾರಿ

Public TV
By Public TV
29 minutes ago
Nelamangala School Bus Overturn
Bengaluru City

Nelamangala | 2 ಸ್ಕೂಲ್ ಬಸ್‌ಗಳ ನಡುವೆ ಅಪಘಾತ – ಮಕ್ಕಳಿಗೆ ಸಣ್ಣಪುಟ್ಟ ಗಾಯ

Public TV
By Public TV
35 minutes ago
Weather 1
Bengaluru City

ರಾಜ್ಯದಲ್ಲಿ ಮುಂದಿನ 4 ದಿನ ಮಳೆ ಸಾಧ್ಯತೆ – ಇಂದು ರಾಜ್ಯಾದ್ಯಂತ ಯೆಲ್ಲೋ ಅಲರ್ಟ್

Public TV
By Public TV
58 minutes ago
Chikkamagaluru
Chikkamagaluru

ಟ್ರಕ್ಕಿಂಗ್ ವೇಳೆ ಕಾಡಿನಲ್ಲಿ ನಾಪತ್ತೆಯಾದ ಚಿತ್ರದುರ್ಗದ 10 ಮೆಡಿಕಲ್ ವಿದ್ಯಾರ್ಥಿಗಳು – 6 ಗಂಟೆ ಬಳಿಕ ಪತ್ತೆ

Public TV
By Public TV
2 hours ago
Nikhil Kumaraswamy
Bengaluru City

ಸಿದ್ದರಾಮಯ್ಯ ಅಧಿಕಾರದ ಸಿಂಹಾಸನವನ್ನು ಆರಿಸಿಕೊಂಡರೇ ಹೊರತು ಜನಸಾಮಾನ್ಯರನ್ನಲ್ಲ: ನಿಖಿಲ್ ಕಿಡಿ

Public TV
By Public TV
2 hours ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?