ಮಂಗಳೂರು: ಬಿಜೆಪಿ ಸಭೆಯಲ್ಲಿ ಪಾಲ್ಗೊಂಡಿದ್ದಕ್ಕೆ ಮುಸ್ಲಿಂ ಮುಖಂಡನಿಗೆ ಧಮ್ಕಿ

Public TV
1 Min Read
MNG 8

ಮಂಗಳೂರು: ಸಚಿವ ಯು.ಟಿ.ಖಾದರ್ ಕ್ಷೇತ್ರವನ್ನು ಈ ಬಾರಿ ಪಡೆದೇ ಪಡೆಯಬೇಕೆನ್ನುವ ನಿಟ್ಟಿನಲ್ಲಿ ಬಿಜೆಪಿ ಚಾಣಾಕ್ಷ ನಡೆಯನ್ನಿಟ್ಟಿದೆ. ಇದಕ್ಕೆ ಉದಾಹರಣೆಯೆಂಬಂತೆ ಯುಟಿ ಖಾದರ್ ಸ್ಪರ್ಧಿಸುವ ಮಂಗಳೂರು ಕ್ಷೇತ್ರದಲ್ಲಿ(ಉಳ್ಳಾಲ) ಬಿಜೆಪಿ ಅಲ್ಪ ಸಂಖ್ಯಾತ ಮೋರ್ಚಾ, ಮುಡಿಪು ಸಮೀಪದ ಬೋಳಿಯಾರ್‍ನಲ್ಲಿ ಮುಸ್ಲಿಂ ಧರ್ಮಗುರುಗಳ ಸಭೆಯನ್ನು ಆಯೋಜಿಸಿದೆ.

ಈ ಸಭೆಯಲ್ಲಿ ನೂರಾರು ಮುಸ್ಲಿಂ ಧರ್ಮಗುರುಗಳು ಭಾಗಿಯಾಗಿದ್ದು ಮಸ್ಲಿಂ ಮತವನ್ನು ಬಿಜೆಪಿ ಸೆಳೆಯಲು ಈ ಮೂಲಕ ಪ್ರಯತ್ನಿಸುತ್ತಿದೆ ಎಂದು ರಾಜಕೀಯ ಲೆಕ್ಕಾಚಾರ ಆರಂಭಗೊಂಡಿದೆ.

ಈ ನಡುವೆ ಈ ಸಭೆಯಲ್ಲಿ ಭಾಗಿಯಾಗಿದ್ದ ಧರ್ಮಗುರು ಎ.ಬಿ.ಹನೀಫ್ ಎಂಬವರಿಗೆ ವಿದೇಶದಿಂದ ಬೆದರಿಕೆ ಕರೆಯೊಂದು ಬಂದಿದ್ದು, ಇಂತಹ ಬಿಜೆಪಿ ಸಭೆಯಲ್ಲಿ ಇನ್ನು ಭಾಗವಹಿಸಿದರೆ ಎಚ್ಚರಿಕೆ ಎಂದು ಧಮ್ಕಿ ಹಾಕಲಾಗಿದೆ.

ಈ ಬಗ್ಗೆ ಕೋಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣವೂ ದಾಖಲಾಗದೆ.

MNG 7

MNG 6

MNG 5

MNG 4

MNG 3

MNG 2

MNG 1

Share This Article
Leave a Comment

Leave a Reply

Your email address will not be published. Required fields are marked *