Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • Live TV
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Latest

ವರದಕ್ಷಿಣೆಗಾಗಿ ಹೆಂಡ್ತಿಯನ್ನ ಕೊಂದನೆಂದು ಗಂಡ ಜೈಲಿನಲ್ಲಿ, ಹೆಂಡತಿ ಲವರ್ ಜೊತೆ!

Public TV
Last updated: May 11, 2017 4:40 pm
Public TV
Share
2 Min Read
pinki 1
SHARE

ಪಾಟ್ನಾ: 2015ರಲ್ಲಿ ವರದಕ್ಷಿಣೆಗಾಗಿ ಹೆಂಡತಿಯನ್ನ ಕೊಲೆ ಮಾಡಿದ ಆರೋಪದ ಮೇಲೆ ಗಂಡ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ರೆ ಅತ್ತ ಹೆಂಡತಿ ತನ್ನ ಪ್ರಿಯಕರನ ಜೊತೆಗಿದ್ದ ಸಂಗತಿ ಈಗ ಬೆಳಕಿಗೆ ಬಂದಿದೆ.

ಬಿಹಾರದ ಮುಜಾಫರ್‍ಪುರದ ನಿವಾಸಿ ಪಿಂಕಿಗೆ 2015ರಲ್ಲಿ ಮನೋಜ್ ಶರ್ಮಾ ಜೊತೆ ವಿವಾಹವಾಗಿತ್ತು. ಆದ್ರೆ ಮದುವೆಯಾದ ಕೆಲವೇ ತಿಂಗಳಲ್ಲಿ ಪಿಂಕಿ ನಾಪತ್ತೆಯಾಗಿದ್ದಳು. ಪಿಂಕಿ ಕುಟುಂಬಸ್ಥರು ಮನೋಜ್ ಶರ್ಮಾ ವಿರುದ್ಧ ವರದಕ್ಷಿಣೆ ಕಿರುಕುಳ ಪ್ರಕರಣ ದಾಖಲಿಸಿ, ನಮ್ಮ ಮಗಳನ್ನ ಈತನೇ ಕೊಂದಿದ್ದಾನೆ ಎಂದು ಆರೋಪಿಸಿದ್ದರು.

ಕೆಲವು ವಾರಗಳ ನಂತರ ಮುಜಾಫರ್‍ಪುರದ ಸರೈಯ್ಯಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗುರುತು ಸಿಗಲಾರದಂತಹ ಕೊಳೆತ ಶವವೊಂದು ಪತ್ತೆಯಾಗಿತ್ತು. ಈ ಶವ ನಮ್ಮ ಮಗಳದ್ದೇ ಎಂದು ಪಿಂಕಿ ಪೋಷಕರು ಗುರುತಿಸಿದ್ದರು. ನಂತರ ಹೆಂಡತಿಯನ್ನ ಕೊಲೆ ಮಾಡಿದ್ದಾರೆಂಬ ಆರೋಪದ ಮೇಲೆ ಮನೋಜ್ ಶರ್ಮಾ ಅವರನ್ನ ಪೊಲೀಸರು ಬಂಧಿಸಿದ್ರು. ಸದ್ಯ ಮನೋಜ್ ಶರ್ಮಾ ಜೈಲಿನಲ್ಲಿದ್ದಾರೆ.

ಹೆಂಡತಿ ಬದುಕಿರೋದು ಗೊತ್ತಾಗಿದ್ದು ಹೇಗೆ?: ಕಳೆದ ಕೆಲವು ವಾರಗಳ ಹಿಂದೆ ಮನೋಜ್ ಶರ್ಮಾ ಅವರ ಕುಟುಂಬಸ್ಥರಿಗೆ ಪರಿಚಯಸ್ಥರೊಬ್ಬರ ಕರೆ ಬಂದಿತ್ತು. ಮಧ್ಯಪ್ರದೇಶದ ಜಬಲ್‍ಪುರದ ಕಾಂಟ್ ಪ್ರದೇಶದಲ್ಲಿ ನಾನು ಪಿಂಕಿಯನ್ನ ಮತ್ತೊಬ್ಬ ವ್ಯಕ್ತಿಯ ಜೊತೆಯಲ್ಲಿ ನೋಡಿದೆ ಎಂದು ಅವರು ಹೇಳಿದ್ದರು. ಆ ಬಳಿಕ ಮನೋಜ್ ಶರ್ಮಾ ಕುಟುಂಬಸ್ಥರು ಕೂಡ ಜಬಲ್‍ಪುರಕ್ಕೆ ಹೋಗಿ ಪಿಂಕಿಯನ್ನು ಕಣ್ಣಾರೆ ನೋಡಿದ ಮೇಲೆ ನಮಗೆ ಮಾಹಿತಿ ನೀಡಿದ್ರು ಎಂದು ಸರೈಯ್ಯಾ ಪೊಲೀಸ್ ಠಾಣೆಯ ಸಬ್ ಇನ್ಸ್‍ಪೆಕ್ಟರ್ ಶತ್ರುಘ್ನ ಶಮಾ ಪತ್ರಿಕೆಯೊಂದಕ್ಕೆ ತಿಳಿಸಿದ್ದಾರೆ.

ಪಿಂಕಿಗೆ ಮದುವೆಗೂ ಮುಂಚೆ ಮಯೂರ್ ಮಲಿಕ್ ಎಂಬಾತನ ಜೊತೆ ಸಂಬಂಧವಿತ್ತು. ತನಗೆ ಇಷ್ಟವಿಲ್ಲದೆ ಮನೋಜ್ ಶರ್ಮಾ ಜೊತೆ ಮದುವೆಯಾಗಿದ್ದಳು. ನಂತರ ಮಲಿಕ್ ಹಾಗೂ ಪಿಂಕಿ ಮುಜಾಫರ್‍ಪುರದಿಂದ ಓಡಿಹೋಗಿ ಜಬಲ್‍ಪುರದ ಕಾಂಟ್ ಪ್ರದೇಶದಲ್ಲಿ ನೆಲೆಸಿದ್ರು. ಇದೀಗ ಇಬ್ಬರನ್ನೂ ಬಿಹಾರಕ್ಕೆ ಕರೆದುಕೊಂಡು ಹೋಗಲಾಗ್ತಿದೆ ಎಂದು ಬಿಹಾರ ಪೊಲೀಸರು ಮಾಹಿತಿ ನೀಡಿದ್ದಾರೆ. ಮನೋಜ್ ಅವರನ್ನ ಕೊಲೆ ಆರೋಪಿಯಾಗಿಸುವ ಸಂಚಿನಲ್ಲಿ ಇನ್ನೂ ಹಲವರು ಭಾಗಿಯಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ಮುಂದೇನು?: ಮೊದಲಿಗೆ ಬಿಹಾರ ಪೊಲೀಸರು ಪಿಂಕಿ ಬದುಕಿದ್ದಾಳೆಂದು ಕೋರ್ಟ್‍ನಲ್ಲಿ ಸಾಬೀತುಪಡಿಸಿ, ಕೊಲೆಯೇ ಮಾಡದೆ ನಿರಪರಾಧಿಯಾಗಿದ್ರೂ ಶಿಕ್ಷೆ ಅನುಭವಿಸ್ತಿರೋ ಮನೋಜ್ ಶರ್ಮಾ ಅವರನ್ನ ಬಿಡುಗಡೆ ಮಾಡಿಸಲಿದ್ದಾರೆ. ಮನೋಜ್ ಶರ್ಮಾ ವಿರುದ್ಧ ಸಂಚು ರೂಪಿಸಿದವರು, ಶವವನ್ನ ಪಿಂಕಿಯದ್ದು ಎಂದು ಗುರುತಿಸಿದವರನ್ನೂ ಸೇರದಂತೆ ಈ ಪ್ರಕರಣದಲ್ಲಿ ಭಾಗಿಯಾದ ಎಲ್ಲರ ವಿರುದ್ಧ ಪ್ರಕರಣ ದಾಖಲಿಸಲಾಗುತ್ತದೆ ಎಂದು ಕಾಂಟ್ ಪೊಲೀಸ್ ಠಾಣೆಯ ಅಧಿಕಾರಿ ಮಂಜೀತ್ ಸಿಂಗ್ ಹೇಳಿದ್ದಾರೆ.

pinki

TAGGED:BiharDowrymadhyapradeshMurderPublic TVಕೊಲೆಪಬ್ಲಿಕ್ ಟಿವಿಬಿಹಾರಮಧ್ಯಪ್ರದೇಶವರದಕ್ಷಿಣೆ
Share This Article
Facebook Whatsapp Whatsapp Telegram

Cinema Updates

Kantara
ಕಾಂತಾರ ಚಾಪ್ಟರ್-1 | ದೈವದ ನೇಮೋತ್ಸವ ಚಿತ್ರೀಕರಣಕ್ಕೂ ಮುನ್ನವೇ ಸಹ ಕಲಾವಿದ ಸಾವು
1 hour ago
Kantara 3
ʻಕಾಂತಾರ ಚಾಪ್ಟರ್-1ʼಗೆ ಸಾಲು ಸಾಲು ವಿಘ್ನ – ಒಂದೇ ತಿಂಗಳಲ್ಲಿ ಮೂರು ಸಾವು!
2 hours ago
Kantara Death copy
ಕಾಂತಾರ ಚಾಪ್ಟರ್-1 ಚಿತ್ರದ ಸಹ ಕಲಾವಿದ ವಿಜು ಹೃದಯಾಘಾತದಿಂದ ಸಾವು
3 hours ago
India House Movie
`ದಿ ಇಂಡಿಯಾ ಹೌಸ್ʼ ಸಿನಿಮಾ ಶೂಟಿಂಗ್‌ ಸೆಟ್‌ನಲ್ಲಿ ನೀರಿನ ಟ್ಯಾಂಕರ್‌ ಸ್ಫೋಟ – ಹಲವರಿಗೆ ಗಾಯ
4 hours ago

You Might Also Like

Ahmedabad Plane Crash
Latest

ಅಹಮದಾಬಾದ್‌ನ ವಸತಿ ಪ್ರದೇಶದಲ್ಲಿ ಪ್ರಯಾಣಿಕರಿದ್ದ ವಿಮಾನ ಪತನ – ಭಾರೀ ಸಾವು-ನೋವಿನ ಶಂಕೆ

Public TV
By Public TV
13 minutes ago
Yadhuveer Wodeyar
Districts

ಕೆಆರ್‌ಎಸ್ ಅಮ್ಯೂಸ್ಮೆಂಟ್ ಪಾರ್ಕ್‌ಗೆ ನನ್ನ ವಿರೋಧವಿದೆ: ಯದುವೀರ್ ಒಡೆಯರ್

Public TV
By Public TV
26 minutes ago
r ashok
Districts

ಸಿಎಂಗೆ ಮಾನಸಿಕ ಸ್ಥಿತಿ ಸರಿ ಇಲ್ಲ: ಅಶೋಕ್

Public TV
By Public TV
1 hour ago
01 7
Big Bulletin

ಬಿಗ್‌ ಬುಲೆಟಿನ್‌ 11 June 2025 ಭಾಗ-1

Public TV
By Public TV
2 hours ago
CRIME
Crime

ಇಂದೋರ್| ಹಣಕ್ಕಾಗಿ ಅಜ್ಜಿಯನ್ನು ಕೊಂದು ಬೆಡ್‌ನ ಬಾಕ್ಸ್‌ನಲ್ಲಿ ಬಚ್ಚಿಟ್ಟ ಮೊಮ್ಮಗ

Public TV
By Public TV
2 hours ago
Punjab Social Media Influencer Kamal Kaur Dead
Crime

ಪಂಜಾಬ್ | ಸೋಷಿಯಲ್ ಮೀಡಿಯಾ ಸ್ಟಾರ್ ಕಾರಿನೊಳಗೆ ಶವವಾಗಿ ಪತ್ತೆ – ಕೊಲೆ ಶಂಕೆ

Public TV
By Public TV
2 hours ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?