ಬೆಂಗಳೂರು: ಸಚಿವ ಮಾಧುಸ್ವಾಮಿ (Madhuswamy) ಅಗ್ರೆಸ್ಸಿವ್ ಮಾತಿನ ಬೆನ್ನಲ್ಲೇ ಪಕ್ಷದಲ್ಲಿ ಅಸಮಾಧಾನ ಭುಗಿಲೆದ್ದಿದೆ. ನಾವು ಎಲೆಕ್ಷನ್ (Election) ಗೆ ದಾರಿ ಮಾಡೋದು, ಮಾಧುಸ್ವಾಮಿ ಡ್ಯಾಮೇಜ್ ಮಾಡೋದಾ? ಎಂಬ ಆಕ್ರೋಶ ವ್ಯಕ್ತವಾಗುತ್ತಿದೆ ಎನ್ನಲಾಗಿದೆ.
ಪದೇ ಪದೇ ಮಾಧುಸ್ವಾಮಿಗೆ ಏಕೆ ಇಷ್ಟು ಧಾರಾಳತನ. ಬಿಗಿ ಮಾಡಿ ಎಂದು ಕೆಲ ಸಚಿವರ ಒತ್ತಡ ಹಾಕಿರುವ ಬಗ್ಗೆ ಬಿಜೆಪಿ ಮೂಲಗಳು ತಿಳಿಸಿವೆ. ರಾಜ್ಯಾಧ್ಯಕ್ಷರು, ಶಿಸ್ತು ಸಮಿತಿಗೆ ಸಚಿವರ ಗುಂಪೊಂದು ಒತ್ತಡ ಹಾಕಿದೆ ಎನ್ನಲಾಗಿದೆ. ಇದನ್ನೂ ಓದಿ: ಮಾಧುಸ್ವಾಮಿ ಮೊದಲು ಮಾತಾಡಲಿ- ಸಚಿವರ ಹೇಳಿಕೆಗೆ ಸಿಎಂ ವ್ಯಂಗ್ಯ
ಈ ಹಿಂದೆ ಸರ್ಕಾರದ ಬಗ್ಗೆ ಮಾತನಾಡಿ, ಸ್ವಪಕ್ಷೀಯರ ಟೀಕೆಗೆ ಸಚಿವ ಮಾಧುಸ್ವಾಮಿ ಗುರಿಯಾಗಿದ್ದರು. ನಮ್ಮ ಸರ್ಕಾರನ್ನ ತಳ್ಳಿಕೊಂಡು ಹೋಗ್ತಿದ್ದೇವೆ, ಮ್ಯಾನೇಜ್ ಮಾಡ್ತಿದ್ದೇವೆ ಅಷ್ಟೇ ಅಂತ ಮಾಧುಸ್ವಾಮಿ ಹೇಳಿದ್ದರು. ಕಾರ್ಯಕರ್ತರೊಬ್ಬರ ಜೊತೆ ದೂರವಾಣಿಯಲ್ಲಿ ಮಾತನಾಡಿ, ಸರ್ಕಾರಕ್ಕೆ ಡ್ಯಾಮೇಜ್ ಆಗುವ ರೀತಿ ಮಾಧುಸ್ವಾಮಿ ಹೇಳಿಕೆ ಕೊಟ್ಟಿದ್ದರು.
ಈಗ ಪಕ್ಷದ ಅಗ್ರೆಸ್ಸಿವ್ (Aggressive Talk) ಬಗ್ಗೆ ಮಾತನಾಡಿ ಕೆಲ ಸಚಿವರು, ಪಕ್ಷದ ನಾಯಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಮಾಧುಸ್ವಾಮಿ ನಿನ್ನೆ ಬಹಿರಂಗವಾಗಿಯೇ ಸಿಎಂ ಬಸವರಾಜ ಬೊಮ್ಮಾಯಿ ಮಾಧುಸ್ವಾಮಿ ಮೇಲೆ ಗರಂ ಆಗಿ ತಿರುಗೇಟು ಕೊಟ್ಟಿದ್ರು. ಈಗ ಪಕ್ಷದ ವೇದಿಕೆಯಲ್ಲೂ ಮಾಧುಸ್ವಾಮಿ ಹೇಳಿಕೆ ಬಗ್ಗೆ ತೀವ್ರ ಅಸಮಾಧಾನ ಕೇಳಿಬಂದಿದೆ.
ಪಕ್ಷದ ಬಗ್ಗೆ ಲೂಸ್ ಟಾಕ್ ಮಾತನಾಡದಂತೆ ಕಟ್ಟಾಜ್ಞೆ ವಿಧಿಸಿ ಎಂದು ಕೆಲ ಸಚಿವರಿಂದ ಒತ್ತಡ ಹಾಕಿದ್ದು, ರಾಜ್ಯಾಧ್ಯಕ್ಷರು ಏನ್ ಸೂಚನೆ ಕೊಡ್ತಾರೆ ಕಾದುನೋಡಬೇಕಿದೆ. ಇದನ್ನೂ ಓದಿ: ನಾವೆಲ್ಲಾ ಮೂಕ ಪ್ರೇಕ್ಷಕರಾಗಿರೋದು ನಮ್ಮ ದೌರ್ಭಾಗ್ಯ – ಬಿಜೆಪಿಯ ದೌರ್ಬಲ್ಯ ಹೇಳಿಕೊಂಡ ಮಾಧುಸ್ವಾಮಿ
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k