ಬೆಂಗಳೂರು: ಹೈಕೋರ್ಟ್ ಆದೇಶದ ಅನ್ವಯ ನಗರದ ವಿವಿಧಕಡೆ ಬಿಬಿಎಂಪಿ ಸಿಬ್ಬಂದಿ ಫ್ಲೆಕ್ಸ್ ತೆರವು ಕಾರ್ಯಾಚರಣೆ ನಡೆಸಿದ್ದು, ಈ ವೇಳೆ ಕೆ.ಆರ್ ಪುರಂ ಕಾಂಗ್ರೆಸ್ ಶಾಸಕ ಬೈರತಿ ಬಸವರಾಜ್ ಬೆಂಬಲಿಗರು ಗೂಂಡಾಗಿರಿ ನಡೆಸಿದ್ದಾರೆ.
ನಗರದ ಪೈ ಲೇಔಟ್ ಬಳಿ ಬಿಬಿಎಂಪಿ ಕಾರ್ಮಿಕರಾದ ಮನು, ವಿಶ್ವ, ಚಂದನ್ ಫ್ಲೆಕ್ಸ್ ತೆರವು ಮಾಡುತ್ತಿದ್ದ ವೇಳೆ ಸ್ಥಳಕ್ಕೆ ಬಂದ ಶಾಸಕ ಬೈರತಿ ಬೆಂಬಲಿಗ ಸಂತೋಷ್ ರೆಡ್ಡಿ ಹಲ್ಲೆ ನಡೆಸಿದ್ದಾನೆ.
ನ್ಯಾಯಾಲಯದ ಆದೇಶಕ್ಕೂ ಬೆಲೆ ನೀಡದ ಕಾಂಗ್ರೆಸ್ ಪಕ್ಷದ ಶಾಸಕರ ಪ್ರಭಾವಿ ಬೆಂಬಲಿಗರು ಬಿಬಿಎಂಪಿ ಸಿಬ್ಬಂದಿ ಮೇಲೆಯೇ ಹಲ್ಲೆ ನಡೆಸಿ ತೆರವು ಮಾಡದಂತೆ ವಿರೋಧ ವ್ಯಕ್ತಪಡಿಸಿದ್ದಾರೆ. ಇದರಿಂದ ಕೋರ್ಟ್ ಆದೇಶವಿದ್ದರೂ ಸಹ ಫ್ಲೆಕ್ಸ್ ತೆರವು ಮಾಡಲು ಸಿಬ್ಬಂದಿ ಹೆದರಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ.
ಬಿಜೆಪಿ ಮುಖಂಡ ಕಟ್ಟಾ ಸುಬ್ರಮಣ್ಯನಾಯ್ಡು ಮನೆ ಸುತ್ತಮುತ್ತ ಫೆಕ್ಸ್ ಗಳಿದ್ದರೂ ಅದನ್ನು ತೆಗೆದಿಲ್ಲ. ನಗರದ ಸದಾಶಿವನಗರದಲ್ಲಿರುವ ಕಟ್ಟಾ ಸುಬ್ರಮಣ್ಯನಾಯ್ಡು ಮನೆ ಬಳಿ ಇರುವ ಫ್ಲೆಕ್ಸ್ ಗಳನ್ನು ತೆರವು ಮಾಡುವ ಗೋಜಿಗೆ ಅಧಿಕಾರಿಗಳು ಹೋಗಿಲ್ಲ. ಇದನ್ನೂ ಓದಿ: ಬೆಂಗ್ಳೂರಲ್ಲಿ ಫ್ಲೆಕ್ಸ್ ಹಾಕಿದ್ರೆ ಜೈಲು? ಬಿಬಿಎಂಪಿ ದಿಢೀರ್ ಕಾರ್ಯಾಚರಣೆ ನಡೆಸ್ತಿರೋದು ಯಾಕೆ?
https://www.youtube.com/watch?v=QSxzTWxaPjo