ಕಾಗಿಣಾ ನದಿಯಲ್ಲಿ ಮುಳುಗಿ ಬಾಲಕ, ಸೋದರಮಾವ ದುರ್ಮರಣ

Public TV
0 Min Read
GLB

ಕಲಬುರಗಿ: ಕಾಗಿಣಾ ನದಿಯಲ್ಲಿ ಮುಳುಗಿ ಓರ್ವ ಬಾಲಕ ಸೇರಿದಂತೆ ಇಬ್ಬರು ಸಾವನಪ್ಪಿರುವ ಘಟನೆ ಕಲಬುರಗಿ ಜಿಲ್ಲೆ ಸೇಡಂ ತಾಲೂಕಿನ ಮೀನಹಾಬಾಳ ಗ್ರಾಮದಲ್ಲಿ ಬುಧವಾರ ನಡೆದಿದೆ.

ಮೃತರನ್ನು ಭರತ್ ಹಾಗೂ ಮಲ್ಲಿಕಾರ್ಜುನ್ ಎಂದು ಗುರುತಿಸಲಾಗಿದ್ದು, ಇವರಿಬ್ಬರೂ ಇದೇ ಗ್ರಾಮದವರು ಎನ್ನಲಾಗಿದೆ. ಭರತ್ ಕಾಲು ಜಾರಿ ನದಿಯಲ್ಲಿ ಮುಳುಗಿದ್ದ ಸಂದರ್ಭದಲ್ಲಿ ಆತನನ್ನು ರಕ್ಷಿಸಲು ಹೋದ ಸೋದರಮಾವ ಮಲ್ಲಿಕಾರ್ಜುನ್ ಸಹ ನೀರಿನಲ್ಲಿ ಮುಳುಗಿ ಸಾವನಪ್ಪಿದ್ದಾರೆ.

ಈಗಾಗಲೇ ಭರತ್‍ನ ಶವ ಹೊರತೆಗೆದಿದ್ದು, ಮಲ್ಲಿಕಾರ್ಜುನ್ ಅವರ ಶವಕ್ಕಾಗಿ ಇಂದು ಸಹ ಶೋಧ ಕಾರ್ಯ ಮುಂದುವರೆದಿದೆ. ಈ ಕುರಿತು ಮಳಖೇಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

GLB DEATH AV 1

GLB DEATH AV 2

vlcsnap 2017 10 20 11h22m50s85

vlcsnap 2017 10 20 11h22m37s210

vlcsnap 2017 10 20 11h22m24s78

vlcsnap 2017 10 20 11h22m15s230

Share This Article
Leave a Comment

Leave a Reply

Your email address will not be published. Required fields are marked *