ಚಿಕ್ಕಬಳ್ಳಾಪುರಕ್ಕೆ ಸಿಎಂ ಭೇಟಿ: ರಾಶಿ ರಾಶಿ ಬೀಡಿ, ಸಿಗರೇಟ್, ಮದ್ಯದ ಪ್ಯಾಕೆಟ್ ಜಪ್ತಿ

Public TV
1 Min Read
CKB SEIZ 6

ಚಿಕ್ಕಬಳ್ಳಾಪುರ:  ಬೆಂಗಳೂರು ಗ್ರಾಮಾಂತರ ದೊಡ್ಡಬಳ್ಳಾಪುರ ನಗರದಲ್ಲಿ ಇಂದು ಸಿಎಂ ಸಿದ್ದರಾಮಯ್ಯ ವಿವಿಧ ಕಾಮಗಾರಿಗಳ ಉದ್ಘಾಟನೆಗೆ ಆಗಮಿಸಿದ್ದರು. ಈ ಹಿನ್ನೆಲೆಯಲ್ಲಿ ನಗರದ ಭಗತ್‍ಸಿಂಗ್ ಕ್ರೀಡಾಂಗಣದಲ್ಲಿ ಬೃಹತ್ ವೇದಿಕೆಯನ್ನ ನಿರ್ಮಾಣ ಮಾಡಲಾಗಿದ್ದು, ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.

CKB SEIZ 5

ಭದ್ರತೆ ದೃಷ್ಟಿಯಿಂದ ಸಿಎಂ ಕಾರ್ಯಕ್ರಮಕ್ಕೆ ಆಗಮಿಸುತ್ತಿರುವ ಸಾರ್ವಜನಿಕರನ್ನ ಕ್ರೀಡಾಂಗಣದ ಪ್ರವೇಶ ದ್ವಾರದಲ್ಲಿ ತೀವ್ರ ತಪಾಸಣೆ ನಡೆಸಲಾಗಿತ್ತು. ತಪಾಸಣೆ ವೇಳೆ ಸಾರ್ವಜನಿಕರ ಬಳಿ ರಾಶಿ ರಾಶಿ ಬೀಡಿ, ಬೆಂಕಿಪಟ್ಟಣ, ಸಿಗರೇಟ್ ಪಾಕೆಟ್, ಮದ್ಯದ ಪಾಕೆಟ್‍ಗಳು ದೊರೆತಿದ್ದು ಎಲ್ಲವನ್ನೂ ಪೊಲೀಸರು ವಶಪಡಿಸಿಕೊಂಡಿದ್ದಾರೆ.

CKB SEIZ 10

ಪ್ರವೇಶ ದ್ವಾರದಲ್ಲೇ ಬೀಡಿ, ಬೆಂಕಿ ಪಟ್ಟಣ, ಗುಟ್ಕಾ, ಮದ್ಯದ ಪಾಕೆಟ್ ಗಳನ್ನು ರಾಶಿ ಮಾಡಿದ್ದು, ಬೀಡಿ ಪಾಕೆಟ್ ಗಳನ್ನ ಪೊಲೀಸರ ಕಣ್ಣು ತಪ್ಪಿಸಿ ಹಲವರು ಕದ್ದು ಒಯ್ದಿದ್ದಾರೆ. ಆದ್ರೆ ಬೀಡಿ ಸಿಗರೇಟನ್ನು ಕಸಿದುಕೊಂಡ ಪೊಲೀಸರ ಕ್ರಮಕ್ಕೆ ಹಲವರು ಆಕ್ಷೇಪ ಕೂಡ ವ್ಯಕ್ತಪಡಿಸಿದ್ದು ಕಂಡು ಬಂತು.

CKB SEIZ 5 1

CKB SEIZ 7

CKB SEIZ 3

CKB SEIZ 2

 

 

Share This Article
Leave a Comment

Leave a Reply

Your email address will not be published. Required fields are marked *