ಬೆಂಗಳೂರು: ಕೆಲವೇ ಗಂಟೆಗಳಲ್ಲಿ ಶುರುವಾಗಲಿರುವ ಕರಗ ಉತ್ಸವದಲ್ಲಿ (Bengaluru Karaga) ಸಿಎಂ ಸಿದ್ದರಾಮಯ್ಯ (Sidddaramaiah) ಭಾಗಿಯಾದರು. ಧರ್ಮರಾಯಸ್ವಾಮಿ ದೇವಾಲಯಕ್ಕೆ ತೆರಳಿ ಸಿಎಂ ವಿಶೇಷ ಪೂಜೆ ಸಲ್ಲಿಸಿದರು.
ಈ ಬಾರಿಯ ಕರಗ ಉತ್ಸವವು ಒಂದು ಗಂಟೆ ತಡವಾಗಿ ಆರಂಭವಾಗಲಿದ್ದು, ಮಧ್ಯರಾತ್ರಿ 1:30ಕ್ಕೆ ಕರಗ ಆರಂಭವಾಗಲಿದೆ. ಬೆಳಗ್ಗೆ 7:30 ರಿಂದ 8 ಗಂಟೆಗೆ ಕರಗ ಮತ್ತೆ ದೇವಾಲಯ ತಲುಪಲಿದೆ. ಇದನ್ನೂ ಓದಿ: ಕರಗ ಶಕ್ತೋತ್ಸವಕ್ಕೆ ರಾತ್ರಿ 12:30ಕ್ಕೆ ಚಾಲನೆ, ಸಿಎಂ-ಡಿಸಿಎಂ ಬರ್ತಾರೆ: ರಾಮಲಿಂಗಾರೆಡ್ಡಿ
ಬೆಂಗಳೂರು ಕರಗ ಉತ್ಸವ ಶಕ್ತೋತ್ಸವಕ್ಕೆ ಅಂತಿಮ ಹಂತದ ಸಿದ್ಧತೆ ನಡೆದಿದೆ. ಈ ನಡುವೆ ವರುಣಾಗಮನವಾಗಿದ್ದು, ಮಳೆಯ ನಡುವೆಯೇ ರಥಕ್ಕೆ ಸಿಂಗಾರ ಹಾಗೂ ಹೂವಿನ ಅಲಂಕಾರ ಮಾಡಲಾಗುತ್ತಿದೆ.