Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ವಿಧಾನ ಪರಿಷತ್ ಕಲಾಪದಲ್ಲಿ ಪೊಲೀಸರ ವಿರುದ್ದ ಹಕ್ಕುಚ್ಯುತಿ ಮಂಡನೆ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | Belgaum | ವಿಧಾನ ಪರಿಷತ್ ಕಲಾಪದಲ್ಲಿ ಪೊಲೀಸರ ವಿರುದ್ದ ಹಕ್ಕುಚ್ಯುತಿ ಮಂಡನೆ

Belgaum

ವಿಧಾನ ಪರಿಷತ್ ಕಲಾಪದಲ್ಲಿ ಪೊಲೀಸರ ವಿರುದ್ದ ಹಕ್ಕುಚ್ಯುತಿ ಮಂಡನೆ

Public TV
Last updated: December 17, 2021 6:55 pm
Public TV
Share
3 Min Read
belagavi assembly session 2021 Privilege motion against 2 police officers session 3
SHARE

ಬೆಳಗಾವಿ: ಗುರುವಾರ ನಡೆದ ಕಾಂಗ್ರೆಸ್ ಟ್ರಾಕ್ಟರ್ ಪ್ರತಿಭಟನೆಗೆ ತಡೆ ಹಿಡಿದ ಪೊಲೀಸರ ಅಧಿಕಾರಿಗಳ ವಿರುದ್ದ ವಿಧಾನ ಪರಿಷತ್ ನಲ್ಲಿಂದ ಹಕ್ಕುಚ್ಯುತಿ ಮಂಡನೆ ಮಾಡಲಾಯಿತು. ವಿಪಕ್ಷ ನಾಯಕ ಎಸ್.ಆರ್. ಪಾಟೀಲ್ ಹಕ್ಕುಚ್ಯುತಿ ಮಂಡನೆ ಮಾಡಿದರು. ಹಕ್ಕುಚ್ಯುತಿ ಪ್ರಸ್ತಾಪಕ್ಕೆ ಒಪ್ಪಿದ ಸಭಾಪತಿ ಹೊರಟ್ಟಿ ವಿಚಾರ‌ಣೆಗೆ ಹಕ್ಕುಚ್ಯುತಿ ಸಮಿತಿಗೆ ಪ್ರಕರಣ ವಹಿಸಿದರು.

ಹಕ್ಕುಚ್ಯುತಿ ವಿಷಯ ಪ್ರಸ್ತಾಪದ ವೇಳೆ ಮಾತನಾಡಿದ ವಿಪಕ್ಷ ನಾಯಕ ಎಸ್.ಆರ್. ಪಾಟೀಲ್, ನಿನ್ನೆ ಅಧಿವೇಶನಕ್ಕೆ ಬರೋವಾಗ ನಮ್ಮನ್ನ ಪೊಲೀಸ್ ಅಧಿಕಾರಿಗಳು ಒಳಗೆ ಬಿಡಲಿಲ್ಲ. ಈ ಅಧಿಕಾರ ಅವರಿಗೆ ಯಾರು ಕೊಟ್ಟರು? 3 ಗಂಟೆ ನಮ್ಮನ್ನ ನಿನ್ನೆ ರಸ್ತೆಯಲ್ಲಿ ತಡೆ ಹಿಡಿದಿದ್ದಾರೆ. ಗೇಟ್ ಬೀಗ ಹಾಕಿ ನಮ್ಮನ್ನ ತಡೆದಿದ್ದಾರೆ. ನನ್ನ ರಾಜಕೀಯ ಜೀವನದಲ್ಲಿ ಇಂತಹ ಉದ್ದಟತನ ನಾನು ನೋಡಿಲ್ಲ. ಇದು ಸದಸ್ಯರ ಹಕ್ಕುಚ್ಯುತಿ. ಸಭಾಪತಿಗಳಿಗೆ ಮಾಡಿದ ಅಪಮಾನ. ಅಧಿವೇಶನದ ವೇಳೆ ಪೊಲೀಸರು ನಮ್ಮನ್ನ ಟಚ್ ಮಾಡಬೇಕಾದ್ರೆ ಸಭಾಪತಿಗಳ ಅನುಮತಿ ಪಡೆಯಬೇಕು. ಐಪಿಎಸ್ ಅಧಿಕಾರಿಗಳಿಗೆ ಇದರ ಬಗ್ಗೆ ಗೊತ್ತಿಲ್ಲವಾ? ಹೀಗಾಗಿ ಅಧಿಕಾರಿಗಳಾದ ತ್ಯಾಗರಾಜನ್ ಮತ್ತು ಸತೀಸ್ ಕುಮಾರ್ ಇಬ್ಬರಿಗೆ ಶಿಕ್ಷೆ ಆಗಬೇಕು ಅಂತ ಒತ್ತಾಯ ಮಾಡಿದರು. ಇದನ್ನೂ ಓದಿ: ಲಂಚ ಆರೋಪ – ಹೈಕೋರ್ಟ್ ನಿವೃತ್ತ ಜಡ್ಜ್ ವಿರುದ್ಧ ಚಾರ್ಜ್‍ಶೀಟ್ ಸಲ್ಲಿಕೆ

belagavi assembly session 2021 Privilege motion against 2 police officers session 1

ಹಕ್ಕುಚ್ಯುತಿ ಮಂಡನೆ ವೇಳೆ ಸಚಿವ ನಾರಾಯಣಗೌಡ ಮತ್ತು ಕಾಂಗ್ರೆಸ್ ಸದಸ್ಯ ನಡುವೆ ಮಾತಿನ ಗದ್ದಲ ನಡೀತು. ಪರಸ್ಪರ ಏಕವಚನದಲ್ಲಿ ಸದಸ್ಯರು ಬೈದುಕೊಂಡು ಗಲಾಟೆ ಮಾಡಿದರು. ಸಚಿವ ನಾರಾಯಣಗೌಡ ಕ್ಷಮೆ ಕೇಳಬೇಕು ಅಂತ ಕಾಂಗ್ರೆಸ್ ಪ್ರತಿಭಟನೆ ಕೂಡಾ ನಡೆಸಿತು. ಇದನ್ನೂ ಓದಿ: ಹೆಣ್ಣು ಕುಲಕ್ಕೆ ಕ್ಷಮೆ ಕೇಳಿದ ರಮೇಶ್ ಕುಮಾರ್ – ಮುಂದುವರಿಸೋದು ಬೇಡ ಎಂದ ಸ್ಪೀಕರ್ ಕಾಗೇರಿ

ಏನಿದು ಪ್ರಕರಣ?
ಹಕ್ಕುಚ್ಯುತಿ ಮಂಡನೆ ವೇಳೆ ಟ್ರಾಕ್ಟರ್ ನಲ್ಲಿ ಬರಬೇಡ ಅಂತ ಪೊಲೀಸರು ಹೇಳ್ತಾರೆ. ಟ್ರಾಕ್ಟರ್ ರೈತರ ವಾಹನ ಇದರಲ್ಲಿ ಬರಬಾರದು ಅಂದ್ರೆ ಹೇಗೆ ಎಂದು ಎಸ್.ಆರ್.‌ಪಾಟೀಲ್ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಎದ್ದ ಸಚಿವ ನಾರಾಯಣಗೌಡ, ನಿತ್ಯವೂ ಟ್ರಾಕ್ಟರ್ ನಲ್ಲಿ ಬರ್ತೀರಾ ನೀವು. ನಿತ್ಯ ಟ್ರಾಕ್ಟರ್ ನಲ್ಲಿ ಬನ್ನಿ ಅಂತ ಪ್ರಶ್ನೆ ಮಾಡಿದ್ರು. ನಾರಾಯಣಗೌಡ ಮಾತಿಗೆ ಕಾಂಗ್ರೆಸ್ ಸದಸ್ಯರ ವಿರೋಧ ವ್ಯಕ್ತಪಡಿಸಿದರು.ನಮಗೆ ಇಷ್ಟ ಬಂದ ಗಾಡಿಯಲ್ಲಿ ಬರ್ತೀವಿ.ಅದನ್ನ ಕೇಳೋಕೆ ನೀವು ಯಾರು ಎಂದು ಕಾಂಗ್ರೆಸ್ ಸದಸ್ಯರು ತಿರುಗಿ ಬಿದ್ದರು. ಮತ್ತೆ ಎದ್ದ ಸಚಿವ ನಾರಾಯಣಗೌಡ ಬೆಂಗಳೂರಿನಲ್ಲಿ ಎತ್ತಿನ ಗಾಡಿಯಲ್ಲಿ ಬಂದಿದ್ರಿ. ನಿಮ್ಮ ಮನೆಯಲ್ಲಿ ಎತ್ತು ಇವೆಯಾ? ನೀವು ಎತ್ತು ಸಾಕಿದ್ದೀರಾ ಅಂತ ಪ್ರಶ್ನೆ ಮಾಡಿದ್ರು.

BLG CONGRESS

ಇದಕ್ಕೆ ಮತ್ತೆ ಕಾಂಗ್ರೆಸ್ ಸದಸ್ಯರ ವಿರೋಧ ವ್ಯಕ್ತಪಡಿಸಿದರು. ನೀನು ಮುಂಬೈ ‌ನಲ್ಲಿ ಇರೋನು ನಿನಗೇನು ಗೊತ್ತು ಟ್ರಾಕ್ಟರ್, ಎತ್ತಿನಗಾಡಿಯ ಬಗ್ಗೆ ಅಂತ ನಾರಾಯಣಗೌಡ ವಿರುದ್ದ ಕಾಂಗ್ರೆಸ್ ಸದಸ್ಯ ಆಕ್ರೋಶ ಹೊರ ಹಾಕಿದರು.ಈ ವೇಳೆ ಪರಸ್ಪರ ಏಕ ವಚನದಲ್ಲಿ ಸದಸ್ಯರು ಮಾತಾಡಿಕೊಂಡರು.

ನೀನೊಬ್ಬ ಏಜೆಂಟ್ ಎಂದು ನಾರಾಯಣಗೌಡ ವಿರುದ್ದ ಕಾಂಗ್ರೆಸ್ ಸದಸ್ಯರು ಆಕ್ರೋಶ ಹೊರ ಹಾಕಿದರು. ಈ ವೇಳೆ ಆಕ್ರೋಶ ಗೊಂಡ ನಾರಾಯಣಗೌಡ ಕಾಂಗ್ರೆಸ್ ವಿರುದ್ದ ಕಿಡಿಕಾರಿದರು.ಈ ವೇಳೆ ಮತ್ತೆ ಸದನದಲ್ಲಿ ಏಕವಚನಗಳ ಬೈಗುಳದ ಮಾತು ನಡೀತು. ಮತ್ತೆ ಸದನದಲ್ಲಿ ಗದ್ದಲ ಗಲಾಟೆ ಆಯ್ತು. ಈ ಸಮಯದಲ್ಲಿ ಮಧ್ಯೆ ಪ್ರವೇಶ ಮಾಡಿದ ವಿಪಕ್ಷ ನಾಯಕ ಎಸ್.ಆರ್. ಪಾಟೀಲ್, ಇವನು ಅಯೋಗ್ಯ ಮಂತ್ರಿ, ನಿನ್ನಿಂದ ಸರ್ಕಾರಕ್ಕೆ ಕಪ್ಪು ಚುಕ್ಕೆ ಎಂದು ಆಕ್ರೋಶ ಹೊರ ಹಾಕಿದರು.ಕೂಡಲೇ ಸದನದ ಬಾವಿಗೆ ಇಳಿದ ಕಾಂಗ್ರೆಸ್ ಪ್ರತಿಭಟನೆ ನಡೆಸಿತು. ಸಚಿವ ನಾರಾಯಣಗೌಡ ಕ್ಷಮೆ ಕೇಳಬೇಕು ಅಂತ ಪ್ರತಿಭಟನೆ‌ ಮಾಡಿದರು.

ಕೂಡಲೇ ಮಧ್ಯೆ ಪ್ರವೇಶ ಮಾಡಿದ ಸಭಾಪತಿಗಳು,ಸಚಿವ ನಾರಾಯಣಗೌಡ ಅನುಮತಿ ಇಲ್ಲದೆ ಮಾತಾಡಿದ್ದು ಸರಿಯಲ್ಲ. ಏನೇ ಮಾತಾಡಿದ್ರು ನನ್ನ ಅನುಮತಿ ಇರಬೇಕು. ನಾರಾಯಣಗೌಡ ಮಾತನ್ನ ಕಡತದಿಂದ ತೆಗೆಯುವಂತೆ ರೂಲಿಂಗ್ ಕೊಟ್ಟು ಪ್ರಕರಣ ಇತ್ಯರ್ಥ ಮಾಡಿದರು.

ಅಂತಿಮವಾಗಿ ಹಕ್ಕುಚ್ಯುತಿ ಮಂಡನೆಗೆ ಒಪ್ಪಿಗೆ ಕೊಟ್ಟ ಸಭಾಪತಿ ಗಳು ವಿಚಾರ‌ಣೆಗೆ ಹಕ್ಕುಚ್ಯುತಿ ಸಮಿತಿಗೆ ಪ್ರಕರಣ ಒಪ್ಪಿಸಿದರು.

TAGGED:Belagavi AssemblycongresskarnatakaPrivilege Motionಕಾಂಗ್ರೆಸ್ಬೆಳಗಾವಿ ಅಧಿವೇಶನಹಕ್ಕು ಚ್ಯುತಿ
Share This Article
Facebook Whatsapp Whatsapp Telegram

Cinema news

Beatriz Bach
ಟಾಕ್ಸಿಕ್ ಟೀಸರ್ ಹಾಟ್ ಬೆಡಗಿ ನಟಾಲಿಯಾ ಬರ್ನ್ ಅಲ್ಲ.. ಬೀಟ್ರಿಜ್ ಬಾಚ್..!
Cinema Latest Sandalwood Top Stories
gilli fan tattoo bigg boss
BBK 12: ಬಿಗ್‌ಬಾಸ್ ಗಿಲ್ಲಿಯ ಅಭಿಮಾನಿ ಕೈ ಮೇಲೆ ಟ್ಯಾಟೂ!
Cinema Latest Top Stories TV Shows
rakshitha rashika bigg boss
ನಿಂಗೆ ಗಿಲ್ಲಿ ಬೇಕು: ರಕ್ಷಿತಾ ವಿರುದ್ಧ ಗುಡುಗಿ ಕಳಪೆ ಕೊಟ್ಟ ರಾಶಿಕಾ
Cinema Latest Top Stories TV Shows
Samantha
`ಮಾ ಇಂಟಿ ಬಂಗಾರಂ’.. ಸಮಂತಾ ರಗಡ್ ಅವತಾರ..!
Cinema Latest South cinema Top Stories

You Might Also Like

Delhi weather
Latest

Delhi Cold Wave | ವರ್ಷದಲ್ಲೇ ಅತ್ಯಂತ ಕನಿಷ್ಠ; 4.2° ಸೆಲ್ಸಿಯಸ್‌ಗೆ ಕುಸಿದ ತಾಪಮಾನ

Public TV
By Public TV
11 minutes ago
Ramanagara Arrest
Districts

ನಾಡಬಾಂಬ್ ಸ್ಫೋಟಗೊಂಡು ಹಸುವಿನ ಬಾಯಿ ಛಿದ್ರ ಕೇಸ್ – ಮೂವರು ಆರೋಪಿಗಳ ಬಂಧನ

Public TV
By Public TV
15 minutes ago
Ballari 2 1
Bellary

ಶೂಟೌಟ್‌ ಪ್ರಕರಣದಲ್ಲಿ ದಿನಕ್ಕೊಂದು ಟ್ವಿಸ್ಟ್‌ – ವಿಡಿಯೋನಲ್ಲಿದ್ದ ಬಹುತೇಕರು ಬಳ್ಳಾರಿಯವರೇ ಅಲ್ವಾ?

Public TV
By Public TV
51 minutes ago
Charmadi Ghat Elephant
Chikkamagaluru

ಚಾರ್ಮಾಡಿ ಘಾಟಿಯಲ್ಲಿ ಒಂಟಿ ಸಲಗ ಪ್ರತ್ಯಕ್ಷ – ಕಿಲೋ ಮೀಟರ್‌ಗಟ್ಟಲೇ ಟ್ರಾಫಿಕ್‌ ಜಾಮ್‌!

Public TV
By Public TV
56 minutes ago
Mohan Raj 2
Bengaluru City

ವಿಚ್ಛೇದಿತೆಗೆ ಬಾಳು ಕೊಡುವ ನೆಪದಲ್ಲಿ ಮಗು ಕೊಟ್ಟ – 36 ಲಕ್ಷ ಪಡೆದು ಎಸ್ಕೇಪ್‌ ಆದ ಮೋಹನ!

Public TV
By Public TV
1 hour ago
Villagers protested against illegal stone mining in several places in Anavatti Shivamogga
Districts

ಅಕ್ರಮ ಕಲ್ಲು ಗಣಿಗಾರಿಕೆ ಸ್ಫೋಟಕ್ಕೆ ಗರ್ಭಿಣಿಯರಿಗೆ ರಕ್ತಸ್ರಾವ – ಕ್ರಮಕೈಗೊಳ್ಳದ ಸಚಿವರ ವಿರುದ್ಧ ಆಕ್ರೋಶ

Public TV
By Public TV
2 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?