ಕಳೆದ ವಾರಕ್ಕಿತ ಈ ವಾರ ಬೇಳೆ ಬೆಲೆ ಹೆಚ್ಚಳ – ಯಾವುದು ಎಷ್ಟು ಹೆಚ್ಚಳ?

Public TV
2 Min Read
rate

ಬೆಂಗಳೂರು: ಈಗಂತೂ ಎಲ್ಲಿ ಹೋದ್ರೂ, ಎಲ್ಲಿ ಕೇಳಿದ್ರೂ ಈರುಳ್ಳಿದೇ ಸುದ್ದಿ. ಕೆ.ಜಿಗೆ ಅಷ್ಟು ಕೊಟ್ಟೆ, ಇಷ್ಟು ಕೊಟ್ಟೆ ಅಂತಾನೇ ಮಾತು. ಇನ್ನೂ ಬೆಳೆ ಕಾಳುಗಳ ಬೆಲೆ ಕೇಳುವಂತಿಲ್ಲ ಎನ್ನುವಂತಾಗಿದೆ. ಹೌದು ಕಳೆದ ಒಂದು ತಿಂಗಳಿಂದ ತರಕಾರಿ ಬೆಲೆ ಅದ್ರಲ್ಲೂ ಈರುಳ್ಳಿ ರೇಟ್ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿತ್ತು.

ಈಗ ಜನಸಾಮಾನ್ಯರಿಗೆ ಮತ್ತೊಂದು ಏಟು ಬಿದ್ದಿದ್ದು, ಬೆಳೆಕಾಳುಗಳ ಬೆಲೆಗಳಲ್ಲಿ ಮೂರುಪಟ್ಟು ಹೆಚ್ಚಳವಾಗಿದೆ. ಹೀಗಾಗಿ ಜನರಿಗೆ, ಬೆಳೆ-ಕಾಳುಗಳು ಕೈಗೆಟ್ಟಕುತ್ತಿಲ್ಲ. ಇವುಗಳನ್ನು ನೀವೇನಾದ್ರೂ ಕೊಳ್ಳೋಕೆ ಹೋದ್ರೆ, ನಿಮ್ಮ ಜೇಬಿಗೆ ಕತ್ತರಿ ಬೀಳೋದು ಗ್ಯಾರಂಟಿ ಎನ್ನುವಂತಾಗಿದೆ. ಕಳೆದ ವಾರಕ್ಕೂ ಇವತ್ತಿಗೂ ಇರೋ ಬೇಳೆಕಾಳುಗಳ ಬೆಲೆಗಳನ್ನ ನೋಡೋದಾದರೆ.

ONION

ಕಳೆದ ವಾರ 90 ರೂ. ಇದ್ದ ತೋಗರಿ ಬೇಳೆ ಈ ವಾರ 120 ರೂ. ಆಗಿದೆ. ಹಾಗೆಯೇ ಉದ್ದಿನ ಬೇಳೆ ಬೆಲೆ 70 ರೂ. ಯಿಂದ 140 ರೂ. ಗೆ ಜಿಗಿದಿದೆ. ಕಳೆದ ವಾರ 70 ರೂ. ಇದ್ದ ಹೆಸರ ಬೇಳೆ ಈ ವಾರ 130 ರೂ ಆಗಿದೆ. ಕಡಲೆ ಬೇಳೆ 45 ರೂ. ಇಂದ 75 ರೂ. ಆಗಿದೆ. ಇತರ ಆಹಾರ ಪದಾರ್ಥಗಳ ಬೆಲೆಯೂ ಕೂಡ ಹೆಚ್ಚಿದ್ದು, ಅಕ್ಕಿ (ಸಾದಾ) 38 ರೂ. ಇಂದ 55 ರೂ.ಗೆ, ಸೋನಾಮಸೂರಿ ಅಕ್ಕಿ 50 ರೂ. ಇಂದ 60 ರೂ. ಗೆ, ಗೋಧಿ 25 ರೂ. ಇಂದ 32 ರೂ. ಗೆ, ಜೋಳ 28 ರೂ. ಇಂದ 35 ರೂ ಗೆ ಹೆಚ್ಚಳವಾಗಿದೆ.

ಇದನ್ನು ಬಿಟ್ಟರೆ ಅಡುಗೆ ಎಣ್ಣೆ 80 ರೂ. ಇಂದ 100 ರೂ. ಗೆ ಹೆಚ್ಚಳವಾಗಿದೆ. ತುಪ್ಪ ಕೆ.ಜಿಗೆ 380 ರೂ. ಇಂದ 430 ರೂ. ಗೆ ಹೆಚ್ಚಳವಾಗಿದೆ. ಶೇಂಗಾ 55 ರೂ. ಇಂದ 140 ರೂ. ಗೆ ಹೆಚ್ಚಳವಾಗಿದೆ. ಬೆಲ್ಲ 50 ರೂ. ಇಂದ 55 ರೂ. ಗೆ ಏರಿಕೆ ಆಗಿದೆ.

vlcsnap 2019 12 14 10h09m42s354

ವೆಜಿಟೇಬಲ್ ಗಳ ರೇಟ್ ಸಹ ಗಗನಕ್ಕೇರಿದೆ. ನಗರದ ಹ್ಯಾಪ್ ಕ್ಯಾಮ್ಸ್, ಯಶವಂತಪುರ ಸೇರಿದಂತೆ ಇತರೆ ಮಾರುಕಟ್ಟೆಗಳಲ್ಲಿ ತರಕಾರಿ ಬೆಲೆ ಕೇಳಿದ್ರೇ ತಿನ್ನಂಗಿಲ್ಲ ಎನ್ನುವಂತಾಗಿದೆ. ಈರುಳ್ಳಿ ರೇಟ್ ಸ್ವಲ್ಪ ಮಟ್ಟಿಗೆ ಇಳಿಕೆ ಕಂಡು 200 ಇಂದ 100 ರೂ. ಗೆ ಕೆ.ಜಿ ಆಗಿದೆ. ಬೆಳ್ಳುಳ್ಳಿ ಕೆ.ಜಿಗೆ 300ರೂ ಆಗಿದ್ರೇ, ನುಗ್ಗೆಕಾಯಿ 350ರೂ ಆಗಿದೆ. ಹೀಗೆ ಜೀವನಾವಶ್ಯಕ ಆಹಾರ ಪದಾರ್ಥಗಳ ಬೆಲೆ, ಈರುಳ್ಳಿ ಬೆಲೆ ಏರಿಕೆಗೆ ಆಗಲು ಮಳೆರಾಯನ ಕಣ್ಣಾಮುಚ್ಚಾಲೆ ಆಟ, ಮಹಾರಾಷ್ಟ್ರದಲ್ಲಾದ ಪ್ರವಾಹ, ಹೊಸ ಬೇಳೆ ಬರದೇ ಇರುವುದರಿಂದ ಬೇಳೆ ಕಾಳುಗಳ ಬೆಲೆ ಏರಿಕೆಯಾಗಿದೆ.

Share This Article
Leave a Comment

Leave a Reply

Your email address will not be published. Required fields are marked *