ಸುಮಲತಾಗೆ CRPF ಅಷ್ಟೇ ಯಾಕೆ ಅಮೆರಿಕದ ಅಧ್ಯಕ್ಷರನ್ನೂ ಸಂಪರ್ಕ ಮಾಡ್ಲಿ- ಸಿಎಂ ಲೇವಡಿ

Public TV
2 Min Read
CRPF 1

ಮಂಡ್ಯ: ಸಿಆರ್‌ಪಿಎಫ್ ಒಂದೇ ಅಲ್ಲ. ಬೇಕಿದ್ರೆ ಅಮೆರಿಕದ ಅಧ್ಯಕ್ಷರಿಗೆ ಹೇಳಿ ಅಲ್ಲಿಯ ಕಮಾಂಡೋಗಳನ್ನು ಕೂಡ ನರೇಂದ್ರ ಮೋದಿಯವರು ಏರ್ಪಾಡು ಮಾಡಿ ಕಳುಹಿಸಿ ಕೊಡೋದು ಸೂಕ್ತ ಎಂದು ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಲೇವಡಿ ಮಾಡಿದ್ದಾರೆ.

ನಗರದ ಮದ್ದೂರಿನಲ್ಲಿ ಮಗ ನಿಖಿಲ್ ಪರ ಮತಯಾಚನೆಯ ಸಂದರ್ಭದಲ್ಲಿ ಸುಮಲತಾ ಅವರು ತನಗೆ ಸಿಆರ್‌ಪಿಎಫ್ ಭದ್ರತೆ ಬೇಕು ಎಂದು ಕೇಳಿದ್ದಕ್ಕೆ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಸಿಎಂ, ಪಕ್ಷೇತರ ಅಭ್ಯರ್ಥಿ ಸುಮಲತಾ ಯಾಕೆ ಭಯ ಪಡಬೇಕು. ಅವರಿಗೆ ಬೇಕಾದ ಭದ್ರತಾ ವ್ಯವಸ್ಥೆಯನ್ನು ಮೋದಿಯವರೇ ಮಾಡುತ್ತಾರೆ. ಅಮೆರಿಕ ಅಧ್ಯಕ್ಷರ ಜೊತೆ ಮಾತನಾಡಿ ಅಲ್ಲಿನ ಕಮಾಂಡೋಗಳನ್ನ ಕರೆಸಿಕೊಡಲಿ. ನನಗೇನು ಅಭ್ಯಂತರ ಇಲ್ಲ ಎಂದು ಹೇಳಿದ್ರು. ಇದನ್ನೂ ಓದಿ: ಸಿಎಂ ಹೇಳಿಕೆಯಿಂದ ನನಗೆ ಭಯವಾಗ್ತಿದೆ: ಸುಮಲತಾ

sumalatha modi 1

ಸಿಎಂ ಮಾತು ಸೈನ್ಯಕ್ಕೆ ಅವಮಾನ ಮಾಡಲಾಗಿದೆ ಎಂದು ಮೋದಿ ಹೇಳಿಕೆ ಪ್ರತಿಕ್ರಿಯಿಸಿದ ಎಚ್‍ಡಿಕೆ, ಶ್ರೀಮಂತರ ಮಕ್ಕಳು ಯಾರೂ ಸೈನ್ಯಕ್ಕೆ ಸೇರಲ್ಲ. ಇದಕ್ಕೆ ಹುತಾತ್ಮರಾಗಿರೋ ಗುರು ಅವರ ಉದಾಹರಣೆ ನೀಡಿದ್ದೆ. ಆ ಕುಟುಂಬದ ಪರಿಸ್ಥಿತಿ ನೋಡಿಯೇ ನಾನು ಹೇಳಿಕೆ ನೀಡಿರುವುದು. ನಾನು ಹೇಳಿದ್ದರಲ್ಲಿ ಅಸತ್ಯ ಏನಿಲ್ಲ. ನಮ್ಮ ದೇಶದಲ್ಲಿ ಯುವಕರಿಗೆ ಉದ್ಯೋಗ ಸೃಷ್ಟಿ ಮಾಡಿಲ್ಲ. ಹೀಗಾಗಿ ಕೊನೆಗೆ ಸೈನ್ಯಕ್ಕಾದ್ರೂ ಸೇರಿ ಜೀವನ ಮಾಡೋಣ ಎಂದು ಅವರು ಹೋಗ್ತಾರೆ. ಆದ್ರೆ ನರೇಂದ್ರ ಮೋದಿಯವರು ಬಡ ಕುಟುಂಬಗಳ ಮಕ್ಕಳ ಜೊತೆ ಚೆಲ್ಲಾಟವಾಡುತ್ತಾರೆ. ಇದು ವಾಸ್ತವವೇ ಹೊರತು ಯಾರಿಗೂ ಅವಮಾನ ಮಾಡಿಲ್ಲ ಎಂದು ಸಮರ್ಥಿಸಿಕೊಂಡರು. ಇದನ್ನೂ ಓದಿ: ಸೈನಿಕರ ಬಗ್ಗೆ ಲಘುವಾಗಿ ಮಾತನಾಡಿದವರು ಮುಳುಗಿ, ಮುಳುಗಿ ಸಾಯ್ತಾರೆ – ಎಚ್‍ಡಿಕೆಗೆ ಮೋದಿ ತಿರುಗೇಟು

MODI CM

ಗುರು ಧರ್ಮಪತ್ನಿಗೆ ಬೆಂಗಳೂರಲ್ಲಿ ನಾನೇ ಕೆಲಸ ಕೊಡಿಸಿದ್ದೇನೆ. ನರೇಂದ್ರ ಮೋದಿ ಕೆಲಸ ಕೊಡಿಸಿಲ್ಲ. ಕುಟುಂಬದ ಪರಿಸ್ಥಿತಿ ನೋಡೋಕ್ಕಾಗದೆ ನಾನು ಕೆಲಸ ಕೊಡಿಸಿರುವುದು. ಗುರು ಅವರು ಸೈನಿಕ ವೃತ್ತಿಗೆ ಹೋಗೋದಕ್ಕೆ ಕಾರಣವೇನು? ದೊಡ್ಡವರ ಕಮಾಂಡೋಗಳ ವಿಚಾರ ಬೇರೆ, ಆದ್ರೆ ದೇಶದ ಗಡಿಯನ್ನು ಕಾಯುತ್ತಿರುವವರು ಸಾಮಾನ್ಯವಾಗಿ ಎಲ್ಲರೂ ಬಡ ಕುಟುಂಬದವರೇ ಆಗಿರುತ್ತಾರೆ. ಈ ದೇಶದಲ್ಲಿ ಎರಡು ಹೊತ್ತಿನ ಊಟಕ್ಕೂ ಪರದಾಡುವ ಬಡ ಕುಟುಂಬವನ್ನು ನಾನು ಗಮನಿಸಿದ್ದೇನೆ. ನಾನು ಕೂಡ ಪ್ರತಿ ದಿನ ಅಂತವರ ಜೊತೆಯೇ ಬದುಕಿದವನು. ನಾನೇನು ಚಿನ್ನದ ಸ್ಪೂನಿನಲ್ಲಿ ತಿನ್ನೋರ ಜೊತೆ ಬೆರೆತಿಲ್ಲ. ಅವರ ಕಷ್ಟ ನೋಡಿ ಹೇಳಿದ್ದೇನೆ. ಅಂತವರ ಜೊತೆ ಚೆಲ್ಲಾಟವಾಡ ಬೇಡಪ್ಪ ಎಂದು ಪ್ರಧಾನಿಗಳಿಗೆ ಹೇಳಿದ್ದೇನೆ. ಅದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿ ತೆರಳಿದರು.

Share This Article
Leave a Comment

Leave a Reply

Your email address will not be published. Required fields are marked *