ಚೆನ್ನೈ: ನಗರದ ನ್ಯಾಯಾಲಯದ ಹೊರಗೆ ಹೊಂಚು ಹಾಕಿ ಕುಳಿತಿದ್ದ ಐವರು ದುಷ್ಕರ್ಮಿಗಳು ಹಳೆಯ ರೌಡಿ ಶೀಟರ್ ಮೇಲೆ ಏಕಾಏಕಿ ಮಾರಕಾಸ್ತ್ರಗಳಿಂದ ಅಟ್ಯಾಕ್ ಮಾಡಿ ಹತ್ಯೆಗೈಯ್ಯಲು ಪ್ರಯತ್ನಿಸಿದ್ದಾರೆ. ಆದರೆ ಈ ವೇಳೆ ಚೆನ್ನೈ ಪೊಲೀಸರು ತಮ್ಮ ಚಾಣಕ್ಷತನದಿಂದ ನಡೆಯುತ್ತಿದ್ದ ಕೊಲೆಯನ್ನು ತಪ್ಪಿಸಿದ್ದಾರೆ.
ಛತ್ತೀಸ್ಗಢದ ಹಲವು ಕೊಲೆ ಪ್ರಕರಣಗಳಿಗೆ ಸಂಬಂಧಿಸಿದಂತೆ ರೌಡಿಶೀಟರ್ ಬಾಲನನ್ನು ಪೊಲೀಸರು ಬಂಧಿಸಿದ್ದರು. ಆದರೆ ಇತ್ತೀಚೆಗಷ್ಟೇ ನಗರದ ನ್ಯಾಯಾಲಯದ ಹೊರಗೆ ಹಳೆ ವೈಷಮ್ಯದ ಹಿನ್ನೆಲೆ ದುಷ್ಕರ್ಮಿಗಳು ಮಧುರೈ ಮೂಲದ ರೌಡಿ ಶೀಟರ್ ಬಾಲನ ಅಟ್ಯಾಕ್ ಮಾಡಿದ್ದು, ಈ ವೇಳೆ ಹತ್ಯೆಗೀಡಾಗುತ್ತಿದ್ದ ರೌಡಿಶೀಟರ್ ಅನ್ನು ಪೊಲೀಸರು ರಕ್ಷಿಸಿದ್ದಾರೆ. ಅಲ್ಲದೇ ಕೊಲ್ಲಲು ಬಂದ ಐವರಲ್ಲಿ ಮೂವರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಇದನ್ನೂ ಓದಿ: ಸ್ವಚ್ಛ ಭಾರತ್ ಬೆಂಗಳೂರು ಎಲ್ಲಿಗೆ ಹೋಗಿದೆ? ಬೀದಿಯಲ್ಲಿ ಕಸ ಬಿದ್ದು ಕೊಳೆಯುತ್ತಿದೆ: ಡಿಕೆ ಸುರೇಶ್
ಇದೀಗ ಬಂಧಿತ ಮೂವರು ಆರೋಪಿಗಳನ್ನು ಕೊಟ್ಟೂರುಪುರಂ ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿದೆ. ಸದ್ಯ ಈ ಸಂಬಂಧ ಪೊಲೀಸರು ತನಿಖೆ ನಡೆಸುತ್ತಿದ್ದು, ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ. ಇದನ್ನೂ ಓದಿ: ಹಿಂದೂ ಧರ್ಮ ಒಡೆಯುವುದು, ಮತಾಂತರ ಮಾಡುವುದೇ ಒಡನಾಡಿಯ ಉದ್ದೇಶ: ಮಠದ ಸದಸ್ಯ ಕಿಡಿ