– ಆಗಾಗ ಊಟಕ್ಕೆ ಸೇರುತ್ತಿರುತ್ತೇವೆ
ಬೆಂಗಳೂರು: ಸಂಪುಟ ಪುನಾರಚನೆ ಮಾತು ಕೇಳಿ ಬರುತ್ತಿದ್ದಂತೆ ಆಕ್ಟಿವ್ ಆದ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹಾಗೂ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸದಾಶಿವ ನಗರ ನಿವಾಸದಲ್ಲಿ ಮಾತುಕತೆ ನಡೆಸಿದ್ದಾರೆ.
ಕಳೆದ ಒಂದು ಗಂಟೆಯಿಂದ ಸದಾಶಿವ ನಗರದಲ್ಲಿರುವ ಜಾರಕಿಹೊಳಿ ನಿವಾಸದಲ್ಲಿ ಯತ್ನಾಳ್ ಮಾತುಕತೆ ನಡೆಸಿದ್ದಾರೆ. ಶಾಸಕ ಮಹೇಶ್ ಕುಮ್ಟಳ್ಳಿ ಸಹ ಸಾಥ್ ನೀಡಿದ್ದಾರೆ. ಇದನ್ನೂ ಓದಿ: ಬಿಜೆಪಿ ತನ್ನ ಅನುಕೂಲಕ್ಕಾಗಿ ಹಿಂದುತ್ವವನ್ನು ಬಳಸಿಕೊಳ್ಳುತ್ತಿದೆ: ಉದ್ಧವ್ ಠಾಕ್ರೆ
ಬೆಳಗಾವಿ ಸಭೆ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ನಾನು ಯಾರ ಸಭೆಗೂ ಹೋಗಲ್ಲ, ಅಂತಹ ಸಭೆಗೆ ಹೋಗಲ್ಲ. ಪ್ರೀತಿ ಇದ್ದಲ್ಲಿಗೆ ಹೋಗುತ್ತೇನೆ. ಮಾಧ್ಯಮಗಳಿಂದ ಮಾಹಿತಿ ಗೊತ್ತಾಗಿದೆ. ಪಕ್ಷ ಸಂಘಟನೆ ಬಗ್ಗೆಯೇ ಸಭೆ ಮಾಡಿರಬಹುದು. ಮಾಡಿದರೆ ತಪ್ಪೇನಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ಅಖಿಲೇಶ್ ಆಡಳಿತದಲ್ಲಿ ಗಲಭೆ, ಗೂಂಡಾಗಿರಿ, ವಲಸೆ ಹೆಚ್ಚಿತ್ತು: ಕೇಶವ್ ಪ್ರಸಾದ್ ಮೌರ್ಯ
ನಮ್ಮ ಹೈಕಮಾಂಡ್ ಬಹಳ ಬುದ್ಧಿವಂತರಿದ್ದಾರೆ. ಯಾರು ಏನೇನು ಮಾಡ್ತಾರೆ ಅಂತ ಗೊತ್ತಾಗುತ್ತದೆ. ಅವರು ಸೂಕ್ತ ನಿರ್ಧಾರ ಕೈಗೊಳ್ಳುತ್ತಾರೆ. ಇವತ್ತಿನ ಸಭೆ ಅಲ್ಲಾ ಎಲ್ಲರೂ ಊಟಕ್ಕೆ ಸೇರಿದ್ದೆವು. ಆಗಾಗ ಊಟಕ್ಕೆ ಸೇರುತ್ತಿರುತ್ತೇವೆ ಇಂದು ಕೂಡ ಹಾಗೆ ಸೇರಿದ್ದೆವು ಎಂದು ಹಾರಿಕೆಯ ಉತ್ತರವನ್ನು ಕೊಟ್ಟಿದ್ದಾರೆ.