Bengaluru City
ಅತೃಪ್ತರ ಸಮಾವೇಶಕ್ಕೆ ಸಹಕಾರ ನೀಡಿದ ಆರೋಪ- ಬಿಜೆಪಿ ಕೇಂದ್ರ ಕಚೇರಿಯ ಸಿಬ್ಬಂದಿ ವಜಾ

ಬೆಂಗಳೂರು: ನಗರದಲ್ಲಿ ಗರುವಾರದಂದು ನಡೆದ ಅತೃಪ್ತರ ಸಮಾವೇಶದ ಹಿನ್ನೆಲೆಯಲ್ಲಿ ಸಮಾವೇಶಕ್ಕೆ ಸಹಕಾರ ನೀಡಿದ ಆರೋಪದ ಮೇಲೆ ಬಿಜೆಪಿ ಕೇಂದ್ರ ಕಚೇರಿಯಲ್ಲಿದ್ದ ಸಿಬ್ಬಂದಿ ವಜಾಕ್ಕೆ ಬಿಎಸ್ವೈ ಸೂಚನೆ ನೀಡಿದ್ದಾರೆ.
ಸಮಾವೇಶದ ಕರಪತ್ರ ಡ್ರಾಫ್ಟ್ ಸಿದ್ದಪಡಿಸಿದ್ದು, ಕೆಲ ನಾಯಕರಿಗೆ ಮೇಲ್ ಹಾಕಿದ ಆರೋಪದ ಮೇಲೆ ಕಂಪ್ಯೂಟರ್ ಅಪರೇಟರ್ ಮಲ್ಲಿಕಾರ್ಜುನ್ ವಜಾಕ್ಕೆ ಬಿಎಸ್ವೈ ಗರುವಾರ ಸಂಜೆಯೇ ಸೂಚನೆ ನೀಡಿದ್ದಾರೆ. ಮಲ್ಲಿಕಾರ್ಜುನ, ಬಿಎಲ್ ಸಂತೋಷ್ ಅವರ ಬೆಂಬಲಿಗರಾಇದ್ದು, 10 ವರ್ಷಗಳಿಂದ ಕೆಲಸ ಮಾಡ್ತಿದ್ದರು.
ಈ ಬಗ್ಗೆ ಪ್ರತಿಕ್ರಿಯೆ ನೀಡಿರೋ ಬಿಎಸ್ವೈ, ಬಿಜೆಪಿ ಕಚೇರಿ ಉದ್ಯೋಗಿ ಮಲ್ಲಿಕಾರ್ಜುನ್ ಸಿಐಡಿಯಂತೆ ಕೆಲಸ ಮಾಡ್ತಿದ್ದ. ಅದಕ್ಕೆ ವಜಾ ಮಾಡಿದ್ದೀನಿ. ಈಶ್ವರಪ್ಪ ನಡವಳಿಕೆ ತಿದ್ದುಕೊಳ್ಳಬೇಕು. ಸಂತೋಷ್ ಅವರು ರಾಷ್ಟ್ರೀಯ ಜವಾಬ್ದಾರಿ ನೋಡಿಕೊಳ್ಳಲಿ, ರಾಜ್ಯದ ಬಗ್ಗೆ ಬೇಡ. ಸಂತೋಷ್ ಜೊತೆ ಈಶ್ವರಪ್ಪ ಗಂಟೆಗಟ್ಟಲೆ ಮಾತನಾಡ್ತಿದ್ರೆ ಏನ್ ಅನಿಸುತ್ತೆ ಎಂದು ಪರೋಕ್ಷವಾಗಿ ಬಿ.ಎಲ್ ಸಂತೋಷ್ ಅವರ ಬಗ್ಗೆ ಬಿಎಸ್ವೈ ಅಸಮಾಧಾನ ವ್ಯಕ್ತಪಡಿಸಿದ್ರು.
ವಿಪಕ್ಷ ನಾಯಕ ಸ್ಥಾನದಿಂದ ಈಶ್ವರಪ್ಪರನ್ನ ಕೆಳಗಿಳಿಸೋ ವಿಚಾರವಾಗಿ ಪ್ರತಿಕ್ರಿಯಿಸಿದ ಯಡಿಯೂರಪ್ಪ, ಎಂಎಲ್ಸಿಗಳ ಬೇಡಿಕೆಯನ್ನ ಗಮನಿಸಿ ನಿರ್ಧಾರ ಪ್ರಕಟಿಸುತ್ತೇವೆ. ನಾನು ಬದಲಾಗಿಲ್ಲ, ಮಾತು ಬದಲಾಗಿಲ್ಲ. ಈಶ್ವರಪ್ಪ ಬಹಿರಂಗ ಸಭೆ ನಡೆಸಿ ಪಕ್ಷ ವಿರೋಧಿ ಧೋರಣೆ ತಾಳಿದ್ದಾರೆ. ದೆಹಲಿಗೆ ಹೋಗ್ತಿದ್ದೀನಿ ರಾಮಲಾಲ್, ಅಮಿತ್ ಷಾ ಅವರನ್ನ ಭೇಟಿ ಮಾಡ್ತೀನಿ ಅಂದ್ರು.
