ಅತ್ತ ಸರ್ಕಾರ ಹೋಗೋ ಚಿಂತೆ, ಇತ್ತ ಸಚಿವರಿಗೆ ಉದ್ಘಾಟನೆ ಚಿಂತೆ!

Public TV
1 Min Read
bly2

ಬಳ್ಳಾರಿ: ಒಂದೆಡೆ ಸರ್ಕಾರ ಉಳಿಯುತ್ತೋ ಉರುಳುತ್ತೋ ಅನ್ನೋ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೆ ಸಚಿವ ಪರಮೇಶ್ವರ್ ನಾಯ್ಕ್ ಸರ್ಕಾರ ಹೋಗೋ ಭಯದಲ್ಲಿ ಅಧಿಕಾರದ ದರ್ಪ ಮೆರೆದು ನೂತನ ಗ್ರಾಮ ಪಂಚಾಯತ ಕಟ್ಟಡವನ್ನು ಉದ್ಘಾಟನೆ ಮಾಡಿದ್ದಾರೆ.

ಹಡಗಲಿ ತಾಲೂಕಿನ ಐನಹಳ್ಳಿ ಗ್ರಾಮ ಪಂಚಾಯತಿಯ ನೂತನ ಕಟ್ಟಡ ಉದ್ಘಾಟನೆ ವೇಳೆ ಸಚಿವರು ತಮ್ಮ ಅಧಿಕಾರದ ದರ್ಪ ಪ್ರದರ್ಶನ ಮಾಡಿದ್ದಾರೆ. ನೂತನ ಗ್ರಾಪಂ ಕಟ್ಟಡ ಉದ್ಘಾಟನೆಗೆ ಗ್ರಾಮಪಂಚಾಯತಿಯ ಸದಸ್ಯರಿಗೆ ಆಹ್ವಾನ ನೀಡದೇ ಸಚಿವರು ಕಟ್ಟಡ ಉದ್ಘಾಟನೆಗೆ ಮುಂದಾಗಿದ್ದರು.

bly

ಹೀಗಾಗಿ ಗ್ರಾಮಸ್ಥರು, ಗ್ರಾಮ ಪಂಚಾಯತಿ ಸದಸ್ಯರು ಸಚಿವರ ವರ್ತನೆ ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದರು. ಪ್ರತಿಭಟನೆ ಮಧ್ಯೆ ಆಗಮಿಸಿದ ಸಚಿವರು ಎಲ್ಲರನ್ನೂ ಎಕಾಏಕಿ ನೂಕಿಕೊಂಡು ಗ್ರಾಮ ಪಂಚಾಯತ ಕಟ್ಟಡವನ್ನು ಉದ್ಘಾಟನೆ ಮಾಡಿದ್ದರು. ಸಚಿವರ ಈ ನಡೆಯನ್ನು ಗ್ರಾಮಸ್ಥರು ಖಂಡಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *