ಇಂಡೋ-ಪಾಕ್ ಪಂದ್ಯದ ಪರ ಸಚಿನ್ ಬ್ಯಾಟಿಂಗ್- ದ್ವಂದ್ವ ನಿಲುವಿನಲ್ಲಿ ಬಿಸಿಸಿಐ

Public TV
2 Min Read
sachin bcci

ಮುಂಬೈ: ಪುಲ್ವಾಮಾ ಭಯೋತ್ಪಾದಕ ದಾಳಿಯ ಬಳಿಕ ವಿಶ್ವಕಪ್ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧದ ಪಂದ್ಯವನ್ನು ರದ್ದು ಮಾಡುವಂತೆ ದೇಶದ್ಯಾಂತ ಆಗ್ರಹ ಕೇಳಿ ಬಂದರೂ ಕೂಡ ಬಿಸಿಸಿಐ ಈ ಕುರಿತು ಸ್ಪಷ್ಟ ತೀರ್ಮಾನ ಕೈಗೊಳ್ಳದೆ ದ್ವಂದ್ವ ನಿಲುವು ತಾಳಿದೆ.

ಇಂದು ಕೂಡ ಬಿಸಿಸಿಐ ಆಡಳಿತ ಸಮಿತಿಯ ಸಭೆ ನಡೆಸಲಾಗಿದ್ದು, ಪಾಕಿಸ್ತಾನದ ವಿರುದ್ಧ ಪಂದ್ಯವನ್ನು ಆಡುವ ಬಗ್ಗೆ ಸರ್ಕಾರದ ತೀರ್ಮಾನವೇ ಅಂತಿಮ ಎಂದು ಮತ್ತೊಮ್ಮೆ ಹೇಳಿದೆ. ಬಿಸಿಸಿಐ ಈ ಹೇಳಿಕೆ ವಿಶ್ವಕಪ್ ಟೂರ್ನಿಗೆ ಇನ್ನು 3 ತಿಂಗಳು ಸಮಯ ಇರುವುದರಿಂದ ಅಂತಿಮ ತೀರ್ಮಾನ ಕೈಗೊಳ್ಳುವುದನ್ನು ತಡ ಮಾಡುತ್ತಿದ್ದೇಯಾ ಎಂಬ ಅನುಮಾನ ಮೂಡಲು ಕಾರಣವಾಗಿದೆ.

ind vs pak

ಈ ಕುರಿತು ಪ್ರತಿಕ್ರಿಯೆ ನೀಡಿರುವ ಬಿಸಿಸಿಐ ಸಿಇಒ ರಾಹುಲ್ ಜೋಹ್ರಿ ಮ್ಯಾಚೆಸ್ಟರ್ ಕ್ರೀಡಾಂಗಣದಲ್ಲಿ ನಡೆಯಲಿರುವ ವಿಶ್ವಕಪ್ ಲೀಗ್ ಹಂತದ ಪಾಕಿಸ್ತಾನ ವಿರುದ್ಧದ ಪಂದ್ಯವನ್ನು ಆಡದಿರುವ ಬಗ್ಗೆ ಯಾವುದೇ ತೀರ್ಮಾನ ಕೈಗೊಂಡಿಲ್ಲ. ಪಂದ್ಯಕ್ಕೆ ಇನ್ನು 3 ತಿಂಗಳು ಕಾಲಾವಕಾಶ ಇರುವುದರಿಂದ ಸರ್ಕಾರ ತೀರ್ಮಾನವನ್ನೇ ಅಂತಿಮಗೊಳಿಸಲಿದ್ದೇವೆ. ಈಗಾಗಲೇ ಐಸಿಸಿ ಬಳಿ ಈ ಬಗ್ಗೆ ಚರ್ಚೆ ನಡೆಸಿದ್ದೇವೆ ಎಂದು ತಿಳಿಸಿದರು.

ಇಂಗ್ಲೆಂಡ್ ಸೇರಿದಂತೆ ಐಸಿಸಿ ಕ್ರಿಕೆಟ್ ಮಂಡಳಿಯಲ್ಲಿ ಸದಸ್ಯರಾಗಿರುವ ಬಹುತೇಕ ರಾಷ್ಟ್ರಗಳು ಭಾರತದಲ್ಲಿ ನಡೆದ ಭಯೋತ್ಪಾದನ ದಾಳಿಯನ್ನು ಖಂಡಿಸಿದೆ. ಇತ್ತ ಬಿಸಿಸಿಐ ಕೂಡ ಉಗ್ರರಿಗೆ ಬೆಂಬಲ ನೀಡುತ್ತಿರುವ ರಾಷ್ಟ್ರದೊಂದಿಗೆ ಕ್ರಿಕೆಟ್ ಸಂಬಂಧವನ್ನು ಅಂತ್ಯಗೊಳಿಸುವಂತೆ ಎಲ್ಲಾ ರಾಷ್ಟ್ರಗಳೊಂದಿಗೆ ಮನವಿ ಮಾಡಿದೆ.

world cup

ಇತ್ತ ಟೀಂ ಇಂಡಿಯಾ ಮಾಜಿ ಆಟಗಾರ ಸಚಿನ್ ತೆಂಡೂಲ್ಕರ್ ಭಾರತ ತಂಡ ಪಾಕಿಸ್ತಾನ ವಿರುದ್ಧ ಆಡಿ ಗೆಲ್ಲಬೇಕಿದೆ. ವಿಶ್ವಕಪ್ ಇತಿಹಾಸದಲ್ಲಿ ಭಾರತ ಪಾಕ್ ವಿರುದ್ಧ ಸೋತ್ತಿಲ್ಲ. ಇಂದು ಅವರನ್ನು ಮತ್ತೊಮ್ಮೆ ಅವರನ್ನು ಸೋಲುಣಿಸುವ ಸಮಯ ಬಂದಿದೆ. ಪಂದ್ಯ ಆಡದಿರುವುದರಿಂದ ಅವರಿಗೆ 2 ಅಂಕಗಳು ನೀಡಿ ಪಾಕ್ ತಂಡಕ್ಕೆ ಸಹಾಯ ಮಾಡುವುದನ್ನು ವೈಯಕ್ತಿಕವಾಗಿ ವಿರೋಧಿಸುತ್ತೇನೆ ಎಂದಿದ್ದಾರೆ.

ಹೇಳಿಕೆ ವಿವಾದವಾಗುತ್ತಿದ್ದಂತೆ ಸಚಿನ್, ನನಗೆ ಮೊದಲು ದೇಶವೇ ಮುಖ್ಯವಾಗಿದ್ದು, ನನ್ನ ದೇಶ ಏನು ನಿರ್ಧಾರ ಮಾಡುತ್ತದೆ ಅದಕ್ಕೆ ಬದ್ಧನಾಗಿರುತ್ತೇನೆ ಎಂದು ತಮ್ಮ ಟ್ವೀಟ್ ಮಾಡಿ ಸ್ಪಷ್ಟನೆ ನೀಡಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *