ಹಾಸನ: ನಮಗೆ ವೈರಿಗಳ ಕಾಟ ಹೆಚ್ಚು. ದೇವರ ದರ್ಶನ ಮಾಡದಿದ್ರೆ ವೈರಿಗಳ ಕಾಟಕ್ಕೆ ಬದುಕಲು ಆಗಲ್ಲ. ಹೀಗಾಗಿ ಬೆಳಗ್ಗೆ ಎದ್ದು ದೇವರ ದರ್ಶನ ಮಾಡುತ್ತೇನೆ ಎಂದು ಮಾಜಿ ಸಚಿವ ಹೆಚ್ಡಿ.ರೇವಣ್ಣ ಹೇಳಿದ್ದಾರೆ. ಇದನ್ನೂ ಓದಿ: ಉಪ ಚುನಾವಣೆ ಗೆಲ್ಲುವ ವಿಶ್ವಾಸ ಇದೆ: ದೇವೇಗೌಡ
ಹಾಸನದಲ್ಲಿ ಮಾತನಾಡಿದ ಅವರು, ತಾವು ಯಾಕೆ ದೇವರ ಮೇಲೆ ಅಪಾರ ನಂಬಿಕೆ ಇಟ್ಟಿದ್ದೇವೆ ಎಂಬ ಗುಟ್ಟನ್ನು ಬಿಚ್ಚಿಟ್ಟಿದ್ದಾರೆ. ದೇವರ ದರ್ಶನ ಮಾಡದೆ ಹೋದರೆ ನಮಗೆ ವೈರಿಗಳ ಕಾಟ. ವೈರಿಗಳ ಕಾಟದಲ್ಲಿ ಬದುಕಲು ಆಗಲ್ವಲಾ ಎಂದು ಹೇಳಿದ್ದಾರೆ. ಇದನ್ನೂ ಓದಿ: ಕೆಜಿಎಫ್ 2 ಚಿತ್ರೀಕರಣದ ಫೋಟೋ ವೈರಲ್
ಬೆಳಿಗ್ಗೆ ಎದ್ದು ಲಕ್ಷ್ಮೀನರಸಿಂಹ ನೋಡಿಕೊಂಡು ಬಂದೆ. ಲಕ್ಷ್ಮೀನರಸಿಂಹ ಅಂದರೆ ಯಾರೇ ಏನೇ ಮಾಟ ಮಾಡಿದರೆ ಅವರಿಗೆ ರಿವರ್ಸ್ ಆಗುತ್ತದೆ. ಇವತ್ತು ಸಾಯಂಕಾಲ ಚಾಮುಂಡಿ ಬೆಟ್ಟಕ್ಕೆ ಹೋಗಿ ಬರೋಣ ಅಂಥಾ ಮಾಡಿದ್ದೀನಿ ಎಂದು ರೇವಣ್ಣ ತಿಳಿಸಿದ್ದಾರೆ. ಇದನ್ನೂ ಓದಿ: ಡಿಎಪಿ,ಪೊಟ್ಯಾಷ್ಗಾಗಿ ರಾಜ್ಯದಿಂದ ಕೇಂದ್ರಕ್ಕೆ ಬೊಮ್ಮಾಯಿ ಮನವಿ