ವಾಷಿಂಗ್ಟನ್: ಆಪರೇಷನ್ ಸಿಂಧೂರ (Operation Sindoor) ಕಾರ್ಯಾಚರಣೆಯಲ್ಲಿ ಬಲಿಯಾದ ಉಗ್ರರ ಅಂತ್ಯಕ್ರಿಯೆ ನೇತೃತ್ವ ವಹಿಸಿದ್ದ ಎಲ್ಇಟಿ ಕಮಾಂಡರ್ ಹಫೀಜ್ ಅಬ್ದುರ್ ರೌಫ್ ಭಯೋತ್ಪಾದಕ ಅಲ್ಲ. ಆತ ಸ್ಥಳೀಯ ಧರ್ಮಗುರು ಅಂತ ಪಾಕ್ (Pakistan) ಮಾಜಿ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ (Operation Sindoor) ಹೇಳಿದ್ದಾನೆ.
ವಿಶ್ವಸಂಸ್ಥೆಯಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ಜಾಗತಿಕ ಉಗ್ರನೆಂದು ಘೋಷಿಸಿರುವುದರಲ್ಲಿ ಈತನ ಹೆಸರು ಇದೆ. ಆದರೆ ಆತ ಭಯೋತ್ಪಾದಕನಲ್ಲ. ಭಾರತ ಕೂಡ ತಪ್ಪು ಫೋಟೋ ಹಂಚಿಕೊಂಡಿದೆ. ಭಯೋತ್ಪಾದನೆ ನಿಗ್ರಹಕ್ಕೆ ಈಗಲೂ ಭಾರತಕ್ಕೆ ಪಾಕ್ ಸಹಕಾರ ನೀಡಲಿದೆ. ಭಾರತ ರಾಯಭಾರ ಸಂಸ್ಥೆಯು ಐಎಸ್ಐ ಜೊತೆ ಕೂತು ಚರ್ಚಿಸಿ ಕಾರ್ಯ ನಿರ್ವಹಿಸಿದರೆ 2 ದೇಶಗಳಲ್ಲಿನ ಭಯೋತ್ಪಾದನೆಯನ್ನು ನಿರ್ಮೂಲನೆ ಮಾಡಬಹುದು ಎಂದಿದ್ದಾನೆ. ಇದನ್ನೂ ಓದಿ: ಉಗ್ರ ಪ್ರೇಮಿ ಪಾಕ್ಗೆ ಮಿಲಿಟರಿ ಬಜೆಟ್ಟೇ ಭಸ್ಮಾಸುರ!?
ನಾವು ಭಯೋತ್ಪಾದನೆಯನ್ನು ಹೇಗೆ ಎದುರಿಸಬೇಕೆಂದು ಕಲಿತಿದ್ದೇವೆ. ನಾವು ಪರಿಣಿತರು, ಭಾರತವು ಭಯೋತ್ಪಾದನೆ ವಿರುದ್ಧ ಹೇಗೆ ಹೋರಾಡಬೇಕು ಎಂಬುದನ್ನು ಐಎಸ್ಐನಿಂದ ಪಾಠ ಕಲಿಯಬೇಕು ಅಂತ ಬಿಟ್ಟಿ ಸಲಹೆ ಕೊಟ್ಟಿದ್ದಾನೆ.
2018ರಲ್ಲಿ ಬಿಡುಗಡೆಯಾದ ದಾಖಲೆಗಳ ಪ್ರಕಾರ ಲಷ್ಕರ್-ಎ-ತೋಯ್ಬಾದ ಪಾಕಿಸ್ತಾನ್ ಮರ್ಕಝಿ ಮುಸ್ಲಿಂ ಲೀಗ್ (PMML) ನೊಂದಿಗೆ ರೌಫ್ ನಂಟು ಹೊಂದಿದ್ದಾನೆ ಎಂಬುದು ಖಚಿತವಾಗಿತ್ತು. ಇದನ್ನೂ ಓದಿ: ಸಿಂಧೂ ಜಲ ಒಪ್ಪಂದ ವಿಚಾರದಲ್ಲಿ ಎಂದಿಗೂ ಭಾರತಕ್ಕೆ ತಲೆಬಾಗಲ್ಲ – ಮತ್ತೆ ಬುಸುಗುಟ್ಟಿದ ಅಸಿಮ್ ಮುನೀರ್