ಕುಡಿಯಲು ನೀರು ಬೇಡುತ್ತಿವೆ ವನ್ಯಜೀವಿಗಳು

Public TV
1 Min Read
klr belaku 2

ಕೋಲಾರ: ಅದು ಬರಕ್ಕೆ ತವರು ಜಿಲ್ಲೆ, ಬೇಸಿಗೆ ಬಂದ್ರೆ ಸಾಕು ಬಿಸಿ ತಾಳಲಾರದೆ ಕಾಡಿನಿಂದ ವನ್ಯ ಜೀವಿಗಳು ಅನ್ನ ನೀರಿಗಾಗಿ ನಾಡಿಗೆ ಬಂದು ಅಪಘಾತವಾಗಿ, ನಾಯಿಗಳ ದಾಳಿಗೆ ತುತ್ತಾಗುವುದು, ಇಲ್ಲ ಕಾಡಿನಲ್ಲೇ ಪ್ರಾಣ ಬಿಡುತ್ತಿವೆ. ಇಂತಹ ಸನ್ನಿವೇಶದಲ್ಲಿ ವನ್ಯಜೀವಿಗಳಿಗೆ ನೀರು ಆಹಾರದ ವ್ಯವಸ್ಥೆ ಮಾಡಿ ಮಾನವೀಯತೆ ತೋರಿಸಬೇಕಿದೆ.

ಕಾಡಿನಲ್ಲಿ ಸ್ವಚ್ಚಂದವಾಗಿ ಕುಣಿಯುತ್ತಿರುವ ಕಾಡು ಪ್ರಾಣಿಗಳು ಈಗ ಆಹಾರ ಬಯಸಿ ನಾಡಿಗೆ ಬಂದು ತಮ್ಮ ಪ್ರಾಣವನ್ನು ಕಳೆದುಕೊಳ್ಳುತ್ತಿವೆ. ಮಳೆ ಅಭಾವದಿಂದ ಬರಗಾಲಕ್ಕೆ ತುತ್ತಾಗಿರುವ ಕೋಲಾರ ಜಿಲ್ಲೆಯಲ್ಲಿ ನೀರಿಗಾಗಿ ಹಾಹಾಕಾರ ಶುರವಾಗಿದೆ. ಅದು ಕೇವಲ ಜನ-ಜಾನುವಾರುಗಳಿಗೆ ಮಾತ್ರವಲ್ಲದೇ ಕಾಡಿನಲ್ಲಿರುವ ಕಾಡು ಪ್ರಾಣಿಗಳು ಕೂಡ ನೀರಿಲ್ಲದೆ ಸಾಯುವ ಪರಿಸ್ಥಿತಿ ಬಂದಿದೆ.

ಕಾಡಿನಲ್ಲಿರುವ ಕೆರೆ ಕುಂಟೆಗಳು ಬತ್ತಿ ಹೋಗಿದ್ದು, ಪ್ರಾಣಿಗಳು ನೀರಿಗಾಗಿ ಊರುಗಳತ್ತ ಬರುತ್ತಿದ್ದು, ಇದರಿಂದ ಅನೇಕ ಜಿಂಕೆ, ನವಿಲು, ಹಾವು ಮುಂತಾದ ಕಾಡು ಪ್ರಾಣಿಗಳು ನಾಯಿಗಳಿಗೆ, ವಾಹನಗಳಿಗೆ ಸಿಕ್ಕಿ ಪ್ರಾಣವನ್ನ ಕಳೆದುಕೊಳ್ಳುತ್ತಿವೆ. ಕೋಲಾರ ಜಿಲ್ಲೆಯಲ್ಲಿ ಸುಮಾರು 3 ರಿಂದ 4 ಸಾವಿರ ಕೃಷ್ಣಮೃಗಗಳಿದ್ದು, ನೀರಿಗಾಗಿ ನಾಡಿನತ್ತ ಬಂದು ಪ್ರಾಣ ಕಳೆದುಕೊಳ್ಳುತ್ತಿವೆ.

klr belaku 1 1

ಕಾಡು ಪ್ರಾಣಿಗಳಿಗೆ ಬೇಕಿದೆ ನೀರು: ಬರದಿಂದ ಪರಿತಪ್ಪಿಸುತ್ತಿರುವ ಕಾಡಿನ ಪ್ರಾಣಿಗಳಿಗೆ ಬೇಸಿಗೆ ಮುಗಿಯವವರೆಗೂ ನೀರು ಒದಗಿಸುವ ಕೆಲಸ ಆಗಬೇಕಾಗಿದೆ. ಇದರಿಂದ ಕಾಡಿನ ಪ್ರಾಣಿ ಪಕ್ಷಿಗಳು, ನಾಡಿನತ್ತ ಮುಖ ಮಾಡುವುದು ಕಡಿಮೆಯಾಗುತ್ತದೆ. ಇಲ್ಲದಿದ್ದರೆ ನೀರನ್ನ ಹುಡುಕಿಕೊಂಡು ಬಂದು ನಾಯಿ ಅಥವಾ ರಸ್ತೆ ಅಪಘಾತದಲ್ಲಿ ಸಾವನ್ನಪ್ಪುವುದು ನಿಶ್ಚಿತ. ಅರಣ್ಯ ಸಂಪತ್ತನ್ನ ನಾಶ ಮಾಡಿ ಮಳೆಯಿಲ್ಲದೆ ಬರಗಾಲ ಅವರಿಸಿರುವ ಕೋಲಾರ ಜಿಲ್ಲೆಯಲ್ಲಿ ಪ್ರಾಣಿ ಪಕ್ಷಿಗಳಿಗೆ ನೀರಿನ ವ್ಯವಸ್ಥೆ ಮಾಡಬೇಕು. ಅದಕ್ಕಾಗಿ ಸಂಘ ಸಂಸ್ಥೆಗಳು ಮಾತ್ರವಲ್ಲ, ಪ್ರತಿಯೊಬ್ಬರು ತಮ್ಮ ಮನೆ ಹಾಗು ಛಾವಣಿ ಮೇಲೆ ಆಹಾರ ಮತ್ತು ನೀರಿನ ವ್ಯವಸ್ಥೆ ಮಾಡಿದ್ರೆ ಪ್ರಾಣಿ ಪಕ್ಷಿಗಳು ಉಳಿಯುತ್ತವೆ.

ಒಟ್ನಲ್ಲಿ ಕೋಲಾರ ಜಿಲ್ಲೆಯಲ್ಲಿ ಜನ ಜಾನುವಾರುಗಳು ಮಾತ್ರವಲ್ಲದೆ ಕಾಡು ಪ್ರಾಣಿಗಳು ನೀರಿಗಾಗಿ ಪರಿತಪಿಸುತ್ತಿದ್ದು, ಇನ್ನಾದ್ರು ವನ್ಯ ಜೀವಿಗಳ ರಕ್ಷಣೆಗೆ ಅರಣ್ಯ ಇಲಾಖೆ, ದಾನಿಗಳು ನೀರನ್ನ ಒದಗಿಸುವ ಜೊತೆಗೆ ಮೂಕ ಪ್ರಾಣಿಗಳ ಜೀವ ಉಳಿಸುವ ಕೆಲಸ ಮಾಡಿ ಮಾನವೀಯತೆ ಮರೆಯಬೇಕಿದೆ.

 

Share This Article
Leave a Comment

Leave a Reply

Your email address will not be published. Required fields are marked *