ತುಮಕೂರು: ಶಿರಾ ಡಿಪೋದ ನಿರ್ವಾಹರೊಬ್ಬರು ಬರೋಬ್ಬರಿ 6.50 ಲಕ್ಷ ಬೆಲೆ ಬಾಳುವ ಒಡವೆಯನ್ನು ಮಹಿಳಾ ಪ್ರಯಾಣಿಕರಿಗೆ ಹಿಂದಿರುಗಿಸಿ ಪ್ರಾಮಾಣಿಕತೆಯನ್ನು ಮೆರೆದಿದ್ದಾರೆ.
ಶಿರಾ ಡಿಪೋ ವ್ಯಾಪ್ತಿಯ ಶ್ರೀಧರ್ ಒಡವೆ ಹಿಂದಿರುಗಿಸಿದ ನಿರ್ವಾಹಕ. ಸೋಮವಾರ ರಾತ್ರಿ ಪಾವಗಡ ನಿವಾಸಿ ನಾಗಲತಾ ಅವರು ಪಾವಗಡದಿಂದ ಬೆಂಗಳೂರು ಮಾರ್ಗವಾಗಿ ಬಸ್ಸಿನಲ್ಲಿ ಸಂಚರಿಸಿದ್ದಾರೆ. ನಾಗಲತಾ ಅವರು ತಮ್ಮ ಮಗಳ ಸೀಮಂತಕ್ಕಾಗಿ ಒಡವೆಯನ್ನು ತಗೆದುಕೊಂಡು ಹೋಗುತ್ತಿದ್ದರು. ಆದರೆ ಇಳಿಯುವ ಅವಸರದಲ್ಲಿ ಮಹಿಳೆ ಒಡವೆ ಇದ್ದ ವ್ಯಾನಿಟಿ ಬ್ಯಾಗನ್ನು ಬಸ್ಸಿನಲ್ಲೇ ಮರೆತು ಇಳಿದಿದ್ದರು.
ಕರ್ತವ್ಯ ಮುಗಿಸಿ ಡಿಪೋಗೆ ಹಿಂದಿರುಗುವಾಗ ಬಸ್ಸಿನಲ್ಲಿ ಕಂಡಕ್ಟರ್ ಶ್ರೀಧರ್ ಅವರಿಗೆ ಬ್ಯಾಗ್ ಸಿಕ್ಕಿದೆ. ಬ್ಯಾಗಿನಲ್ಲಿ ಒಡವೆಗಳನ್ನು ನೋಡಿ ತಕ್ಷಣ ಬ್ಯಾಗನ್ನು ಕಂಡಕ್ಟರ್ ಶ್ರೀಧರ್ ತಂದು ಡಿಪೋ ಮೇಲಾಧಿಕಾರಿಗಳು ಹಾಗೂ ಪೊಲೀಸರಿಗೆ ಒಪ್ಪಿಸಿದ್ದರು. ನಂತರ ಮಹಿಳೆಗೆ ಫೋನ್ ಮಾಡಿ ಬ್ಯಾಗ್ ಸಿಕ್ಕಿರುವ ಬಗ್ಗೆ ಮಾಹಿತಿ ನೀಡಿದ್ದಾರೆ.
ಮಾಹಿತಿ ತಿಳಿದ ಮಹಿಳೆ ಇಂದು ಡಿಪೋಗೆ ಬಂದು ಒಡೆಯ ಇದ್ದ ಬ್ಯಾಗನ್ನು ಪಡೆದುಕೊಂಡಿದ್ದಾರೆ. ಬಳಿಕ ಬ್ಯಾಗ್ ಹಿಂದಿರುಗಿಸಿದ್ದ ಕಂಡಕ್ಟರ್ ಶ್ರೀಧರ್ ಗೆ ಧನ್ಯವಾದಗಳನ್ನು ತಿಳಿಸಿದ್ದಾರೆ. ಇತ್ತ ಲಕ್ಷ ಬೆಲೆ ಬಾಳುವ ಒಡೆಯನ್ನು ಹಿಂದಿರುಗಿಸಿದ್ದಕ್ಕೆ ಶ್ರೀಧರ್ ಅವರನ್ನು ಸಾರ್ವಜನಿಕರು ಶ್ಲಾಘಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv