ಬೆಂಗಳೂರು: ಬಿಜೆಪಿಯಲ್ಲಿ ಕ್ಷಣಕ್ಕೊಂದು ಹೇಳಿಕೆ, ದಿನಕ್ಕೊಂದು ಕುತೂಹಲಕ್ಕೆ ಬ್ರೇಕ್ ಹಾಕಲು ಹೈಕಮಾಂಡ್ ಪ್ಲಾನ್ ಮಾಡಿದ್ದು ಕೈ ಕಟ್ ಬಾಯಿ ಮುಚ್ಚಿ..! ಎಂಬ ಸಂದೇಶ ರವಾನೆ ಆಗಿದೆ. ನಾಳೆಯಿಂದ ಹುಬ್ಬಳ್ಳಿಯಲ್ಲಿ ಎರಡು ದಿನಗಳ ಕಾಲ ನಡೆಯುವ ರಾಜ್ಯ ಬಿಜೆಪಿ ಕಾರ್ಯಕಾರಿಣಿಯಲ್ಲಿ ಹೈಕಮಾಂಡ್ನ ಸಂದೇಶ ಎರಡನೇ, ಮೂರನೇ ಸಾಲಿನ ನಾಯಕರಿಗೆ ತಲುಪುವ ಸಾಧ್ಯತೆ ಇದೆ. ನಾಳೆ ಬಿಜೆಪಿ ಕಾರ್ಯಕಾರಿಣಿ ಸಭೆಗೆ ಚಾಲನೆ ಸಿಗಲಿದ್ದು. ನಾಳೆಯೇ ರಾಜ್ಯ ಬಿಜೆಪಿ ಪದಾಧಿಕಾರಿಗಳ ಸಭೆ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಮೇಲುಸ್ತುವಾರಿಯಲ್ಲಿ ನಡೆಯಲಿದೆ.
ಡಿಸೆಂಬರ್ 29ರ ಬುಧವಾರ ರಾಜ್ಯ ಬಿಜೆಪಿ ಕಾರ್ಯಕಾರಿಣಿ ಬಿಗ್ ಡೇ ಆಗಲಿದ್ದು, ಅವತ್ತೇ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾಗೆ ರಾಜ್ಯ ಬಿಜೆಪಿ ಘಟಕ ಆಹ್ವಾನ ನೀಡಿದೆ. ಡಿಸೆಂಬರ್ 29ರಂದೇ ಮಧ್ಯಾಹ್ನ ರಾಜ್ಯ ಬಿಜೆಪಿ ಕೋರ್ ಕಮಿಟಿ ಸಭೆ ಕೂಡ ನಿಗದಿಯಾಗಿದೆ. ಅಂದುಕೊಂಡಂತೆ ಜೆ.ಪಿ.ನಡ್ಡಾ ಹುಬ್ಬಳಿಗೆ ಆಗಮಿಸಿದ್ರೆ ಕಾರ್ಯಕಾರಿಣಿ ಮಹತ್ವ ಪಡೆದುಕೊಳ್ಳಲಿದೆ. ಇದನ್ನೂ ಓದಿ: ಕಸ ಎಸೆದ ಯುವಕನಿಗೆ ರಸ್ತೆ ಮಧ್ಯೆ ಸಿಟಿ ರವಿ ಕ್ಲಾಸ್
ರಾಜ್ಯ ಕಾರ್ಯಕಾರಿಣಿ ಸಭೆಯು ಡಿಸೆಂಬರ್ 28, 29 ರಂದು ಹುಬ್ಬಳ್ಳಿಯ ಡೆನಿಸನ್ಸ್ ಹೊಟೆಲ್ನಲ್ಲಿ ನಡೆಯಲಿದೆ. #BJPKarHubballiKaryakarini pic.twitter.com/bjf8RUO7k2
— BJP Karnataka (@BJP4Karnataka) December 27, 2021
ಇನ್ನು ಸಂಪುಟ ಪುನಾರಚನೆ ಸುಳಿವು ಕಾರ್ಯಕಾರಿಣಿಯಲ್ಲೇ ಸಿಕ್ಕಿಬಿಡುತ್ತಾ.?, ಸಂಕ್ರಾಂತಿ ಬಳಿಕ ಸಂಪುಟ ಪುನಾರಚನೆ ಆಗುತ್ತಾ ಅನ್ನೋ ಚರ್ಚೆ ಶುರುವಾಗಿದೆ. ಕ್ಯಾಬಿನೆಟ್ನಲ್ಲಿ ಇರುವ ಹಾಲಿ ಸಚಿವರಲ್ಲಿ ಕೆಲ ಹಿರಿತಲೆಗಳಿಗೆ, ಕೆಲ ವಲಸಿಗರಿಗೂ ಟೆನ್ಷನ್ ಶುರುವಾಗಿದೆ. ಹೈಕಮಾಂಡ್ ಏನ್ ಮಾಡುತ್ತೆ.. ನಮ್ಮನ್ನ ಉಳಿಸ್ತಾರಾ.. ತೆಗೆದುಬಿಡ್ತಾರಾ ಅಂತಾ ಆತಂಕದಲ್ಲಿದ್ದಾರೆ ಕೆಲ ಸಚಿವರು. ಆದ್ರೆ ಬಜೆಟ್ ಮುಂದಿಟ್ಟುಕೊಂಡು, ಉತ್ತರ ಪ್ರದೇಶ ಚುನಾವಣೆ ಮುಂದಿಟ್ಟುಕೊಂಡು ಕರ್ನಾಟಕಕ್ಕೆ ಕೈ ಹಾಕುತ್ತಾ ಬಿಜೆಪಿ ಹೈಕಮಾಂಡ್ ಅನ್ನೋ ಕುತೂಹಲ ಮನೆ ಮಾಡಿದೆ. ಈ ನಡುವೆ ಪದೇ ಪದೇ ಸಂಪುಟ ಪುನಾರಚನೆ ಬಗ್ಗೆ, ಬೇರೆ ಬೇರೆ ರಾಜಕೀಯ ಬದಲಾವಣೆಗಳ ಬಗ್ಗೆ ಮಾತಾಡುವ ನಾಯಕರಿಗೆ ಬಿಸಿ ಮುಟ್ಟಿಸುವ ಸಾಧ್ಯತೆ ಇದೆ. ಇದನ್ನೂ ಓದಿ: ಸರ್ಕಾರದ ನೈಟ್ ಕರ್ಫ್ಯೂ ಆದೇಶಕ್ಕೆ ಸಿ.ಟಿ.ರವಿ ಅಸಮಾಧಾನ
ಇನ್ನೊಂದೆಡೆ ಪರಿಷತ್ ಚುನಾವಣೆಯಲ್ಲಿ ಬೆಳಗಾವಿ ಕ್ಷೇತ್ರದ ಸೋಲಿನ ಬಗ್ಗೆಯೂ ಬಿಸಿ ಬಿಸಿ ಚರ್ಚೆ ನಡೆದ್ರೂ ಅಚ್ಚರಿ ಇಲ್ಲ ಎನ್ನಲಾಗಿದೆ. ಒಟ್ನಲ್ಲಿ ಪ್ರತಿ ಎರಡ್ಮೂರು ತಿಂಗಳಿಗೊಮ್ಮೆ ನಡೆಯುವ ರಾಜ್ಯ ಕಾರ್ಯಕಾರಿಣಿ ಆಯಾ ಬೆಳವಣಿಗೆಗೆ ಅನುಗುಣವಾಗಿ ಮಹತ್ವ ಪಡೆದುಕೊಳ್ಳಲಿದ್ದು, ರಾಜಕೀಯ ಬದಲಾವಣೆ ಗಾಳಿ ಸುದ್ದಿಯಿಂದಾಗಿ ಹುಬ್ಬಳ್ಳಿ ಸಭೆ ಕೂಡ ಎಲ್ಲರ ಗಮನ ಸೆಳೆದಿದೆ. ಅಂತಿಮವಾಗಿ ಯಾರಿಗೆ ಯಾವ ಉತ್ತರ ಸಿಗುತ್ತೆ ಎಂಬುದನ್ನು ಕಾದು ನೋಡಬೇಕಿದೆ. ಇದನ್ನೂ ಓದಿ: ಮಂಡಿ ನೋವಿಗೆ ನಾಟಿ ಚಿಕಿತ್ಸೆ ಪಡೆದ ಸಿಎಂ ಬೊಮ್ಮಾಯಿ