ಕೊಪ್ಪಳ: ಕಾಡಿನಲ್ಲಿ ಇರಬೇಕಾದ ಕರಡಿ ಇಂದು ಕೊಪ್ಪಳದ ಕೃಷಿ ಮಾರುಕಟ್ಟೆಗೆ ಎಂಟ್ರಿಕೊಟ್ಟಿದ್ದು, ಕರಡಿ ನೋಡಿದ ಜನ ಭಯದಿಂದ ದಿಕ್ಕಾಪಾಲಾಗಿ ಓಡಿದ್ದಾರೆ.
- Advertisement 2
ಕರಡಿ ಕೃಷಿ ಮಾರುಕಟ್ಟೆಯಲ್ಲೆಲ್ಲ ಓಡಾಡಿದೆ. ಮಾರುಕಟ್ಟೆಯನ್ನೆಲ್ಲ ಸುತ್ತಿ ಇದೀಗ ದೇವರಾಜು ಅರಸು ಕಾಲೋನಿಯ ಪೂರ್ತಿ ಜಾಲಿ ಗಿಡ ಬೆಳೆದಿರುವ ಪ್ರದೇಶದಲ್ಲಿ ಅಡಗಿ ಕುಳಿತಿದೆ.
- Advertisement 3
- Advertisement 4
ನಗರದ ಹೃದಯ ಭಾಗದಲ್ಲಿರುವ ಮಾರುಕಟ್ಟೆಗೆ ಕರಡಿ ಎಂಟ್ರಿ ಕೊಟ್ಟಿರುವುದರಿಂದ ಜನ ಆತಂಕಗೊಂಡಿದ್ದಾರೆ. ಸ್ಥಳಕ್ಕೆ ಅರಣ್ಯ ಇಲಾಖೆ ಹಾಗೂ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿದ್ದು, ಕರಡಿ ಹಿಡಿಯಲು ಸಿದ್ಧತೆ ನಡೆಸುತ್ತಿದ್ದಾರೆ.
ಜಾಲಿ ಗಿಡ ಬೆಳೆದಿರುವ ಪ್ರದೇಶದಲ್ಲಿ ಕರಡಿ ಅಡಗಿ ಕುಳಿತಿರುವ ಪರಿಣಾಮ ಸೆರೆ ಹಿಡಿಯುವುದು ಸವಾಲಾಗಿ ಪರಿಣಮಿಸಿದೆ.