ಬೆಂಗಳೂರು: ಬಿ.ಎಸ್ ಯಡಿಯೂರಪ್ಪ ಅವರು ನಾಲ್ಕನೇ ಬಾರಿಗೆ ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರದ ಚುಕ್ಕಾಣಿ ಹಿಡಿದಿದ್ದಾರೆ. ಈಗ ಬಹುಮತ ಸಾಬೀತು ಪಡಿಸಿ, ಸಂಪುಟ ರಚನೆಯಾದರೆ ರಾಜ್ಯದಲ್ಲಿ ಬಿಎಸ್ವೈ ಸರ್ಕಾರ ಸಂಪೂರ್ಣವಾಗಲಿದೆ.
ದೋಸ್ತಿ ಸರ್ಕಾರ ಪತನದ ಬಳಿಕ ಬಿಜೆಪಿಯಲ್ಲಿ ಪವರ್ ಸೆಂಟರ್ ಬಾರಿ ಸದ್ದು ಮಾಡಿತ್ತು. ಆದರೆ ಹೈಕಮಾಂಡ್ ಇದಕ್ಕೆಲ್ಲ ಫುಲ್ಸ್ಟಾಪ್ ಇಟ್ಟಂತಿದೆ. ಯಡಿಯೂರಪ್ಪ ಒನ್ಮ್ಯಾನ್ ಪವರ್ ಸೆಂಟರ್ ಅಂತೆ. ಅಂದರೆ ಬಿಎಸ್ವೈ ಒಬ್ಬರೇ ಸಿಎಂ ಆಗಿರ್ತಾರೆ. ಡಿಸಿಎಂ ಹುದ್ದೆ ಇರಲ್ಲ ಎಂದು ಹೈಕಮಾಂಡ್ ಹೇಳಿದೆ ಎಂದು ಪಕ್ಷದ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.
ಹೈಕಮಾಂಡ್ ಅಣತಿಯಂತೆ ಸಂಪುಟ ರಚನೆ ಕೂಡ ನಡೆಯಲಿದೆ. ಜಾತಿ, ಹಿರಿತನ, ಪಕ್ಷನಿಷ್ಠೆ, ಜಿಲ್ಲಾ ಪ್ರಾತಿನಿಧ್ಯ ಲೆಕ್ಕಹಾಕಿ ಸಂಪುಟ ರಚನೆ ಮಾಡಲಾಗುತ್ತಿದೆ. ಅತೃಪ್ತರಲ್ಲಿ ಬಹುತೇಕರಿಗೆ ಮಂತ್ರಿಗಿರಿ ಪಕ್ಕಾ ಆಗಿದ್ದು, ಬಿಎಸ್ವೈ ಸಂಪುಟದ ಸಂಭಾವ್ಯ ಪಟ್ಟಿ ಇಲ್ಲಿದೆ.
* ಯಾರಾಗ್ತಾರೆ ಮಿನಿಸ್ಟರ್..?
* ಬೆಂಗಳೂರು ಕೋಟಾದಿಂದ ಯಾರಿಗೆ ಅದೃಷ್ಠ..?
> ಆರ್.ಅಶೋಕ್, ಪದ್ಮನಾಭನಗರ
> ಸುರೇಶ್ಕುಮಾರ್, ರಾಜಾಜಿನಗರ
> ಅಶ್ವಥ್ನಾರಾಯಣ, ಮಲ್ಲೇಶ್ವರ
> ಅರವಿಂದ ಲಿಂಬಾವಳಿ, ಮಹದೇವಪುರ
> ಭೈರತಿ ಬಸವರಾಜು, ಕೆ.ಆರ್.ಪುರಂ
> ಎಸ್.ಟಿ. ಸೋಮಶೇಖರ್, ಯಶವಂತಪುರ
> ಮುನಿರತ್ನ, ಆರ್.ಆರ್.ನಗರ
* ಮೈಸೂರು
> ಎಸ್.ಎ. ರಾಮದಾಸ್, ಕೃಷ್ಣರಾಜ
> ಹೆಚ್. ವಿಶ್ವನಾಥ್, ಹುಣಸೂರು
* ಕೊಡಗು
> ಕೆ.ಜಿ. ಬೋಪಯ್ಯ ವೀರಾಜಪೇಟೆ
> ಅಪ್ಪಚ್ಚು ರಂಜನ್, ಮಡಿಕೇರಿ
* ಚಿಕ್ಕಮಗಳೂರು
> ಸಿ.ಟಿ.ರವಿ, ಚಿಕ್ಕಮಗಳೂರು
> ಎಂ.ಪಿ.ಕುಮಾರಸ್ವಾಮಿ, ಮೂಡಿಗೆರೆ
* ಶಿವಮೊಗ್ಗ
> ಕೆ.ಎಸ್.ಈಶ್ವರಪ್ಪ, ಶಿವಮೊಗ್ಗ
> ಅರಗ ಜ್ಞಾನೇಂದ್ರ, ತೀರ್ಥಹಳ್ಳಿ
* ಉಡುಪಿ
> ಸುನೀಲ್ ಕುಮಾರ್, ಕಾರ್ಕಳ
> ಹಾಲಾಡಿ ಶ್ರೀನಿವಾಸಶೆಟ್ಟಿ, ಕುಂದಾಪುರ
* ಉತ್ತರ ಕನ್ನಡ
> ವಿಶ್ವೇಶ್ವರಹೆಗಡೆ ಕಾಗೇರಿ, ಶಿರಸಿ
> ಶಿವರಾಮ್ ಹೆಬ್ಬಾರ್, ಯಲ್ಲಾಪುರ
* ಚಿತ್ರದುರ್ಗ
> ಶ್ರೀರಾಮುಲು, ಮೊಳಕಾಳ್ಮೂರು
> ತಿಪ್ಪಾರೆಡ್ಡಿ, ಚಿತ್ರದುರ್ಗ
* ದಾವಣಗೆರೆ
> ರೇಣುಕಾಚಾರ್ಯ, ಹೊನ್ನಾಳಿ
* ತುಮಕೂರು
> ಮಾಧುಸ್ವಾಮಿ, ಚಿಕ್ಕನಾಯಕನಹಳ್ಳಿ
* ಚಿಕ್ಕಬಳ್ಳಾಪುರ
> ಡಾ.ಸುಧಾಕರ್, ಚಿಕ್ಕಬಳ್ಳಾಪುರ
* ಕೋಲಾರ
> ನಾಗೇಶ್, ಮುಳಬಾಗಿಲು
* ಹಾವೇರಿ
> ಶಂಕರ್, ರಾಣೆಬೆನ್ನೂರು
> ಬಿ.ಸಿ. ಪಾಟೀಲ್, ಹಿರೇಕೆರೂರು
> ಬಸವರಾಜ ಬೊಮ್ಮಾಯಿ, ಶಿಗ್ಗಾಂವಿ
> ಸಿ.ಎಂ.ಉದಾಸಿ, ಹಾನಗಲ್
* ಗದಗ
> ಸಿ.ಸಿ.ಪಾಟೀಲ್, ನರಗುಂದ
* ಧಾರವಾಡ
> ಶಂಕರ ಪಾಟೀಲ್ ಮುನೇನಕೊಪ್ಪ, ನವಲಗುಂದ
* ವಿಜಯಪುರ
> ಬಸನಗೌಡ ಪಾಟೀಲ್ ಯತ್ನಾಳ್, ವಿಜಯಪುರ
* ಬಾಗಲಕೋಟೆ
> ಗೋವಿಂದ ಕಾರಜೋಳ, ಮುಧೋಳ
> ಮುರುಗೇಶ್ ನಿರಾಣಿ, ಬೀಳಗಿ
* ಬೆಳಗಾವಿ
> ರಮೇಶ್ ಜಾರಕಿಹೊಳಿ, ಗೋಕಾಕ್
> ಬಾಲಚಂದ್ರ ಜಾರಕಿಹೊಳಿ, ಅರಭಾವಿ
> ಉಮೇಶ್ ಕತ್ತಿ, ಹುಕ್ಕೇರಿ
* ಕಲಬುರಗಿ
> ದತ್ತಾತ್ರೇಯಪಾಟೀಲ್ ರೇವೂರ್, ಕಲಬುರಗಿ ದಕ್ಷಿಣ
* ರಾಯಚೂರು
> ಶಿವನಗೌಡನಾಯಕ್, ದೇವದುರ್ಗ
> ಪ್ರತಾಪ್ಗೌಡ ಪಾಟೀಲ್, ಮಸ್ಕಿ
* ಬೀದರ್
> ಪ್ರಭು ಚವ್ಹಾಣ್, ಔರಾದ್
* ದಕ್ಷಿಣ ಕನ್ನಡ
> ಅಂಗಾರ, ಸುಳ್ಯ
ಸಚಿವ ಸ್ಥಾನ ನೀಡುವಂತೆ ಇವರೆಲ್ಲರ ಹೆಸರು ಸಾಮಾಜಿಕ ಜಾಲತಾಣದಲ್ಲಿ ಕೇಳಿ ಬರುತ್ತಿದೆ. ಆದರೆ ಬಿಎಸ್ವೈ ಅವರ ಸಚಿವ ಸಂಪುಟದಲ್ಲಿ ಯಾರೆಲ್ಲ ಸಚಿವರಾಗುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.