ಬಿಜೆಪಿ ಬೆಂಬಲಿಸಿ ವಾಟ್ಸಪ್ ಸ್ಟೇಟಸ್ ಹಾಕಿದ್ದಕ್ಕೆ ಗಲಾಟೆ – ಮಾರಕಾಸ್ತ್ರ ಹಿಡಿದು ಎರಡು ಗುಂಪುಗಳು ಹೊಡೆದಾಟ

Public TV
1 Min Read
raichur sadar bazar police station

ರಾಯಚೂರು: ಬಿಜೆಪಿಗೆ (BJP) ಬೆಂಬಲಿಸುವುದಾಗಿ ವಾಟ್ಸಪ್ ಸ್ಟೇಟಸ್‌ನಲ್ಲಿ (Whatsapp Status) ಅನುಮತಿಯಿಲ್ಲದೆ ಫೋಟೋ ಬಳಸಿದ್ದ ಹಿನ್ನೆಲೆ ರಾಯಚೂರಿನಲ್ಲಿ (Raichuru) ಎರಡು ಗುಂಪುಗಳ ನಡುವೆ ಮಾರಾಮಾರಿ (Clash) ನಡೆದಿದೆ.

ನಗರದ ಅಂದ್ರೂನ್ ಕಿಲ್ಲಾ ಪ್ರದೇಶದಲ್ಲಿ ಯುವಕರ ನಡುವೆ ಹೊಡೆದಾಟವಾಗಿದೆ. ಬಿಜೆಪಿ ಬೆಂಬಲಿಗ ಅಹ್ಮದ್ ಬೇಗ್ ಕಾಂಗ್ರೆಸ್ ಬೆಂಬಲಿಗ ಎಂಡಿ ಅಹ್ಮದ್ ಫೋಟೋ ಬಳಕೆ ಮಾಡಿಕೊಂಡು ಹಾಲಿ ಶಾಸಕ ಡಾ. ಶಿವರಾಜ್ ಪಾಟೀಲ್‌ಗೆ ನಮ್ಮ ಬೆಂಬಲ ಅನ್ನೋ ಸ್ಟೇಟಸ್ ಹಾಕಿಕೊಂಡಿದ್ದ. ಇದರಿಂದ ಆಕ್ರೋಶಗೊಂಡ ಎಂಡಿ ಅಹ್ಮದ್ ಅಣ್ಣನ ಮಗ ಹಾಗೂ ಆತನ ಸ್ನೇಹಿತರು ಫೋಟೋ ಹಾಕಿದ್ದಕ್ಕೆ ಗಲಾಟೆ ಮಾಡಿದ್ದಾರೆ. ಇದನ್ನೂ ಓದಿ: ಕುಡಿದ ಮತ್ತಿನಲ್ಲಿ ಬೃಹತ್ ಜಾಹೀರಾತು ಕಂಬವೇರಿ ಯುವಕ ಪುಂಡಾಟ

police jeep 1

ಘಟನೆಯಲ್ಲಿ ವಾಸಿಮ್, ರಫಿ ಸೇರಿ ಹಲವರಿಗೆ ಗಾಯಗಳಾಗಿವೆ. ಘಟನೆಗೆ ಸಂಬಂಧಿಸಿದಂತೆ 2 ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ. ಒಟ್ಟು 22 ಜನರ ವಿರುದ್ಧ ಸದರ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಾರಕಾಸ್ತ್ರ ಹಿಡಿದು ಹೊಡೆದಾಡಿದ್ದ ಇಬ್ಬರನ್ನು ಬಂಧಿಸಲಾಗಿದ್ದು ಉಳಿದವರು ಪರಾರಿಯಾಗಿದ್ದಾರೆ. ಇದನ್ನೂ ಓದಿ: ಮದುವೆ ಸಂಭ್ರಮದಲ್ಲಿ ಗುಂಡು ಹಾರಿಸಿದ ವಧುವಿಗೆ ಬಂತು ಕುತ್ತು- ಪೊಲೀಸರಿಂದ ಹುಡುಕಾಟ

Share This Article