ರಾಮಲಿಂಗಾ ರೆಡ್ಡಿ ಮನೆಗೆ ಬಿಜೆಪಿ ನಾಯಕರು ಭೇಟಿ

Public TV
1 Min Read
Ramalinga Reddy

ಬೆಂಗಳೂರು: ರೆಬೆಲ್ ಶಾಸಕ ರಾಮಲಿಂಗಾ ರೆಡ್ಡಿ ಮನೆಗೆ ಬಿಜೆಪಿ ನಾಯಕರಾದ ಶಾಸಕ ಎಸ್.ಆರ್ ವಿಶ್ವನಾಥ್ ಮತ್ತು ಎಂ. ಕೃಷ್ಣಪ್ಪ ಭೇಟಿ ಕೊಟ್ಟಿದ್ದಾರೆ.

ಎಸ್.ಆರ್ ವಿಶ್ವನಾಥ್ ಮತ್ತು ಎಂ. ಕೃಷ್ಣಪ್ಪ ಅವರು ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ರಾಮಲಿಂಗಾ ರೆಡ್ಡಿ ಜೊತೆ ಮಾತುಕತೆ ನಡೆಸಿದ್ದಾರೆ. ಚರ್ಚೆ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ವಿಶ್ವನಾಥ್, ಯಾವುದೇ ರಾಜಕೀಯ ಮಾತನಾಡಲು ಬಂದಿಲ್ಲ. ರೆಡ್ಡಿ ಸಂಘದ ಚುನಾವಣೆ ದಿನಾಂಕ 15ಕ್ಕೆ ನಾಮಿನೇಷನ್ ಲಾಸ್ಟ್ ಇದೆ. 27ಕ್ಕೆ ಚುನಾವಣೆ ಇದೆ. ಈ ಕಾರಣಕ್ಕೆ ಬಂದಿದ್ದೇವೆ ಅಷ್ಟೇ. ಅವರು ಒಂಥರಾ ಬಂಡೆ ಇದ್ದ ಹಾಗೆ, ಯಾರು ಏನೇ ಮಾಡಿದರೂ ಅವರ ನಿರ್ಧಾರ ಅವರದ್ದು ಎಂದು ಹೇಳಿದರು.

vlcsnap 2019 07 13 10h40m51s240

ಸಿಎಂ ಅವರ ಬಳಿ ನಂಬರ್ ಇಲ್ಲ. ಯಾವ ನಂಬರ್ ಗೇಮ್ ಆಗಲ್ಲ. ಗೌರವದಿಂದ ನಿರ್ಗಮಿಸಬೇಕು ಅನ್ನೋದು ಸಿಎಂ ಮನಸ್ಸಿನಲ್ಲಿ ಇರಬೇಕು. ಅದಕ್ಕೆ ವಿಶ್ವಾಸಮತ ಯಾಚನೆ ನಿರ್ಧಾರ ಮಾಡಿದ್ದಾರೆ. ನಂಬರ್ ಗೇಮ್ ಆಡಲಿಕ್ಕೆ ಸಾಧ್ಯವಿಲ್ಲ. ವಿಶ್ವಾಸಮತ ಯಾಚನೆ ದಿನ ಅವರ ಬಳಿ ಇರುವ ಕೆಲ ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರೇ ಗೈರಾಗುತ್ತಾರೆ ನೋಡಿ ಎಂದು ವಿಶ್ವನಾಥ್ ಪರೋಕ್ಷವಾಗಿ ಸಮ್ಮಿಶ್ರ ಸರ್ಕಾರ ಇರುವುದಿಲ್ಲ ಎಂದು ತಿಳಿಸಿದರು.

Share This Article
Leave a Comment

Leave a Reply

Your email address will not be published. Required fields are marked *