– ಜೆಡಿಎಸ್ ಪಕ್ಷವೇ ಅಲ್ಲ, ಅದು ಒಂದು ಕುಟುಂಬದ ಪಕ್ಷ
ಮಂಡ್ಯ: ಜೆಡಿಎಸ್ ಸತ್ತು ಹೋಗಿದೆ, ರಾಜ್ಯದಲ್ಲಿ ಇನ್ನು ಮುಂದೆ ಜೆಡಿಎಸ್ ಇಲ್ಲ. ಇನ್ನೇನಿದ್ದರೂ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಫೈಟ್ ಅಷ್ಟೆ. ಮಧ್ಯಂತರ ಚುನಾವಣೆ ಬಂದರೆ, ಜೆಡಿಎಸ್ ಕಣ್ಮರೆಯಾಗುತ್ತದೆ ಎಂದು ಮಾಜಿ ಶಾಸಕ, ಉಪಚುನಾವಣೆಯ ಕಾಂಗ್ರೆಸ್ ಸಂಭಾವ್ಯ ಅಭ್ಯರ್ಥಿ ಕೆ.ಬಿ.ಚಂದ್ರಶೇಖರ್ ಜೆಡಿಎಸ್ ವಿರುದ್ಧ ಗುಡುಗಿದ್ದಾರೆ.
ಜಿಲ್ಲೆಯ ಕೆ.ಆರ್.ಪೇಟೆಯಲ್ಲಿ ಮಾತನಾಡಿದ ಅವರು, ಜೆಡಿಎಸ್ ಒಂದು ಪಕ್ಷವೇ ಅಲ್ಲ. ಒಂದು ಕುಟುಂಬದ ಪಕ್ಷ ಮಾತ್ರ, ಅದು ಈಗಾಗಲೇ ಸತ್ತು ಹೋಗಿದೆ. 37 ಶಾಸಕರ ಪೈಕಿ ಈಗಾಗಲೇ ಮೂವರು ಪಕ್ಷ ಬಿಟ್ಟಿದ್ದಾರೆ. ಇನ್ನೊಂದು ತಿಂಗಳಲ್ಲಿ 20 ಶಾಸಕರು ಕಾಂಗ್ರೆಸ್ ಅಥವಾ ಬಿಜೆಪಿ ಸೇರುತ್ತಾರೆ. ಜೆಡಿಎಸ್ ಪಕ್ಷವೇ ಅಲ್ಲ. ಒಂದು ಕುಟುಂಬಕಷ್ಟೇ ಸೀಮಿತವಾಗಿದೆ ಎಂದು ಹರಿಹಾಯ್ದಿದ್ದಾರೆ.
ಕಳೆದ ಚುನಾವಣೆಯಲ್ಲಿ ಮಹಿಳೆಯರು, ವೃದ್ಧರು, ಅಂಗವಿಕಲರು ಹಾಗೂ ರೈತರಿಗೆ ಆಸೆ ತೋರಿಸಿದ್ದರು. ಕುಮಾರಸ್ವಾಮಿ ಸುಳ್ಳು ಭರವಸೆಯಿಂದ ಮೋಸ ಮಾಡಿದ್ದಾರೆ. ಅದರಲ್ಲೂ ಮಂಡ್ಯದಲ್ಲಿ ಒಕ್ಕಲಿಗ ಎಂಬ ಕಾರಣಕ್ಕಾಗಿ ನಂಬಿ ಮತ ಹಾಕಿದರು. ಜನ ಒಂದು ಸಾರಿ ನಂಬುತ್ತಾರೆ, ಮತ್ತೊಮ್ಮೆ ನಂಬುವುದಿಲ್ಲ. ಜೆಡಿಎಸ್ ಯಾವುದೇ ಕ್ಷೇತ್ರದಲ್ಲೂ ಗೆಲ್ಲೋದಕ್ಕೆ ಸಾಧ್ಯವಿಲ್ಲ. ಜೆಡಿಎಸ್ ಗೆದ್ದಿದ್ದ ಮೂರು ಕ್ಷೇತ್ರದಲ್ಲೂ ಕಾಂಗ್ರೆಸ್ ಗೆಲ್ಲುತ್ತದೆ ಎಂದು ಚಂದ್ರಶೇಖರ್ ಭರವಸೆ ವ್ಯಕ್ತಪಡಿಸಿದರು.
ಕೋಡಿ ಮಠದ ಸ್ವಾಮೀಜಿಗಳು ಹೇಳಿದ ಮೇಲೆ ಬಹಳಷ್ಟು ಸ್ವಾಮೀಜಿಗಳು ಕುಗ್ಗಿ ಹೋಗಿದ್ದಾರೆ. ಸ್ವಾಮೀಜಿಗಳು ಹೇಳಿದ್ದು ಇದುವರೆಗೂ 100ಕ್ಕೆ 60 ರಷ್ಟು ಸತ್ಯವಾಗಿದೆ. ಮಧ್ಯಂತರ ಚುನಾವಣೆಯ ಹೇಳಿಕೆ ವಿಚಾರದಲ್ಲೂ ನಿಜ ಆಗಬಹುದು. ಈ ಉಪಚುನಾವಣೆ ಬರುವ ಬದಲು ಮಧ್ಯಂತರ ಚುನಾವಣೆ ಬಂದಿದ್ದರೆ ಚೆನ್ನಾಗಿತ್ತು. ಉಪಚುನಾವಣೆ ಕುರಿತು ಬೆಸರ ವ್ಯಕ್ತಪಡಿಸಿದ್ದಾರೆ.