ಕುಡಿದ ಮತ್ತಲ್ಲಿ ಭಕ್ತರ ಮೇಲೆ ಕಾರು ಹರಿಸಿ ಪರಾರಿ- ಮಕ್ಕಳು ಸೇರಿ ನಾಲ್ವರು ಗಂಭೀರ

Public TV
1 Min Read
ACCIDENT ANE

ಬೆಂಗಳೂರು: ಕುಡಿದ ಮತ್ತಿನಲ್ಲಿ ಕಾರು ಚಾಲಕನೊಬ್ಬ ದೊಡ್ಡಗಣಪತಿ ದೇವಾಲಯದ ಭಕ್ತರ ಮೇಲೆ ಕಾರು ಹರಿಸಿದ ಘಟನೆ ಬೆಂಗಳೂರಿನ ರಾಮಮೂರ್ತಿ ನಗರ ರಿಂಗ್ ರಸ್ತೆಯಲ್ಲಿ ನಡೆದಿದೆ.

ANE ACCIDENT 2

ಘಟನೆಯಲ್ಲಿ ಹನುಮಂತನಗರದ ಇಬ್ಬರು ಮಕ್ಕಳು ಸೇರಿದಂತೆ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ. ದೊಡ್ಡಗಣಪತಿ ದೇವಾಲಯದ 8ನೇ ವರ್ಷದ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ನೂರಾರು ಭಕ್ತರು ಜಮಾಯಿಸಿದ್ದರು. ಈ ವೇಳೆ ಜನರಿದ್ದ ಪೆಂಡಾಲ್‍ಗೆ ಮಾರುತಿ ಜೆನ್ ಕಾರ್ ಡಿಕ್ಕಿ ಹೊಡೆದಿದೆ. ಬಳಿಕ ಭಕ್ತರ ಮೇಲೆ ನುಗ್ಗಿದೆ. ಪರಿಣಾಮ ನಾಲ್ವರಿಗೆ ಗಂಭೀರ ಗಾಯಗಳಾಗಿವೆ.

ANE ACCIDENT 1

ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ನಡೆದ ತಕ್ಷಣವೇ ಸ್ಥಳದಲ್ಲಿ ಜನರು ನೆರೆದಿದ್ದು, ಕಾರು ಚಾಲಕನನ್ನು ಹಿಡಿಯಲು ಪ್ರಯತ್ನಿಸಿದರಾದರೂ ಆತ ಪರಾರಿಯಾಗಿದ್ದಾನೆ.

ANE ACCIDENT 3

Share This Article
Leave a Comment

Leave a Reply

Your email address will not be published. Required fields are marked *