Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಜಯಶ್ರೀ ಮೇಲೆ ಸುದೀಪ್ ದೂರುಗಳ ಸುರಿಮಳೆ – ಕಣ್ಣೀರಾಕುತ್ತಾ ನಟಿ ಕ್ಷಮೆ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | Bengaluru City | ಜಯಶ್ರೀ ಮೇಲೆ ಸುದೀಪ್ ದೂರುಗಳ ಸುರಿಮಳೆ – ಕಣ್ಣೀರಾಕುತ್ತಾ ನಟಿ ಕ್ಷಮೆ

Bengaluru City

ಜಯಶ್ರೀ ಮೇಲೆ ಸುದೀಪ್ ದೂರುಗಳ ಸುರಿಮಳೆ – ಕಣ್ಣೀರಾಕುತ್ತಾ ನಟಿ ಕ್ಷಮೆ

Public TV
Last updated: August 28, 2022 11:02 am
Public TV
Share
3 Min Read
jayashree sudeep
SHARE

ಬಿಗ್ ಬಾಸ್ ಮನೆಯಲ್ಲಿ ಈ ವಾರ ಜಯಶ್ರೀ ನಡವಳಿಕೆ ಸ್ವಲ್ಪ ಕಿರಿಕಿರಿ ಉಂಟುಮಾಡಿದೆ. ಮನೆಯವರ ಜೊತೆ ತುಂಬಾನೇ ಒರಟಾಗಿ ನಡೆದುಕೊಳ್ಳುತ್ತಿದ್ದ ಅವರು ಏನಾದರೂ ಹೇಳಿದರೆ ಅದನ್ನು ಕೂಲಾಗಿ ತೆಗೆದುಕೊಳ್ಳುತ್ತಿರಲಿಲ್ಲ. ಈ ಬಗ್ಗೆ ಜಶ್ವಂತ್ ಕ್ಯಾಪ್ಟನ್ಸಿಯಲ್ಲಿಯೂ ಮನಸ್ತಾಪಗಳನ್ನು ಮಾಡಿಕೊಂಡಿದ್ದರು. ನನ್ನನ್ನು ಯಾಕೆ ಆಟಕ್ಕೆ ತೆಗೆದುಕೊಳ್ಳಲ್ಲ ಎಂದು ಗದರಿದ್ದು, ಕೆಲವೊಂದು ರಿವೇಂಜ್‌ಗಳನ್ನು ತೀರಿಸಿಕೊಂಡಿದ್ದಾರೆ. ಇದೆಲ್ಲವನ್ನು ಗಮನಿಸಿದ್ದ ಸುದೀಪ್ ಇದೀಗ ಜಯಶ್ರೀಗೆ ಸರಿಯಾದ ಕ್ಲಾಸ್ ತೆಗೆದುಕೊಂಡಿದ್ದಾರೆ.

BIGGBOSS OTT 5

ಒಂದು ಆಟ ಅಂತ ಬಂದಾಗ ಯಾವ ಪ್ಯಾರಾ ಮೀಟರ್ಸ್ ಇಟ್ಟುಕೊಂಡು ಕಂಟೆಸ್ಟೆಂಟ್‌ನ ಆಯ್ಕೆ ಮಾಡಬೇಕು ಎಂದು ಜಯಶ್ರೀಯನ್ನೇ ಸುದೀಪ್ ಪ್ರಶ್ನಿಸಿದ್ದಾರೆ. ಅದಕ್ಕೆ ಉತ್ತರ ಕೊಟ್ಟ ಜಯಶ್ರೀ, ಆ ಟಾಸ್ಕ್ ಏನಿರುತ್ತೆ, ಅದಕ್ಕೆ ಸೂಕ್ತವಾದ ವ್ಯಕ್ತಿಯನ್ನು ನೋಡಿ ಸೆಲೆಕ್ಟ್ ಮಾಡುತ್ತಾರೆ ಎದು ಜಯಶ್ರೀಯೇ ಉತ್ತರ ನೀಡಿದ್ದಾರೆ. ಜೊತೆಗೆ ಸ್ವಿಮ್ಮಿಂಗ್ ಪೂಲ್‌ನಲ್ಲಿ ಇದ್ದ ಆಟದಲ್ಲಿ ನಾನು ಆಡಬಲ್ಲೆ ಎಂದು ಹೇಳಿದರೂ ತೆಗೆದುಕೊಳ್ಳಲಿಲ್ಲ. ಹೊರಗಡೆ ಬಂದಾಗ ನಾನು ಕೇಳಿದಾಗಲೂ ಸರಿಯಾದ ಕಾರಣ ಕೊಡಲೇ ಇಲ್ಲ ಎಂದಿದ್ದಾರೆ. ಈ ಬಗ್ಗೆ ತಕ್ಷಣ ಸುದೀಪ್ ಅವರು ಜಶ್ವಂತ್ ಬಳಿ ಕ್ಲಾರಿಟಿ ತೆಗೆದುಕೊಂಡಿದ್ದಾರೆ.

BIGGBOSS OTT 3

ಕ್ಯಾಪ್ಟನ್ ಅಂತ ಬಂದಾಗ ಅವರವರ ಅಭಿಪ್ರಾಯವನ್ನಿಟ್ಟುಕೊಂಡು ಹೋಗುತ್ತಾರೆ. ಮುಂದೆ ನೀವೂ ಕ್ಯಾಪ್ಟನ್ ಆದಾಗ ಇದೇ ರೀತಿ ನಡೆದುಕೊಳ್ಳಬಹುದು. ಸಾಕಷ್ಟು ಜನ ಇದ್ದಾಗ ಕ್ಯಾಪ್ಟನ್ ಒಂದೆರಡು ಜನರನ್ನು ಆಯ್ಕೆ ಮಾಡಿಕೊಳ್ಳಬಹುದು. ನೀವೂ ಏನೇನೋ ತಲೆಯಲ್ಲಿ ಇಟ್ಟುಕೊಂಡು ಯೋಚನೆ ಮಾಡುತ್ತೀರಾ. ಮಾತಾಡುವಾಗ ಸೆಲೆಕ್ಟ್ ಆಗಿಲ್ಲ ಎಂಬ ಕಾರಣಕ್ಕೆ ನೀವಾಡುವ ಮಾತುಗಳಿಗೆ ಅವರು ರಿಯಾಕ್ಟ್ ಕೂಡ ಮಾಡುವುದಕ್ಕೆ ಆಗಲ್ಲ. ಏಕೆಂದರೆ ಅವರು ಕ್ಯಾಪ್ಟನ್. ಇಲ್ಲಿ ಬರೀ ನೀವು ಮಾತ್ರವಲ್ಲ. ಹೊರಗಡೆಯವರು ಕೂಡ ನಿಮ್ಮನ್ನು ನೋಡುತ್ತಿರುತ್ತಾರೆ ಎಂದು ಒಂದಷ್ಟು ಬುದ್ದಿ ಮಾತು ಹೇಳಿದ್ದಾರೆ. ಇದನ್ನೂ ಓದಿ: ಬಿಗ್‌ ಬಾಸ್‌ ಮನೆಯಿಂದ ಉದಯ್‌ ಸೂರ್ಯ ಔಟ್

BIGGBOSS OTT

ಬಳಿಕ ಒಂದಷ್ಟು ಮಾತು ಕತೆಗಳು ಮುಗಿದು, ಮತ್ತೆ ಜಯಶ್ರೀ ವಿಚಾರಕ್ಕೆ ಬಂದಿರುವ ಸುದೀಪ್, ಮನೆ ಮಂದಿ ಕ್ಷಮೆ ಕೇಳುವುದರಲ್ಲಿ ಪ್ರಾಮಾಣಿಕತೆ ಇತ್ತಾ ಎಂದು ಪ್ರಶ್ನೆ ಮಾಡಿದರು. ಸಾನ್ಯಾ ಹಾಗೂ ನಂದಿನಿ ಇಬ್ಬರು ಕೂಡ ಜಯಶ್ರೀ ವಿಚಾರವಾಗಿಯೇ ಮಾತನಾಡಿದರು. ಖಂಡಿತ ಇಲ್ಲ ಸರ್, ಕ್ಷಮೆ ಕೇಳಿದರೆ ಆ ಮೂಮೆಂಟ್‌ಗೆ ಜಗಳ ಎಂಡ್ ಆಗುತ್ತೆ ಎಂಬಂತೆ ಕ್ಷಮೆ ಕೇಳಿದ್ದುಂಟು. ಆ ಕ್ಷಣಕ್ಕೆ ಅದು ಮುಗಿದು ಹೋಗಲಿ. ಮೀನ್ ಮಾಡಿಲ್ಲ ಎಂದಿದ್ದಾರೆ. ಈ ಕ್ಷಮೆ ಬಗ್ಗೆ ಜಯಶ್ರೀ ಬಳಿಯೂ ಸುದೀಪ್ ಸ್ಪಷ್ಟನೆ ಕೇಳಿದ್ದಾರೆ. ಇದಕ್ಕೆ ಸುದೀಪ್ ಉದಾಹರಣೆ ಕೊಟ್ಟು ಬುದ್ದಿ ಮಾತು ಹೇಳಿದ್ದಾರೆ. ಯಾರಾದರೂ ಬುದ್ದಿ ಹೇಳಿದರೆ ಅದಕ್ಕೆ ತಿರುಗಿ ಉತ್ತರ ನೀಡುತ್ತೀರಿ. ಚೈತ್ರಾ ಅವರಿಗೆ ಕೇಳುತ್ತೀರಿ ನೀವೂ ಲಿಪ್ ಸ್ಟಿಕ್ ತಂದಿಲ್ವಾ ಅಂತ ಹೇಳಿ ಓಲೆ ತರುತ್ತೀರಿ. ನೀವೂ ನಿಮ್ಮ ತಪ್ಪನ್ನು ಹೇಳಿದಾಗ ಅವರು ಮಾಡಿದಾರೆ ನಾನು ಮಾಡಿದ್ದೀನಿ ಎಂದು ರಕ್ಷಣೆ ಮಾಡಿಕೊಳ್ಳುತ್ತೀರಿ ಎಂದಿದ್ದಾರೆ.

jayashree bigg boss

ಅದಕ್ಕೆ ಉತ್ತರ ನೀಡಿದ ಜಯಶ್ರೀ, ನಾನು ಮಾಡಿದ ತಪ್ಪು ನನಗೆ ಅರಿವಾಗಿದೆ. ಬಿಗ್ ಬಾಸ್‌ನಿಂದ ಆದೇಶ ಬಂದ ಮೇಲೆ ರಿಗ್ರೇಟ್ ಮಾಡಿಕೊಂಡಿದ್ದೀನಿ. ಆ ಒಂದು ನಡವಳಿಕೆಯನ್ನು ನಾನು ಬದಲಾಯಿಸಿಕೊಳ್ಳಬೇಕೆಂದುಕೊಂಡಿದ್ದೇನೆ ಎಂದಿದ್ದಾರೆ. ಮುಂದುವರೆದು ದೂರುಗಳ ಸುರಿಮಳೆಯನ್ನೇ ಸುರಿಸಿದ ಸುದೀಪ್, ಟಿಶ್ಯು ಪೇಪರ್ ಹೊರ ತರುವಾಗ ಉದಯ್ ಬೇಡ ಅಂತ ಹೇಳುತ್ತಾರೆ. ಕಂಟೆಸ್ಟೆಂಟ್ ಮೇಲೆ ನೀರು ಹಾಕುವಾಗ ಮೈಕ್ ಹಾಳಾಗುತ್ತೆ ಅಂತ ಕೆಲವರು ಹೇಳುತ್ತಾರೆ. ಆದರೂ ಗಮನಿಸಲಿಲ್ಲ. ಆ ಸಮಯದಲ್ಲಿ ನಿಮ್ಮ ಬಾಯಿಂದ ಬಂದ ಮಾತು ಏನಿತ್ತು ಗೊತ್ತಾ? ನನ್ನ ಮೈಕ್ ಚೇಂಜ್ ಮಾಡಿದ್ದಾರೆ ನಿಮ್ಮ ಮೈಕ್ ಚೇಂಜ್ ಮಾಡುತ್ತಾರೆ ಬಿಡಿ. ಬೇರೆ ಏನು ಕೆಲಸ ಇರುತ್ತೆ ಬಿಗ್ ಬಾಸ್‌ಗೆ ಎಂಬ ಅರ್ಥದಲ್ಲಿ ಹೇಳಿದ್ದೀರಿ ಎಂದಾಗ ಜಯಶ್ರೀ ಕ್ಷಮೆಯಾಚಿಸಿದ್ದಾರೆ. ಜೊತೆಗೆ ಕಣ್ಣಿಗೆ ಸ್ಪ್ರೇ ಮಾಡುವಾಗ ಅದು ಡೇಂಜರ್ ಎಂದು ರಾಕೇಶ್ ಹೇಳಿದಾಗಲೂ ನಂದಿನಿ ಕಣ್ಣಿಗೆ ಸ್ಪ್ರೇ ಮಾಡಿದ್ದಾರೆ. ಈ ನಡವಳಿಕೆ ಬಗ್ಗೆಯೂ ಸುದೀಪ್ ಮನವರಿಕೆ ಮಾಡಿದ್ದು, ಜಯಶ್ರೀ ಕಣ್ಣೀರು ಹಾಕುತ್ತಾ ಕ್ಷಮೆಯಾಚಿಸಿದ್ದಾರೆ. ಇದನ್ನೂ ಓದಿ: ಬಿಗ್‌ ಬಾಸ್‌: ಜಯಶ್ರೀಗೆ ಮೆಂಟಲ್ ಆಗೋಗ್ತಿಯಾ ಎಂದು ಎಚ್ಚರಿಕೆ ನೀಡಿದ ನಂದು

Live Tv
[brid partner=56869869 player=32851 video=960834 autoplay=true]

TAGGED:Bigg bossJayashreesudeepಕ್ಷಮೆಜಯಶ್ರೀಬಿಗ್ ಬಾಸ್ಸುದೀಪ್
Share This Article
Facebook Whatsapp Whatsapp Telegram

Cinema news

Varanasi movie
ರಾಜಮೌಳಿ ನಿರ್ದೇಶನದ ‘ವಾರಣಾಸಿ’ ರಿಲೀಸ್‌ ಡೇಟ್‌ ಔಟ್‌
Cinema Latest South cinema Top Stories
Bengaluru 17th Film Festival
17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಸಿಎಂ ಚಾಲನೆ
Bengaluru City Cinema Districts Karnataka Latest Sandalwood Top Stories
PRAJWAL DEVARAJ 2
ಸಹೋದರನ ಚಿತ್ರಕ್ಕೆ ನಿರ್ಮಾಪಕನಾದ ಪ್ರಜ್ವಲ್ ದೇವರಾಜ್ – ಚಿತ್ರದ ಫಸ್ಟ್ ಲುಕ್ ಲಾಂಚ್
Cinema Latest Sandalwood Top Stories
actor mayur patel car accident
ಕುಡಿದು ವಾಹನ ಚಲಾಯಿಸಿ ಕಾರುಗಳಿಗೆ ಸರಣಿ ಅಪಘಾತ; ನಟ ಮಯೂರ್ ಪಟೇಲ್ ವಿರುದ್ಧ FIR
Cinema Crime Latest Main Post Sandalwood

You Might Also Like

MLA Vishwanath
Bengaluru City

ಬೆಂಗಳೂರಲ್ಲಿ ಭೂಕಬಳಿಕೆ; ಬಿಜೆಪಿ ಮಾಜಿ ಎಂಎಲ್‌ಸಿಗೆ 1 ವರ್ಷ ಜೈಲು ಶಿಕ್ಷೆ

Public TV
By Public TV
41 seconds ago
gold silver 1
Latest

ಚಿನ್ನ – ಬೆಳ್ಳಿ ಬೆಲೆ ದಿಢೀರ್‌ ಕುಸಿತ; ಒಂದೇ ದಿನದಲ್ಲಿ ಬೆಳ್ಳಿ 15%, ಚಿನ್ನ 10% ಬೆಲೆ ಕುಸಿತ

Public TV
By Public TV
4 minutes ago
ivan dsouza
Bengaluru City

ವಿಬಿಜಿ ರಾಮ್ ಜಿ ಕಾಯ್ದೆ ಬಡವರ ಪಾಲಿಗೆ ಮರಣ ಶಾಸನ – ಐವಾನ್ ಡಿಸೋಜ

Public TV
By Public TV
18 minutes ago
bus collides with bike in channarayapatna head constable dies
Crime

ಚನ್ನರಾಯಪಟ್ಟಣ | ಬೈಕ್‌ಗೆ ಸಾರಿಗೆ ಬಸ್ ಡಿಕ್ಕಿ – ಹೆಡ್‌ಕಾನ್ಸ್‌ಟೇಬಲ್‌ ಸಾವು

Public TV
By Public TV
24 minutes ago
PT Usha VSrinivasan
Latest

IOA ಅಧ್ಯಕ್ಷೆ ಪಿ.ಟಿ ಉಷಾ ಪತಿ ಶ್ರೀನಿವಾಸನ್ ನಿಧನ

Public TV
By Public TV
28 minutes ago
PM Modi PT Usha
Latest

IOA ಅಧ್ಯಕ್ಷೆ ಪಿಟಿ ಉಷಾ ಪತಿ ನಿಧನಕ್ಕೆ ಪ್ರಧಾನಿ ಮೋದಿ ಸಂತಾಪ

Public TV
By Public TV
28 minutes ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?