ಚಿತ್ರದುರ್ಗ: ಬಾತ್ರೂಮಲ್ಲಿ ನಡೆದಿದ್ದ ರಾಜೇಂದ್ರ ಶ್ರೀನಿವಾಸ್ (30) ಕೊಲೆ ಕೇಸನ್ನು ಭೇದಿಸುವಲ್ಲಿ ಹೊಸದುರ್ಗ ಪೊಲೀಸರು ಯಶಸ್ವಿಯಾಗಿದ್ದಾರೆ.
ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲೂಕಿನ ಹುಣವಿನಡು ಗ್ರಾಮದಲ್ಲಿ ಬಾತ್ರೂಮಲ್ಲಿ ಸ್ನಾನ ಮಾಡುತ್ತಿದ್ದ ರಾಜೇಂದ್ರನನ್ನು ಬರ್ಬರವಾಗಿ ಕೊಂದು, ಆ ರಕ್ತಸಿಕ್ತ ಫೋಟೊವನ್ನು ಇನ್ಸ್ಟಾದಲ್ಲಿ ಹಾಕಿ ವಿಕೃತಿ ಮೆರೆದಿದ್ದ. ಹೊಳಲ್ಕೆರೆಯ ಸಾಗರ್, ಸಹೋದರ ಅಭಿಷೇಕ್ ಸೇರಿದಂತೆ ಸಂಬಂಧಿಕರಾದ ಕಿರಣ್ ಕುಮಾರ್, ಕೃಷ್ಣಮೂರ್ತಿ ಹಾಗೂ ಕೊಲೆಗೆ ಸಹಕರಿಸಿದ ಸಂಜು, ಕರಿಯಪ್ಪ, ಯಶವಂತ್ ಸೇರಿ ಒಟ್ಟು 7 ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದನ್ನೂ ಓದಿ: ವಾರಕ್ಕೆ 3 ದಿನ ಕಾವೇರಿ ಆರತಿ – 10,000 ಆಸನಗಳ ವ್ಯವಸ್ಥೆ, 70% ಉಚಿತ, 30% ಟಿಕೆಟ್: ಡಿಕೆಶಿ
ಅಲ್ಲದೇ ಈ ಕೃತ್ಯಕ್ಕೆ ಬಳಸಿದ ಸ್ಕೂಟಿ, ಎರ್ಟಿಗಾ ಕಾರು, ಎರಡು ಮಚ್ಚುಗಳನ್ನು ವಶಕ್ಕೆ ಪಡೆದಿರುವ ಪೊಲೀಸರು ಕೊಲೆ ಕೇಸನ್ನು 24 ಗಂಟೆಯೊಳಗೆ ಭೇದಿಸಿದ್ದಾರೆ. ಈ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿದ ಚಿತ್ರದುರ್ಗ ಎಸ್ಪಿ ರಂಜಿತ್ ಬಂಡಾರು, ಹೊಳಲ್ಕೆರೆ ಮೂಲದ ಕಿರಣಾ ಜೊತೆ ರಾಜೇಂದ್ರ ಲಿವಿಂಗ್ ರಿಲೇಷನ್ನಲ್ಲಿದ್ದು, ಕೆಲ ತಿಂಗಳ ಬಳಿಕ ಭಿನ್ನಾಭಿಪ್ರಾಯದಿಂದ ರಾಜೇಂದ್ರ ಹಾಗೂ ಕಿರಣಾ ದೂರವಾಗಿದ್ದರು. ಹೀಗಾಗಿ ದೂರಾದ ಬಳಿಕವೂ ಕಿರಣಾಗೆ ರಾಜೇಂದ್ರ ಕರೆ ಮಾಡಿ, ಕಿರುಕುಳ ನೀಡುತ್ತಿದ್ದ. ಹೀಗಾಗಿ ಕಿರಣಾ ಸಹೋದರ ಸಾಗರ್ ಮತ್ತು ಅಭಿಷೇಕ್ ಒಮ್ಮೆ ರಾಜೇಂದ್ರಗೆ ಕರೆ ಮಾಡಿ ಎಚ್ಚರಿಸಿದ್ದು, ಕಿರಣಾಳನ್ನು ಬಳಸಿಕೊಂಡು ಮೋಸ ಮಾಡಿದ ಎಂಬ ಆಕ್ರೋಶದಿಂದ ಬರ್ಬರವಾಗಿ ಕೊಲೆಗೈದಿದ್ದಾರೆ. ಕೊಲೆ ಬಳಿಕ ಇನ್ಸ್ಟಾಗ್ರಾಮ್ನಲ್ಲಿ ಆರೋಪಿಯಾದ ಸಾಗರ್ ಸ್ಟೇಟಸ್ ಹಾಕಿದ್ದು, ಕೊಲೆಯಾದ ಶವದ ಫೋಟೋ ಶೇರ್ ಮಾಡಿದ್ದನ್ನು ಪ್ರಕರಣದ ಸಾಕ್ಷಿಯಾಗಿ ಪರಿಗಣಿಸಲಾಗುವುದು ಎಂದು ತಿಳಿಸಿದರು. ಇದನ್ನೂ ಓದಿ: ಶಿವಮೊಗ್ಗ | ಕುಡಿದು ಅಂಬುಲೆನ್ಸ್ ಚಾಲನೆ – ಚಾಲಕನಿಗೆ 13,000 ದಂಡ!