ಬೆಂಗಳೂರು: ರಾಜ್ಯ ಬಿಜೆಪಿ ಕಾರ್ಯಕಾರಿಣಿ (BJP Karyakarini) ಅಪರೂಪದ ಪ್ರಸಂಗಕ್ಕೆ ಸಾಕ್ಷಿಯಾಗಿತ್ತು. ಯಾಕಂದ್ರೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಬಿಜೆಪಿ ಕಾರ್ಯಕಾರಿಣಿಯಲ್ಲಿ ಮಾಜಿ ಸಿಎಂ ಯಡಿಯೂರಪ್ಪ (B S Yediyurappa), ಬಿ.ಎಲ್ ಸಂತೋಷ್ (B L Santhosh) ಜುಗಲ್ ಬಂದಿ ಕಂಡುಬಂತು.
ಖುದ್ದು ಸಂತೋಷ್ ಕೈ ಹಿಡಿದು ಆತ್ಮೀಯವಾಗಿ ಬಿಎಸ್ವೈ ಮಾತಾಡಿಸಿದರು. ಬಿಎಸ್ವೈ-ಸಂತೋಷ್ ದೋಸ್ತಿ ಕಂಡು ಬಿಜೆಪಿ ಪಾಳಯದಲ್ಲಿ ಅಚ್ಚರಿ, ಕುತೂಹಲ, ದಿಗ್ಭ್ರಮೆ ಕೂಡ ಆಗಿದೆ. ಕಾರ್ಯಕರಿಣಿಗೆ ಯಡಿಯೂರಪ್ಪ ಬಂದಾಗ ಅವರನ್ನು ಕಂಡು ಬಿಎಲ್ ಸಂತೋಷ್ ಹಿಂದಿನ ಸಾಲಿಗೆ ಎದ್ದು ಹೊದ್ರು. ಇದನ್ನು ಗಮನಿಸಿದ ಬಿಎಸ್ವೈ ಸ್ವಲ್ಪ ಹೊತ್ತಿನ ಬಳಿಕ ಸಂತೋಷ್ ಕೈಹಿಡಿದು ನಗುತ್ತಾ ತಮ್ಮನ್ನು ಕಂಡು ಬೇರೆ ಕಡೆ ಹೋಗಿದ್ದೇಕೆಂದು ಕೇಳಿದ್ರು. ಈ ವೇಳೆ ಬಿಎಸ್ವೈಗೆ ಕೈಮುಗಿದು ಬಿಎಲ್ ಸಂತೋಷ್ ಉತ್ತರಿಸಿದ್ರು. ಇದನ್ನೂ ಓದಿ: ಕಾಂಗ್ರೆಸ್ ಬಿಟ್ಟು ತೆನೆ ಹೊತ್ತ ಎ.ಮಂಜು – ರೇವಣ್ಣ ವಿರುದ್ಧ ಎ.ಟಿ ರಾಮಸ್ವಾಮಿ ಬೇಸರದ ಮಾತು
ಇದರ ಮಧ್ಯೆ ಬಿಜೆಪಿಯಲ್ಲಿ ಚರ್ಚೆ ಶುರುವಾಗಿರೋದು ಏನಂದ್ರೆ ಯಡಿಯೂರಪ್ಪ ಅವರು ಪುತ್ರನಿಗೆ, ಆಪ್ತರಿಗೆ ಟಿಕೆಟ್ ಕೊಡಿಸುವ ಅನಿವಾರ್ಯತೆಯಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ಹೈಕಮಾಂಡ್ಗೆ ಹತ್ತಿರ ಇರುವ ಸಂತೋಷ್ ಜೊತೆ ವಿರಸ ಮರೆತು ಆತ್ಮೀಯತೆ ಬೆಳೆಸುವ ಕಸರತ್ತಾ..? ತಮ್ಮವರಿಗಾಗಿ ಅಡ್ಜಸ್ಟ್ಮೆಂಟ್ ಪಾಲಿಟಿಕ್ಸಾ..? ಅಥವಾ ಒಗ್ಗಟ್ಟಿನ ಸಂದೇಶವಾ..? ಬಿಎಸ್ವೈ ಹಿಂದಿನ ಲೆಕ್ಕಾಚಾರ ಏನು..? ಅನ್ನೋದು ಸದ್ಯ ಬಿಜೆಪಿಯಲ್ಲಿ ಚರ್ಚೆ ಆಗ್ತಿದೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k