ಅಂಗವಿಕಲ ಜಿಮ್ ಪಟು ಬಾಳಲ್ಲಿ ಬೆಳಕು

Public TV
1 Min Read
rcr impact F

ರಾಯಚೂರು: ಜಿಲ್ಲೆಯ ರಾಂಪೂರದ ಅಂಗವಿಕಲ ಜಿಮ್ ಪಟು ವೆಂಕಟೇಶ್ ತನ್ನ ಕಾಲ ಮೇಲೆ ತಾನು ನಿಲ್ಲಲು ಪರದಾಡುತ್ತಿದ್ದರು. ರಾಜ್ಯ ಮಟ್ಟದಲ್ಲಿ ಹಲವಾರು ಪ್ರಶಸ್ತಿಗಳನ್ನು ಗೆದ್ದಿರುವ ವೆಂಕಟೇಶ್ ಜಿಮ್ ಮುಂದುವರೆಸಲು ಹಾಗೂ ಉದ್ಯೋಗವಿಲ್ಲದೆ ಕಟ್ಟಿಗೆ ಕಡಿದು ಜೀವನ ಸಾಗಿಸುತ್ತಿದ್ದರು.

ಬೆಳಕು ಕಾರ್ಯಕ್ರಮದಲ್ಲಿ ಮಾತು ಕೊಟ್ಟಂತೆ ರಾಯಚೂರು ನಗರ ಶಾಸಕ ಡಾ.ಶಿವರಾಜ್ ಪಾಟೀಲ್ ವೆಂಕಟೇಶ್‍ಗೆ ಹಣಕಾಸಿನ ಸಹಾಯ ಮಾಡಿದ್ದಾರೆ. ಈಗ ವೆಂಕಟೇಶ್ ಗಣೇಶನ ಮೂರ್ತಿಗಳನ್ನ ಮಾಡಿ ತನ್ನ ಜೀವನ ಸಾಗಿಸುತ್ತಿದ್ದಾರೆ. ಸ್ನೇಹಿತರೊಂದಿಗೆ ಪಾರ್ಟನರ್ ಶಿಪ್ ನಲ್ಲಿ ಗಣೇಶನ ಮೂರ್ತಿ ತಯಾರಿಕೆ ಮಾಡುತ್ತಿದ್ದಾರೆ.

ಗಣೇಶ ಮೂರ್ತಿಗಳ ಆರ್ಡರ್‍ಗಳು ಸಿಗುತ್ತಿದ್ದು, ತನ್ನ ಜೀವನ ಕಟ್ಟಿಕೊಂಡಿದ್ದಾರೆ. ಪರಿಶಿಷ್ಠ ವರ್ಗದ ಅಂಗವಿಕಲರಿಗೆ ಮೀಸಲಾದ ಅನುದಾನದ ಪಟ್ಟಿಯಲ್ಲೂ ವೆಂಕಟೇಶ್ ಆಯ್ಕೆಯಾಗಿದ್ದು, ಸದ್ಯದಲ್ಲೆ ವೆಂಕಟೇಶ್ ಬ್ಯಾಂಕ್ ಅಕೌಂಟಿಗೆ 50 ಸಾವಿರ ಹಣ ಜಮಾ ಆಗಲಿದೆ.

rcr impact 2

Share This Article
Leave a Comment

Leave a Reply

Your email address will not be published. Required fields are marked *