ಕಣ್ಣೀರಿಟ್ಟ ಬಾಲೆಗೆ ಮರುಗಿದ `ಪಬ್ಲಿಕ್’- ಪ್ರವಾಹ ಸಂತ್ರಸ್ತರಿಗೆ ನೆರವು

Public TV
1 Min Read
BLG 1 1

ಬೆಳಗಾವಿ: ರಾಮದುರ್ಗದ ವಿಠ್ಠಲಪೇಟೆಯ ಸರ್ಕಾರಿ ಶಾಲಾ ಮಕ್ಕಳಿಗೆ ಪಬ್ಲಿಕ್ ಟಿವಿ ವತಿಯಿಂದ ಶಾಲಾ ಬ್ಯಾಗ್ ಜೊತೆಯಲ್ಲಿ ಅವಶ್ಯಕ ವಸ್ತುಗಳನ್ನು ವಿತರಿಸಲಾಗಿದೆ.

ಜಿಲ್ಲೆಯ ರಾಮದುರ್ಗ ತಾಲೂಕು ಮಲಪ್ರಭಾ ನದಿಯ ಪ್ರವಾಹಕ್ಕೆ ಸಿಲುಕಿ ಜಲಸಮಾಧಿಯಾಗಿತ್ತು. ಈ ಬಗ್ಗೆ ಪಬ್ಲಿಕ್ ಟಿವಿ ಪ್ರವಾಹ ಬಂದ ಬಳಿಕದ ಜನರ ಜೀವನದ ಬಗ್ಗೆ ಬುಲೆಟ್ ರಿಪೋರ್ಟರ್ ಎಂಬ ಶೀರ್ಷಿಕೆಯಡಿ ವಿಶೇಷ ವರದಿ ಮಾಡಿತ್ತು.

blg 2

ಪ್ರವಾಹಕ್ಕೆ ಸಿಲುಕಿದ್ದ ರಾಮದುರ್ಗದ ವಿಠ್ಠಲಪೇಟೆಯ ಸರ್ಕಾರಿ ಶಾಲಾ ಮಕ್ಕಳ ದಯನೀಯ ಸ್ಥಿತಿಯ ಬಗ್ಗೆ ಬೆಳಕು ಚೆಲ್ಲಲಾಗಿತ್ತು. ಅದರಲ್ಲಿ ಸ್ವಾತಿ ಎಂಬ ಬಾಲೆ ತನ್ನ ಸ್ಥಿತಿ ಹೇಳಿಕೊಂಡು ಕಣ್ಣೀರಿಟ್ಟಿದ್ದಳು. ಆ ಬಾಲೆಯ ಮೊಗದಲ್ಲಿ ಇಂದು ನಗುವಿದೆ.

ಕಾರಣ ಪಬ್ಲಿಕ್ ಟಿವಿ ವತಿಯಿಂದ ಮಕ್ಕಳಿಗೆ ಶಾಲಾ ಬ್ಯಾಗ್ ಜೊತೆಯಲ್ಲಿ ಅವಶ್ಯಕ ವಸ್ತುಗಳನ್ನು ವಿತರಿಸಲಾಗಿದೆ. ಈ ಮೂಲಕ ಅಂದು ಅತ್ತಿದ್ದ ಪುಟಾಣಿ ಹುಡುಗಿ ಇಂದು ಧನ್ಯತಾ ಭಾವದಿಂದ ನಗುತ್ತಿದ್ದಾಳೆ.

Share This Article
Leave a Comment

Leave a Reply

Your email address will not be published. Required fields are marked *