ಹಾಸಿಗೆ ಹಿಡಿದ ಗಂಡ, ಮಗಳ ಶಿಕ್ಷಣ- ಉದ್ಯೋಗಕ್ಕಾಗಿ ಅಂಗಲಾಚ್ತಿದ್ದಾರೆ ಮಹಿಳೆ

Public TV
1 Min Read
TUMAKURU BELAKU 1 copy

ತುಮಕೂರು: ಕಷ್ಟಪಡುತ್ತಿರುವ ಗಂಡನಿಗೆ ಊರುಗೋಲಾಗಿರುವ ಪತ್ನಿ ಶಾಂತಕುಮಾರಿ, ಪತಿ ಹೆಸರು ಶ್ರೀನಿವಾಸ್ ಮೂರ್ತಿ. ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ಸಿಎಸ್‍ಪುರದ ನಿವಾಸಿಗಳಾದ ಈ ದಂಪತಿಗೆ ಮುದ್ದಾದ ಹೆಣ್ಣು ಮಗಳಿದ್ದಾಳೆ. ವೃತ್ತಿಯಲ್ಲಿ ಶ್ರೀನಿವಾಸ್ ಮೂರ್ತಿ ಡ್ರೈವರ್, ಪತ್ನಿ ಮನೆ ಕೆಲಸ ಮಾಡುತ್ತಾ ಬಂದ ಆದಾಯದಲ್ಲಿ ಸುಖ ಸಂಸಾರದಲ್ಲಿ ನೆಮ್ಮದಿಯಾಗಿ ಜೀವನ ಮಾಡುತ್ತಿದ್ದಾರೆ.

ಪತ್ನಿ ಶಾಂತಕುಮಾರಿಗೆ ಬ್ರೆಸ್ಟ್ ಕ್ಯಾನ್ಸರ್ ಕಾಣಿಸಿಕೊಂಡಿದ್ದು ಸಾಲ ಮಾಡಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಕ್ಯಾನ್ಸರ್ ನ ಪರಿಣಾಮ ಸ್ತನ ಮತ್ತು ಗರ್ಭಕೋಶವನ್ನು ತೆಗೆದು ಹಾಕಲಾಗಿದ್ದು ಇದರಿಂದ ಚೇತರಿಸಿಕೊಳ್ಳುತ್ತಿರುವಾಗಲೇ ಪತಿ ಅಪಘಾತಕ್ಕೆ ತುತ್ತಾಗಿ ನಡೆಯಲು ಆಗದೇ ಕೆಲಸ ಮಾಡಲಾಗದ ಪರಿಸ್ಥಿತಿಗೆ ಬಂದಿದ್ದು. ಪತಿ-ಪತ್ನಿ ಇಬ್ಬರೂ ಹಾಸಿಗೆ ಹಿಡಿದಿದ್ದರಿಂದ ಕುಟುಂಬ ನಿರ್ವಹಣೆ ಕಷ್ಟವಾಗಿದೆ.

TUMAKURU BELAKU

ಪ್ರತಿ ತಿಂಗಳು ಔಷಧಿಯ ಖರ್ಚಿಗೆ ತಿಂಗಳಿಗೆ ಸುಮಾರು ನಾಲ್ಕು ಸಾವಿರ, 8ನೇ ತರಗತಿ ಓದುತ್ತಿರುವ ಮಗಳ ಶಿಕ್ಷಣಕ್ಕೆ ಹಾಗೂ ಮನೆ ಬಾಡಿಗೆ ಜೀವನ ನಿರ್ವಹಣೆಗೆ ತೊಂದರೆಯಾಗುತ್ತಿದೆ. ಸ್ವಾಭಿಮಾನದಿಂದ ಬದುಕಲು ಒಂದು ಕೆಲಸ ಸಿಕ್ಕರೆ ಗಂಡ ಮತ್ತು ಮಗಳ ವಿದ್ಯಾಭ್ಯಾಸಕ್ಕೆ ಸಹಾಯವಾಗಲಿದೆ ಜೊತೆಗೆ ದುಡಿದು ಗಂಡ ಮಗಳನ್ನು ಸಾಕುತ್ತೇನೆ ಎಂದು ಪಬ್ಲಿಕ್ ಟಿವಿಯ ಬೆಳಕು ಕಾರ್ಯಕ್ರಮದ ಮೂಲಕ ಉದ್ಯೋಗ ಬಯಸುತ್ತಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

TUMAKURU BELAKU 3

https://www.youtube.com/watch?v=0g4Kh9SIvbo

Share This Article
Leave a Comment

Leave a Reply

Your email address will not be published. Required fields are marked *