ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಗಾಳಿಪಟ ಮಾಂಜ ದಾರಗಳನ್ನು ಬ್ಯಾನ್ ಮಾಡಿದರೂ ಬಳಕೆ ಆಗುತ್ತಿರುವ ಸತ್ಯ ಬಯಲಿಗೆ ಬಂದಿದೆ.
ಗಾಳಿಪಟದ ಈ ಮಾಂಜ ದಾರಗಳು ವಿಷಕಾರಿ ಆಗಿದ್ದು, ನಿತ್ಯ 3 ಪಕ್ಷಿಗಳ ಸಾವು ಈ ದಾರದಿಂದಲೇ ಆಗುತ್ತಿದೆ ಎಂಬ ಮಾಹಿತಿ ಹೊರಬಿದ್ದಿದೆ. ಚಳಿಗಾಲದಲ್ಲಿ ಈ ಗಾಳಿಪಾಟದ ಮಾಂಜ ದಾರ ಬಳಕೆ ಹೆಚ್ಚು ಆಗುತ್ತದೆ.
ಗಾಳಿಪಟ ಹಾರಿಸಲು ಬಳಸುವ ಮಾಂಜದಾರ ತುಂಡಾದ ನಂತರ ಮರಕ್ಕೆ ಅಥವಾ ಕಂಬಗಳಿಗೊ ಸುತ್ತಿಕೊಂಡಿರುತ್ತದೆ. ಇದನ್ನು ಕಾಣದೇ ಹಾರುವ ಪಕ್ಷಿಗಳ ರೆಕ್ಕೆ ಅಥವಾ ಕಾಲು ಸಿಲುಕಿ ಪ್ರಾಣ ತೆಗೆಯುತ್ತದೆ.
ಗಾಳಿಪಟ ಹಾರಿಸಲು ಹತ್ತಿಯ ನೂಲು ಬಳಸಿದರೆ ಅಷ್ಟಾಗಿ ತೊಂದರೆಯಾಗದೇ ಇದ್ದರೂ ಚೈನಾ ಮಾಂಜದಾರ ಡೆಡ್ಲಿ ಆಗಿರುತ್ತದೆ. ಚೈನಾ ಮಾಂಜದಾರ ತಯಾರಿಸಲು ಕಬ್ಬಿಣದ ಪುಡಿಯನ್ನು ಬಳಸಿರುವ ವರದಿ ಹೊರಬಿದ್ದಿದೆ. ಈ ಸಂಬಂಧ ಮೇಯರ್ ಗಂಗಾಬಿಕ ಮಲ್ಲಿಕಾರ್ಜುನ ಮಾತನಾಡಿ, ಚೈನಾ ಮಾಂಜ ದಾರ ನಿಷೇಧವಿದೆ. ಪಕ್ಷಿಗಳ ರಕ್ಷಣೆಗಾಗಿ ಬಳಕೆ ಮಾಡುವ ವಿರುದ್ಧ ಕ್ರಮ ಕೈಗೊಳ್ಳಲು ಸಂಬಂಧಪಟ್ಟ ಅಧಿಕಾರಿಗಳಿಗೆ ಆದೇಶಲಾಗಿದೆ ಎಂದು ಹೇಳಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv