ಬಲಗಾಲು, ಬಲಗೈ ಸ್ವಾದೀನ ಇಲ್ಲ, ಮಾತನಾಡಲು ಕಷ್ಟ ಆದರೂ ಓದಬೇಕೆಂಬ ಹಂಬಲ

Public TV
1 Min Read
CTD BELAKU 3

ಚಿತ್ರದುರ್ಗ: ಹುಟ್ಟುವಾಗಲೇ ಶಾಪಗ್ರಸ್ಥರಾಗಿ ಬಲಗಾಲು, ಬಲಗೈ ಸ್ವಾದೀನ ಕಳೆದುಕೊಂಡಿದ್ದು, ಮಾತನಾಡಲು ಆಗದೇ ಕಷ್ಟ ಅನುಭವಿಸುತ್ತಿರುವ ಶಿವಕುಮಾರ್‍ಗೆ ಓದಬೇಕೆಂಬ ಹಂಬಲ ಇದೆ. ಆದ್ದರಿಂದ ಸಹಾಯ ಕೇಳಿಕೊಂಡು ನಮ್ಮ ಬೆಳಕು ಕಾರ್ಯಕ್ರಮಕ್ಕೆ ಬಂದಿದ್ದಾರೆ.

ಜಿಲ್ಲೆಯ ಹುಲ್ಲೂರು ನಾಯಕರಹಟ್ಟಿ ಗ್ರಾಮದ ಸಾವಿತ್ರಮ್ಮನ ಅವರ ಪುತ್ರ ಶಿವಕುಮಾರ್. ಇವರು ಹುಟ್ಟುವಾಗಲೇ ವಿಕಲಚೇತನರಾಗಿ ಜನಿಸಿದ್ದಾರೆ. ಶಿವಕುಮಾರ್ ತಮ್ಮ ಬಲಗಾಲು, ಬಲಗೈ ಸ್ವಾದೀನವನ್ನು ಕಳೆದುಕೊಂಡಿದ್ದಾರೆ. ಅಷ್ಟೇ ಅಲ್ಲದೇ ಮಾತನಾಡಲು ಆಗದೇ ತೀವ್ರ ಸಮಸ್ಯೆಯನ್ನು ಅನುಭವಿಸುತ್ತಿದ್ದಾರೆ. ಆದರೆ ಇದ್ಯಾವುದನ್ನು ಲೆಕ್ಕಿಸದ ಶಿವಕುಮಾರ್ ಓದಬೇಕೆಂಬ ಹಂಬಲ ಹಾಗೂ ದುಡಿಯಬೇಕೆಂಬ ಛಲವನ್ನು ಇಟ್ಟುಕೊಂಡಿದ್ದಾರೆ.

CTD BELAKU 8

ತಂದೆ ತಾಯಿಗೆ ಹೊರೆಯಾಗಿರಲು ಇಷ್ಟಪಡದೇ ಪ್ರಥಮ ಬಿಎ ಪದವಿಯನ್ನು ಓದುತ್ತಿರುವ ಶಿವಕುಮಾರ್ ಕಳೆದ ಎರಡು ವರ್ಷಗಳಿಂದ ನಿರಂತರವಾಗಿ ಸಮಾಜ ಕಲ್ಯಾಣ ಇಲಾಖೆಯಲ್ಲಿ ವಿದ್ಯಾರ್ಥಿ ವೇತನಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ. ವಿಕಲಚೇತನರಿಗೆ ನೀಡುವ ವಾಹನಕ್ಕಾಗಿ ಪರದಾಡಿದ್ದಾರೆ. ಕಾಲೇಜು ಮುಗಿಸಿ ನಂತರ ಗ್ರಾಮದಲ್ಲಿ ವ್ಯಾಪಾರ ಮಾಡಲು ವಾಲ್ಮೀಕಿ ಪರಿಶಿಷ್ಟ ವರ್ಗಗಳ ಅಭಿವೃದ್ಧಿ ನಿಗಮದಿಂದ ಅಂಗವಿಕಲರಿಗೆ ನೀಡುವ ನೇರ ಸಾಲಕ್ಕೂ ಅರ್ಜಿ ಸಲ್ಲಿಸಿದ್ದಾರೆ. ಆದರೆ ಸಲ್ಲಿಸಿದ ಅರ್ಜಿಗಳಿಗೆ ಮಾತ್ರ ಯಾವ ಇಲಾಖೆಯು ಪ್ರತಿಕ್ರಿಯಿಸುತ್ತಿಲ್ಲ. ಆದ್ದರಿಂದ ಪ್ರತಿದಿನ ತಾಯಿಯೊಂದಿಗೆ ಸರ್ಕಾರಿ ಕಚೇರಿಗಳಿಗೆ ಅಲೆಯುತ್ತಿರುತ್ತಾರೆ.

ವಿಪರ್ಯಾಸ ಎಂದರೆ ಚಿತ್ರದುರ್ಗದ ಉಸ್ತುವಾರಿ ಹೊತ್ತಿರುವ ಸಚಿವರಾದ ಹೆಚ್ ಆಂಜನೇಯನವರ ತವರೂರು ಜಿಲ್ಲೆಯಲ್ಲೇ ಸೌಲಭ್ಯ ವಂಚಿತರನ್ನಾಗಿಸುತ್ತಿರುವುದು ನಾಚಿಕೆಯ ಸಂಗತಿಯಾಗಿದೆ.

ಚಿಕ್ಕ ವಯಸ್ಸಿನಿಂದಲೂ ವಿಕಲಚೇತನ ಮಗನಿಗೆ ಊರುಗೋಲಾಗಿರುವ ತಾಯಿ ಸಾವಿತ್ರಮ್ಮ. ಮಗನಿಗಾಗಿ ಸರ್ಕಾರ ವಿದ್ಯಾರ್ಥಿ ವೇತನ ಕೊಟ್ಟು, ಪದವಿ ಪೂರ್ಣಗೊಳಿಸಲು ಸಹಕರಿಸಬೇಕು. ಸಬ್ಸಿಡಿ ಸಾಲ ಕೊಟ್ಟು ಸ್ವಾವಲಂಬಿಯಾಗಿ ಬದುಕಲು ನೆರವಾಗಬೇಕೆಂದು ಅಂಗಲಾಚುತ್ತಾ ಕಣ್ಣೀರಿಡುತ್ತಾ ಪಬ್ಲಿಕ್ ಟಿವಿಯ ಬೆಳಕು ಕಾರ್ಯಕ್ರಮಕ್ಕೆ ಬಂದಿದ್ದಾರೆ.

https://www.youtube.com/watch?v=Gml-BsIW4z4

CTD BELAKU 4

CTD BELAKU 7

CTD BELAKU 1

CTD BELAKU 2

CTD BELAKU 6

Share This Article
Leave a Comment

Leave a Reply

Your email address will not be published. Required fields are marked *