‘ಬಿಗ್ ಬಾಸ್ ಕನ್ನಡ 11’ರ (Bigg Boss Kannada 11) ಆಟ ದಿನದಿಂದ ದಿನಕ್ಕೆ ರೋಚಕ ತಿರುವು ಪಡೆದು ಮುನ್ನುಗ್ಗುತ್ತಿದೆ. ನಾಮಿನೇಷನ್ ಪ್ರಕ್ರಿಯೆ ವೇಳೆ, ಕ್ಷುಲ್ಲಕ ಕಾರಣ ನೀಡಿ ನಾಮಿನೇಟ್ ಮಾಡಿದ್ದಕ್ಕೆ ಚೈತ್ರಾ ವಿರುದ್ಧ ರಜತ್ (Rajath Kishen) ಗರಂ ಆಗಿದ್ದಾರೆ. ನೀವು ಕೊಟ್ಟಿರುವ ಕಾರಣ ಸುದೀಪ್ (Sudeep) ಸರ್ ಸರಿ ಅಂದರೆ ಅರ್ಧ ಮೀಸೆ ಬೋಳಿಸುತ್ತೇನೆ ಎಂದು ಚೈತ್ರಾ ವಿರುದ್ಧ ರಜತ್ ಗುಡುಗಿದ್ದಾರೆ. ಇದನ್ನೂ ಓದಿ:‘ಪುಷ್ಪ 3’ ಬಗ್ಗೆ ರಶ್ಮಿಕಾ ಮಂದಣ್ಣ ಹಿಂಟ್- 5 ವರ್ಷಗಳ ಜರ್ನಿ ನೆನೆದು ನಟಿ ಎಮೋಷನಲ್
ಚೈತ್ರಾ (Chaithra Kundapura) ಅವರು ರಜತ್ರನ್ನು ನಾಮಿನೇಟ್ ಮಾಡುವಾಗ ನನ್ನನ್ನು ಬಾಸ್ ಅಂತ ವ್ಯಂಗ್ಯದಿಂದ ಕರೆಯುತ್ತಾರೆ. ವ್ಯಂಗ್ಯ ಮತ್ತು ಅವಮಾನ ಯಾವುದು ಅಂತ ತಿಳಿಯದೇ ಇರೋವಷ್ಟು ಮುಗ್ಧೆ ನಾನಲ್ಲ ಎಂದರು. ಮತ್ತೆ ಶಿಶಿರ್ ಮತ್ತು ಐಶ್ವರ್ಯಾಗೆ ಹುಡುಗಿರ ಕೈ ಹಿಡಿದುಕೊಂಡು ಓಡಾಡಿದ್ರೆ ಇಲ್ಲಿ ಬಿಗ್ ಬಾಸ್ ಆಟ ಗೆಲ್ಲೋಕೆ ಆಗಲ್ಲ ಎಂದು ರಜತ್ ತಿವಿದಿದ್ದರು. ಇದನ್ನು ಕೂಡ ಚೈತ್ರಾ ನಾಮಿನೇಷನ್ಗೆ ಕಾರಣ ನೀಡಿದರು. ಇದು ರಜತ್ ಕೋಪಕ್ಕೆ ಕಾರಣವಾಗಿದೆ.
View this post on Instagram
ಮೊನ್ನೆಯಷ್ಟೇ ವೀಕೆಂಡ್ ಪಂಚಾಯಿತಿಯಲ್ಲಿ ಸರಿಯಾದ ಕಾರಣ ಕೊಟ್ಟು ನಾಮಿನೇಟ್ ಮಾಡಿ ಅಂತ ಸುದೀಪ್ ಸರ್ ಹೇಳಿದ್ದಾರೆ. ಮತ್ತೆ ಹಾಗೇ ಮಾಡುತ್ತಾರೆ ಎಂದು ರಜತ್ ಕ್ಯಾತೆ ತೆಗೆದಿದ್ದಾರೆ. ನೀವು ಕೊಟ್ಟಿದ್ದ ಕಾರಣ ಸುದೀಪ್ ಸರ್ ಸರಿ ಅಂತ ಹೇಳಲಿ. ಅಲ್ಲೇ ನಾನು ಈ ಮನೆ ಬಿಟ್ಟು ಹೋಗುತ್ತೇನೆ. ನಾಮಿನೇಷನ್ಗೆ ನೀವು ಕೊಟ್ಟಿದ್ದ ಕಾರಣ ಸರಿ ಅಂದರೆ ಸುದೀಪ್ ಸರ್, ನಾನು ಈ ಮನೆ ಬಿಟ್ಟು ಹೋಗುತ್ತೇನೆ ಎಂದು ಚೈತ್ರಾಗೆ ರಜತ್ ಸವಾಲು ಹಾಕಿದ್ದಾರೆ. ಯಾರಾದರೂ ತೂಕದ ವ್ಯಕ್ತಿ ಹತ್ತಿರ ಮಾತನಾಡಬಹುದು. ಇವರ ಹತ್ತಿರ ಮಾತನಾಡೋಕೆ ಆಗಲ್ಲ ಎಂದು ಚೈತ್ರಾ ಮಾತಿಗೆ ಮಾತು ಕೊಟ್ಟಿದ್ದಾರೆ.