ಸ್ವಂತ ಹಣದಿಂದ ಜನರಿಗಾಗಿ ಕೊಳವೆಬಾವಿ ಕೊರೆಸಿದ ನಗರಸಭಾ ಸದಸ್ಯೆ

Public TV
1 Min Read
ckb 200 feet water 2

ಚಿಕ್ಕಬಳ್ಳಾಪುರ: ಬರದ ನಾಡು ಅಂತಲೇ ಖ್ಯಾತಿ ಪಡೆದಿರುವ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ನಗರಸಭಾ ಸದಸ್ಯೆ ಭಾರತಿ ಅನಂದ್ ಅವರು ಸಾರ್ವಜನಿಕರಿಗೋಸ್ಕರ ತಮ್ಮ ಸ್ವಂತ ಹಣದಿಂದ ಕೊಳವೆ ಬಾವಿಯನ್ನು ಕೊರೆಸಿ ಎಲ್ಲರಿಗೂ ಮಾದರಿಯಾಗಿದ್ದಾರೆ.

ಬಯಲುಸೀಮೆ ಆಗುರುವುದರಿಂದ ಜಿಲ್ಲೆಯಲ್ಲಿ ನೀರಿನ ಸಮಸ್ಯೆ ಸಾಕಷ್ಟಿದೆ. ಆದರಿಂದ ಸರ್ಕಾರ ಹಲವು ಕೊಳವೆಬಾವಿಯನ್ನು ತೋಡಿಸಿದರು ಸ್ಪಲ್ಪ ಮಟ್ಟಿನಲ್ಲಿ ಮಾತ್ರ ನೀರು ಸಿಗುತ್ತಿತ್ತು. ಕೆಲವೆಡೆ ಸ್ವಲ್ಪ ನೀರು ಕೂಡ ಸಿಗದೇ ಇರೋದು ಇದೆ. ಸರ್ಕಾರದಿಂದ 1000-1200 ಅಡಿ ಕೊಳವೆಬಾವಿ ಕೊರೆಸಿದ್ರೂ ನೀರು ಸಿಗೋದು ಅಪರೂಪ. ಆದ್ರೆ ಸಾರ್ವಜನಿಕರಿಗಾಗಿ ಭಾರತಿ ಅನಂದ್ ಹಾಗೂ ಅವರ ಕುಟುಂಬಸ್ಥರು ಕೊರಸಿರುವ ಕೊಳವೆಬಾವಿಯಲ್ಲಿ ಕೇವಲ 200 ಅಡಿಗೆ ನೀರು ಸಿಕ್ಕಿದೆ.

ckb 200 feet water 1

ಜಿಲ್ಲೆಯ 12 ನೇ ವಾರ್ಡಿನ ನಗರಸಭಾ ಸದಸ್ಯೆ ಭಾರತಿ ಅನಂದ್ ಹಾಗೂ ಕುಟುಂಬಸ್ಥರು ತಮ್ಮ ಸ್ವಂತ ಹಣದಿಂದ ಕೊರೆಸಿದ ಕೊಳವೆಬಾವಿಯಲ್ಲಿ ಕೇವಲ 200 ಅಡಿಗೆ 4 ಇಂಚು ನೀರು ಸಿಕ್ಕಿದೆ. ಚಿಕ್ಕಬಳ್ಳಾಪುರ ನಗರದ ಪ್ರಮುಖ ರುದ್ರಭೂಮಿಯಾಗಿರುವ ನಕ್ಕಲಕುಂಟೆ ಸ್ಮಶಾನದಲ್ಲಿ ಕೊಳವೆಬಾವಿ ಕೊರೆಸಲಾಗಿದೆ. ವಿಪರ್ಯಾಸ ಅಂದ್ರೆ ನಗರದ ಹಲವೆಡೆ ಕೊಳವೆಬಾವಿ ಕೊರೆಸಿದ್ರೂ ನೀರು ಸಿಗೋದು ಅನುಮಾನ. ಆದ್ರೆ ಸ್ಮಶಾನದಲ್ಲಿ ಸಾರ್ವಜನಿಕರ ಅನುಕೂಲಕ್ಕೆ ಅಂತ ಕೊರೆಸಿದ ಕೊಳವೆಬಾವಿಯಲ್ಲಿ ನೀರು ಸಿಕ್ಕಿರೋದು ಒಂದು ಕಡೆ ಆಶ್ಚರ್ಯವಾದರು ಎಲ್ಲರಿಗೂ ಸಂತಸ ತಂದಿದೆ.

ckb 200 feet water

ಅಂತ್ಯ ಸಂಸ್ಕಾರಕ್ಕೆ ಅಂತ ಸ್ಮಶಾನಕ್ಕೆ ಬರುವವರು ನೀರಿಲ್ಲದೆ ಸಾಕಷ್ಟು ಕಷ್ಟ ಅನುಭವಿಸುತ್ತಿದ್ದರು. ಇದನ್ನ ಮನಗಂಡ ನಗರಸಭಾ ಸದಸ್ಯೆ ಹಾಗೂ ಕುಟುಂಬಸ್ಥರು ಕೊಳವೆಬಾವಿ ಕೊರೆಸಿ ಸಾರ್ವಜನಿಕರಿಗೆ ಸಹಾಯ ಮಾಡಿದ್ದಾರೆ. ತಮ್ಮ ಸ್ವಂತ ಹಣವನ್ನು ಖರ್ಚು ಮಾಡಿ ಜನರಿಗೆ ಸಹಾಯ ಮಾಡಿರುವ ಭಾರತಿ ಆನಂದ್ ಹಾಗೂ ಅವರ ಕುಟುಂಬಸ್ಥರ ಕೆಲಸಕ್ಕೆ ಸಾರ್ವಜನಿಕರು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *