ಬೆಂಗಳೂರು: ಬಿಬಿಎಂಪಿ ಕರ್ಮಕಾಂಡ ಒಂದಲ್ಲ ಎರಡಲ್ಲ. ಮೂಲಸೌಕರ್ಯಗಳ ಸಮಸ್ಯೆ ಪರಿಹಾರಕ್ಕೆ ಇರೋ ಸಹಾಯ ಆಪ್ ನಿರ್ವಹಣೆಯಲ್ಲಿ ಬಿಬಿಎಂಪಿ ಫೇಲ್ಯೂರ್ ಆಗಿದೆ.ದಾಖಲಾದ ದೂರುಗಳನ್ನ ಕ್ಲೀಯರ್ ಮಾಡದೇ ಝೀರೋ ಮಾಡಲು ಹೊರಟಿದೆ. ಸಹಾಯ ಆಪ್ ಅಲ್ಲಿ ದೂರು ದಾಖಲಾದ್ರು ಕ್ಲಿಯರ್ ಮಾಡದೇ ನಿರ್ಲಕ್ಷ್ಯ ಮಾಡ್ತಿದ್ದು. ಬಿಬಿಎಂಪಿ ಸಹಾಯ ಆ್ಯಪ್ ಕರ್ಮಕಾಂಡದ ವಿರುದ್ಧ ಬೆಂಗಳೂರಿಗರು ಆಕ್ರೋಶ ಹೊರಹಾಕ್ತಾ ಇದ್ದಾರೆ.
ಬೆಂಗಳೂರು ನಗರದ ಸಾರ್ವಜನಿಕರ ಕಸದ ಸಮಸ್ಯೆ, ರಸ್ತೆಗುಂಡಿ ಸಮಸ್ಯೆ, ಚರಂಡಿ ಸಮಸ್ಯೆ, ರಾಜಕಾಲುವೆ ಸಮಸ್ಯೆ ಸೇರಿದಂತೆ ಇನ್ನಿತರ ಮೂಲಭೂತ ಸೌಕರ್ಯಗಳ ಸಮಸ್ಯೆಗಳನ್ನ ಬಿಬಿಎಂಪಿ ಗಮನಕ್ಕೆ ತರುವ ನಿಟ್ಟಿನಲ್ಲಿ ಬಿಬಿಎಂಪಿ ಸಹಾಯ ಆ್ಯಪ್ ಅನ್ನು ಬಿಡುಗಡೆ ಮಾಡ್ತು. ಸಹಾಯ ಆ್ಯಪ್1 ಸಕ್ಸಸ್ ಆಗದ ಹಿನ್ನೆಲೆ ಸಹಾಯ ಆ್ಯಪ್ 2ನಾ ಜಾರಿ ಮಾಡ್ತು. ಇದರ ಮೂಲಕ ಜನರು ಪೋಟೋ ತೆಗೆದು ಆನ್ಲೈನ್ನಲ್ಲಿ ಅಪ್ಲೋಡ್ ಮಾಡಿ ದೂರು ಸಲ್ಲಿಸಬಹುದು. ಈ ಸಹಾಯ ಆ್ಯಪ್ ನಲ್ಲಿ ಸಾಕಷ್ಟು ದೂರು ಸಲ್ಲಿಸಿದ್ರು ಬಿಬಿಎಂಪಿ ಮಾತ್ರ ದೂರುಗಳಿಗೆ ಪರಿಹಾರ ಒದಗಿಸದೇ ನಿರ್ಲಕ್ಷ್ಯ ಮಾಡ್ತಾ ಆ್ಯಪ್ ನಿರ್ವಹಣೆ ಮಾಡುವಲ್ಲಿ ಸಂಪೂರ್ಣ ವಿಫಲವಾಗಿದೆ. ಇದನ್ನೂ ಓದಿ: ಅನಾಥ ಹೆಣ್ಣುಮಕ್ಕಳ ನೆರವಿಗೆ ನಿಂತ ಬ್ಯಾಟರಾಯನಪುರ ಸಂಚಾರ ಪೊಲೀಸರು
ಜೆಪಿನಗರ ನಿವಾಸಿಯೊಬ್ಬರು ಕಳೆದ ಎರಡು ತಿಂಗಳಲ್ಲಿ ಸುಮಾರು 170 ಕ್ಕೂ ಹೆಚ್ಚು ಸಮಸ್ಯೆಗಳನ್ನ ಆ್ಯಪ್ ನಲ್ಲಿ ಅಪ್ಲೋಡ್ ಮಾಡಿದ್ದಾರೆ. ಆದರೆ ಒಂದು ಸಮಸ್ಯೆಗೂ ಬಿಬಿಎಂಪಿ ಸ್ಪಂದಿಸಿಲ್ಲ. ಅದಕ್ಕೆ ರಿಪ್ಲೈ ಕೂಡ ಮಾಡಿಲ್ಲ. ಬದಲಾಗಿ ದೂರು ಸಂಖ್ಯೆ ಹೆಚ್ಚಾಗ್ತಾ ಇದ್ರು ಸಮಸ್ಯೆ ಕ್ಲಿಯರ್ ಮಾಡದೇ ಝೀರೋ ಮಾಡಲು ಮುಂದಾಗ್ತಾ ಇದ್ದಾರಂತೆ. ಈ ರೀತಿ ಬಿಬಿಎಂಪಿ ಸಹಾಯ ಆ್ಯಪ್ ನಲ್ಲಿ ಬರುವ ಸಮಸ್ಯೆ ಕ್ಲಿಯರ್ ಮಾಡದೇ ನಿರ್ಲಕ್ಷ್ಯ ಮಾಡ್ತಾ ಇರೋದು ಬಿಬಿಎಂಪಿ ಬೇಜಬಾವ್ದಾರಿತನವನ್ನು ತೋರಿಸುತ್ತಿದೆ ಅಂತಾ ದೂರುದಾರರು ಆಕ್ರೋಶ ಹೊರಹಾಕ್ತಾ ಇದ್ದಾರೆ.
ಜಯನಗರದ ಸುತ್ತಮುತ್ತ ಮೂಲಭೂತ ಸೌಕರ್ಯಗಳ ಬಗ್ಗೆ ಎಷ್ಟೇ ದೂರುಗಳನ್ನ ದಾಖಲಿಸಿದ್ರೂ ಪರಿಹಾರವೇ ಇಲ್ವಂತೆ.. ಪರಿಹಾರ ಸಿಗದ ಆ್ಯಪ್ ಇನ್ಯಾಕೆ ಅಂತ ಜನ ಕಿಡಿಕಾರುತ್ತಿದ್ದಾರೆ. ಒಟ್ಟಾರೆ ಬಿಬಿಎಂಪಿ ಸಹಾಯ ಆ್ಯಪ್ ನಲ್ಲಿ ಬಂದ ದೂರುಗಳನ್ನ ಕ್ಲಿಯರ್ ಮಾಡುವಲ್ಲಿ ನಿರ್ಲಕ್ಷ್ಯ ತೋರುತ್ತಾ ಇದೆ. ಮೂಲಭೂತ ಸೌಕರ್ಯಗಳ ಸಮಸ್ಯೆಗೆ ಪರಿಹಾರ ಸಿಗದೇ ಜನ ಒದ್ದಾಡ್ತಾ ಇದ್ದಾರೆ. ಕೂಡಲೇ ಬಿಬಿಎಂಪಿ ಮೂಲಭೂತ ಸೌಕರ್ಯಗಳ ಸಮಸ್ಯೆ ಬಗೆಹರಿಸಿದ್ರೆ ಒಳ್ಳೆದು ಇಲ್ಲದಿದ್ದರೆ ಜನರ ಟೀಕೆಗೆ ಒಳಗಾಗೋದ್ರಲ್ಲಿ ಯಾವುದೇ ಅನುಮಾನ ಇಲ್ಲ.