ಇದೇ ತಿಂಗಳು ಬಾಲಿವುಡ್ ಖ್ಯಾತ ನಟ ಆಮೀರ್ ಖಾನ್ ನಟನೆ ಲಾಲ್ ಸಿಂಗ್ ಚಡ್ಡಾ ಸಿನಿಮಾ ರಿಲೀಸ್ ಆಗುತ್ತಿದೆ. ಈ ಸಂದರ್ಭದಲ್ಲಿ ಆಮೀರ್ ಖಾನ್ ಈ ಹಿಂದೆ ಆಡಿದ ಮಾತುಗಳನ್ನು ಆಧಾರವಾಗಿಟ್ಟುಕೊಂಡು ಚಿತ್ರವನ್ನು ಬೈಕಾಟ್ ಮಾಡಬೇಕು ಎಂದು ಹಲವರು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಳ್ಳುತ್ತಿದ್ದಾರೆ.
ಈ ಕುರಿತಂತೆ ಸ್ವತಃ ಆಮೀರ್ ಖಾನ್ ಮೊನ್ನೆಯಷ್ಟೇ ಮಾತನಾಡಿದ್ದು, ನಾನು ದೇಶದ ಬಗ್ಗೆ ಅಪಾರ ಅಭಿಮಾನ ಹೊಂದಿದ್ದೇನೆ. ದೇಶ ವಿರೋಧಿ ಮಾತುಗಳನ್ನು ಆಡಿಲ್ಲ. ಆದರೂ, ನನ್ನ ಮೇಲೆ ದೇಶದ್ರೋಹದ ಮಾತುಗಳನ್ನು ಆಡಲಾಗುತ್ತಿದೆ. ಇದನ್ನೇ ನೆನಪಾಗಿಟ್ಟುಕೊಂಡು ಸಿನಿಮಾವನ್ನು ಬೈಕಾಟ್ ಮಾಡಬೇಕೆಂದು ಹೇಳಲಾಗುತ್ತಿದೆ. ಇದು ಸರಿಯಾದದ್ದು ಅಲ್ಲ. ಆ ರೀತಿ ಟ್ರೆಂಡ್ ಮಾಡಬೇಡಿ ಎಂದು ಮನವಿ ಮಾಡಿದ್ದರು. ಇದನ್ನೂ ಓದಿ:‘ಗಾಳಿಪಟ 2’ ಟ್ರೇಲರ್ ಮೂಲಕ ಮತ್ತೊಮ್ಮೆ ಗೆದ್ದ ಯೋಗರಾಜ್ ಭಟ್
ಈ ಬೈಕಾಟ್ ಕುರಿತಂತೆ ಲಾಲ್ ಸಿಂಗ್ ಚಡ್ಡಾ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿರುವ ಕರಿಷ್ಮಾ, ವಿರೋಧಿಗಳಿಗೆ ಸಖತ್ ಚಾಟಿ ಬೀಸಿದ್ದು, ಬೈಕಾಟ್ ವಿಚಾರದಲ್ಲಿ ಕ್ಯಾರೆ ಅನಬಾರದು ಅಂದಿದ್ದಾರೆ. ಈ ಸಿನಿಮಾವನ್ನು ನೋಡಿ, ಆನಂತರ ಮಾತನಾಡಿ ಎಂದೂ ಅವರು ತಿಳಿಸಿದ್ದಾರೆ. ಕೆಲವರು ಮಾತ್ರ ಈ ರೀತಿ ಆಡುತ್ತಿದ್ದಾರೆ. ಉಳಿದವರು ಬೆಂಬಲಿಸಿದ್ದಾರೆ. ಹಾಗಾಗಿ ಬೈಕಾಟ್ ಅನ್ನುವವರನ್ನು ಗಣನೆಗೆ ತಗೆದುಕೊಳ್ಳಬೇಡಿ ಎಂದು ಆಮೀರ್ ಗೆ ಸಲಹೆ ನೀಡಿದ್ದಾರೆ.