ಮಂಡ್ಯ ಸಂಸದ ಸಿ.ಎಸ್ ಪುಟ್ಟರಾಜುಗೆ ಸಂಕಷ್ಟ

Public TV
1 Min Read
CS Puttaraju

ಮಂಡ್ಯ: ಸಂಸದ ಸಿ ಎಸ್ ಪುಟ್ಟರಾಜು ಅವರಿಗೆ ಮತ್ತೊಂದು ಸಂಕಷ್ಟವೊಂದು ಎದುರಾಗಿದೆ. ಆರ್ ಟಿ ಐ ಕಾರ್ಯಕರ್ತ ರವೀಂದ್ರ ಎಂಬವರು ಬುಧವಾರ ಪುಟ್ಟರಾಜು ಅವರ ವಿರುದ್ಧ ಸಿಬಿಐನಲ್ಲಿ ದೂರು ದಾಖಲಿಸಿದ್ದಾರೆ.

ಪಾಂಡವಪುರ ತಾಲೂಕು ಬೇಬಿ ಬೆಟ್ಟದ ಅಮೃತ ಮಹಲ್ ಪ್ರದೇಶದಲ್ಲಿ ಸಂಸದರ ಪತ್ನಿ ಮಾಲೀಕತ್ವದ ಎಸ್.ಟಿ.ಜೆ ಸ್ಟೋನ್ ಕ್ರಷರ್‍ಗೆ ಕಾನೂನು ಬಾಹಿರವಾಗಿ 10 ಲಕ್ಷ ರೂ ಸಬ್ಸಿಡಿ ಮತ್ತು 1.50 ಕೋಟಿ ರೂ ಸಾಲ ನೀಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ದಾಖಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಅಂದಿನ ಮಂಡ್ಯ ಡಿಸಿ ಜಿಯಾವುಲ್ಲಾ ಮತ್ತು ಬ್ಯಾಂಕ್ ಮ್ಯಾನೇಜರ್ ವಿರುದ್ಧ ತನಿಖೆ ನಡೆಸಬೇಕೆಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

RTI Raveendra 2

ಬೇಬಿ ಬೆಟ್ಟದ ಕಾವಲ್ ಪ್ರದೇಶದ ಸರ್ವೆ ನಂಬರ್ 1 ರಲ್ಲಿನ 1,623 ಎಕರೆ ಪ್ರದೇಶದ ಖಾಸಗಿ ಆಸ್ತಿಯಾಗಿದೆ. ಇದರಲ್ಲಿ 1,487 ಎಕರೆ ಜಮೀನು ಬಿ ಖರಾಬು ಎಂದು ದಾಖಲಾಗಿದ್ದರೂ, ಅಧಿಕಾರಿಗಳ ಕುಮ್ಮಕ್ಕಿನಿಂದ ಅಕ್ರಮವಾಗಿ ದಾಖಲೆಗಳನ್ನ ಸೃಷ್ಟಿಸಿಕೊಂಡು ಕಾನೂನು ಬಾಹಿರವಾಗಿ ಸಾಲ ಪಡೆದಿದ್ದಾರೆ ಅಂತಾ ಆರೋಪಿಸಲಾಗಿದೆ.

ಪ್ರಕರಣದಲ್ಲಿ ಬ್ಯಾಂಕ್ ಮ್ಯಾನೇಜರರ್ ಜಯಚಂದ್ರನ್, ಆಗಿನ ಮಂಡ್ಯ ಜಿಲ್ಲಾಧಿಕಾರಿ ಜಿಯಾವುಲ್ಲಾ ಹಾಗೂ ಸಂಸದ ಸಿ ಎಸ್ ಪುಟ್ಟರಾಜು ಸೇರಿದಂತೆ ಹಲವರು ಭಾಗಿಯಾಗಿದ್ದು. ಈ ಸಂಬಂಧ ಸಿಬಿಐ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳುವಂತೆ 18 ಪುಟಗಳ ದಾಖಲೆ ಸಮೇತ ರವಿಂದ್ರ ದೂರು ಸಲ್ಲಿಸಿದ್ದಾರೆ.

RTI Raveendra 1

Share This Article
Leave a Comment

Leave a Reply

Your email address will not be published. Required fields are marked *