ಹೀಗೆ ಆದ್ರೆ ಮುಂದೆ ಕುಡಿಯೋಕು ಸಹ ನೀರು ಇರಲ್ಲ: ಕಾವೇರಿ ಹೋರಾಟದಲ್ಲಿ ಅಜ್ಜಿ ಕಣ್ಣೀರು

Public TV
1 Min Read
mandya protest

ಮಂಡ್ಯ: ಕಾವೇರಿ ನೀರು (Cauvery Water Issue) ವಿಚಾರದಲ್ಲಿ ಪದೇ ಪದೆ ನಮಗೆ ಅನ್ಯಾಯ ಆಗುತ್ತಿದೆ. ಮುಂದೆ ಹೀಗೆ ಆದ್ರೆ ಕುಡಿಯೋಕು ನೀರು ಇರಲ್ಲ ಎಂದು ಮಂಡ್ಯದಲ್ಲಿ ಪ್ರತಿಭಟನಾನಿರತ ಅಜ್ಜಿಯೊಬ್ಬರು ಕಣ್ಣೀರಿಟ್ಟರು.

ತಮಿಳುನಾಡಿಗೆ (Tamil Nadu) ನೀರು ಹರಿಸುವ ವಿಚಾರವಾಗಿ ಕರ್ನಾಟಕಕ್ಕೆ (Karnataka) ಸಿಡಬ್ಲ್ಯೂಆರ್‌ಸಿ (CWRC) ನೀಡಿದ ಆದೇಶಕ್ಕೆ ಬೇಸರ ವ್ಯಕ್ತಪಡಿಸಿ ಮಂಡ್ಯದಲ್ಲಿ (Mandya) ಪ್ರತಿಭಟನೆ ನಡೆಸಲಾಯಿತು. ತಮಿಳುನಾಡಿಗೆ ನೀರು ಹರಿಸಲು ಹೊರಡಿಸಿದ ಶಿಫಾರಸಿನ ವಿರುದ್ಧ ಸೋಮವಾರ ರೈತರು ರಸ್ತೆ ತಡೆದು ಪ್ರತಿಭಟನೆ ನಡೆಸಿದರು. ಇದನ್ನೂ ಓದಿ: ಮುಂದಿನ 15 ದಿನ ನಿತ್ಯ ತಮಿಳುನಾಡಿಗೆ 2,600 ಕ್ಯೂಸೆಕ್ ನೀರು ಬಿಡಿ – ಕರ್ನಾಟಕಕ್ಕೆ CWRC ನಿರ್ದೇಶನ

mandya protest 1

ಹಳೆ ಮೈಸೂರು-ಬೆಂಗಳೂರು ರಸ್ತೆ ತಡೆದು ಸಿಡಬ್ಲ್ಯೂಆರ್‌ಸಿ ಆದೇಶಕ್ಕೆ ಧಿಕ್ಕಾರ ಕೂಗಿದರು. ಹೆದ್ದಾರಿಯಲ್ಲಿಯೇ ಮಲಗಿ ಪ್ರಾಧಿಕಾರ, ನಿಯಂತ್ರಣ ಸಮಿತಿ ವಿರುದ್ಧ ಅಸಮಾಧಾನ ಹೊರಹಾಕಿದರು. ‘ಹೋಯ್ತಲಪ್ಪ ನೀರು’ ಎಂದು ಘೋಷಣೆ ಕೂಗಿ ಪ್ರತಿಭಟಿಸಿದರು.

ಈ ವೇಳೆ ಮಾತನಾಡಿದ ಅವರು, ಪದೇ ಪದೆ ನಮಗೆ ಅನ್ಯಾಯವಾಗುತ್ತಿದೆ. ನಮ್ಮ ಹೊಲ, ಗದ್ದೆಗಳು ಒಣಗುತ್ತಿವೆ. ಮುಂದೆ ಹೀಗೆ ಆದರೆ ಕುಡಿಯೋಕು ಸಹ ನೀರು ಇರಲ್ಲ. ನಮ್ಮ ಗೋಳು ಕೇಳೋರು ಯಾರು ಎಂದು ಅಜ್ಜಿ ಕಣ್ಣೀರು ಹಾಕಿದರು. ಇದನ್ನೂ ಓದಿ: ಒಕ್ಕಲಿಗ ನಾಯಕತ್ವ ಮುಗಿಸಲು ಒಂದು ತಂಡ ಪ್ರಯತ್ನಿಸುತ್ತಿದೆ: ರವಿಕುಮಾರ್‌ ಗಣಿಗ

ಕಾವೇರಿ ನದಿ ನೀರು ಹಂಚಿಕೆಗೆ ಸಂಬಂಧ ಕಾವೇರಿ ನೀರು ನಿಯಂತ್ರಣ ಸಮಿತಿ ಸೋಮವಾರ ಸಭೆ ನಡೆಸಿದ್ದು, ನವೆಂಬರ್ 1 ರಿಂದ ಮುಂದಿನ 15 ದಿನಗಳ ಕಾಲ ನಿತ್ಯ 26೦೦ ಕ್ಯೂಸೆಕ್ ನೀರು ಹರಿಸಲು ಕರ್ನಾಟಕಕ್ಕೆ ಶಿಫಾರಸು ಮಾಡಿದೆ.

Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

Share This Article