ಬೆಂಗಳೂರು: ಜೈಲಿನಲ್ಲೇ ಇದ್ದುಕೊಂಡು ಕಂಟ್ರಾಕ್ಟ್ರ್ ಒಬ್ಬರನ್ನು ಕಿಡ್ನ್ಯಾಪ್ ಮಾಡಿಸಿದ್ದ ರೌಡಿಶೀಟರ್ ಮತ್ತು ಅವನ ಸಹಚರರನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.
ಕೆಪಿ ಅಗ್ರಹಾರದಲ್ಲಿ ರೌಡಿಶೀಟರ್ ಆಗಿರುವ ನಟರಾಜ ಅಲಿಯಾಸ್ ಮುಳ್ಳ ಮತ್ತು ಅವನ ಸಹಚರರಾದ ಕಾರ್ತಿಕ್, ಭೈರೇಗೌಡ, ಸುರೇಶ್ ಸೇರಿದಂತೆ ಐವರನ್ನು ಬಂಧಿಸಲಾಗಿದೆ. ಪ್ರಕರಣವೊಂದರಲ್ಲಿ ಆರೋಪಿಯಾಗಿದ್ದ ರೌಡಿಶೀಟರ್ ನಟರಾಜ ಪರಪ್ಪನ ಅಗ್ರಹಾರ ಸೇರಿದ್ದ.
ಜೈಲಿನಲ್ಲಿ ಇದ್ದುಕೊಂಡೆ ಕಂಟ್ರಾಕ್ಟ್ರ್ ಶಾಂತಕುಮಾರ್ ಎಂಬವರನ್ನು ತನ್ನ ಸಹಚರರಿಗೆ ಸೂಚನೆ ನೀಡಿ ಕಿಡ್ನ್ಯಾಪ್ ಮಾಡಿಸಿದ್ದ. ಜೈಲಿನಿಂದಲೇ ಫೋನ್ ಮೂಲಕ ಸಂಪರ್ಕಿಸಿ ಕಿಡ್ನ್ಯಾಪ್ ಮಾಡಿಸಿದ್ದ ನಟರಾಜ ಕಂಟ್ರಾಕ್ಟ್ರ್ ನಿಂದ ಎರಡೂವರೇ ಲಕ್ಷ ಪಡೆದು ಕಳುಹಿಸಿದ್ದನು.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಕೆಪಿ ಅಗ್ರಹಾರ ಪೊಲೀಸರು ಐವರನ್ನು ಬಂಧಿಸಿದ್ದಾರೆ.