ಪೊಲೀಸರ ಮುಂದೆಯೇ ಕೇರಳ ಬಿಜೆಪಿಯ ರಾಜ್ಯ ಕಚೇರಿಯ ಮೇಲೆ ಕಲ್ಲು ತೂರೋದನ್ನು ನೋಡಿ

Public TV
1 Min Read
BJE OFFIC KERALA 5

ತಿರುವನಂತಪುರಂ: ಕೇರಳ ಬಿಜೆಪಿಯ ರಾಜ್ಯ ಕಚೇರಿ ಮೇಲೆ ಸಿಪಿಐ(ಎಂ) ಕಾಯಕರ್ತರು ದಾಳಿ ಮಾಡಿರುವ ಘಟನೆ ಶುಕ್ರವಾರ ಬೆಳಗ್ಗೆ ತಿರುವನಂತಪುರಂನಲ್ಲಿ ನಡೆದಿದೆ.

ಬಿಜೆಪಿ ರಾಜ್ಯಾಧ್ಯಕ್ಷ ಕುಮ್ಮನನ್ ರಾಜಶೇಖರ್ ಕಚೇರಿಯಲ್ಲಿರುವ ವೇಳೆ ಈ ದಾಳಿ ನಡೆದಿದೆ. ಆ ಸ್ಥಳದಲ್ಲಿ ಪೊಲೀಸರಿದ್ದರೂ ಕೂಡ ದುಷ್ಕರ್ಮಿಗಳು ಕೈಗೆ ಸಿಕ್ಕಿದ್ದನ್ನು ತೂರಿ ಬಿಜೆಪಿ ಕಚೇರಿಯ ಕಿಟಕಿ ಗಾಜುಗಳನ್ನ ಪುಡಿ ಪುಡಿ ಮಾಡಿ ಅಲ್ಲೇ ನಿಂತಿದ್ದ ವಾಹಗಳ ಮೇಲೂ ಕಲ್ಲುತೂರಾಟ ನಡೆಸಿದ್ದಾರೆ.

ಬಿಜೆಪಿ ನಾಯಕರು ಸಿಪಿಐ(ಎಂ) ಕಾರ್ಯಕರ್ತರು ಈ ಕೃತ್ಯದ ಹಿಂದೆ ಇದ್ದಾರೆ ಎಂದು ಆರೋಪಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.

ರಾಜಶೇಖರ್ ಅವರ ಕಾರು ಸೇರಿದಂತೆ ಸ್ಥಳದಲ್ಲಿ ಪಾರ್ಕ್ ಮಾಡಿದ್ದ 6 ಕಾರುಗಳು ಮೇಲೆ ದಾಳಿ ನಡೆಸಲಾಗಿದೆ.

BJE OFFIC KERALA 4

BJE OFFIC KERALA 3

BJE OFFIC KERALA 2

BJE OFFIC KERALA 1

Share This Article
Leave a Comment

Leave a Reply

Your email address will not be published. Required fields are marked *