ಬಾಹುಬಲಿ, ಬಾಹುಬಲಿ-2 ಎರಡೂ ಸಿನಿಮಾಗಳು ವರ್ಲ್ಡ್ ವೈಡ್ ಭಾರೀ ಸಂಚಲನ ಮೂಡಿಸಿದವುಗಳು. ಈ ಎರಡೂ ಸಿನಿಮಾಗಳು ನಟ ಪ್ರಭಾಸ್ಗೆ ನೇಮ್ ಮತ್ತು ಫ್ರೇಮ್ ತಂದು ಕೊಡುವ ಜೊತೆಗೆ ದೊಡ್ಡ ಮಟ್ಟದ ಯಶಸ್ಸನ್ನು ತಂದು ಕೊಟ್ಟಿವೆ. ಪ್ರಭಾಸ್ಗೆ ನ್ಯಾಷನಲ್ ಆ್ಯಕ್ಟರ್ ಪಟ್ಟ ಗಿಟ್ಟಿಸಿಕೊಳ್ಳುವಲ್ಲಿ ಸಹಾಯ ಮಾಡಿವೆ. ನಿರ್ದೇಶಕ ರಾಜಮೌಳಿ ಸಾರಥ್ಯದಲ್ಲಿ ಮೂಡಿ ಬಂದ ಈ ಎರಡೂ ಸಿನಿಮಾಗಳು ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ಹೊಸ ಅಲೆಯನ್ನೇ ಎಬ್ಬಿಸಿದವು. ಸದ್ಯ ಮತ್ತೆ ಪ್ರಭಾಸ್ ಹಾಗೂ ರಾಜಮೌಳಿ ಕಾಂಬೀನೇಷನ್ನಲ್ಲಿ ಬಾಹುಬಲಿ-3 ಸೆಟ್ಟೆರಲಿದೆ ಎಂದು ಹೇಳಲಾಗುತ್ತಿದೆ.
ಹೌದು ಇತ್ತೀಚೆಗಷ್ಟೇ ಟಾಲಿವುಡ್ ನಟ ರಾಮ್ಚರಣ್ ತೇಜ ಹಾಗೂ ಜೂ.ನಿಯರ್ ಎನ್ಟಿಆರ್ ಒಟ್ಟಾಗಿ ಅಭಿನಯಿಸಿದ್ದ ಆರ್ಆರ್ಆರ್ ಸಿನಿಮಾಕ್ಕೆ ಆ್ಯಕ್ಷನ್ ಕಟ್ ಹೇಳಿದ್ದ ರಾಜಮೌಳಿ ಅವರು, ಈ ಸಿನಿಮಾದ ಪ್ರಮೋಷನ್ ವೇಳೆ ಬಾಹುಬಲಿ -3 ಚಿತ್ರವನ್ನು ನಿರ್ದೇಶಿಸುವ ಪ್ಲಾನ್ ಹೊಂದಿರುವ ಬಗ್ಗೆ ಸುಳಿವು ನೀಡಿದ್ದರು. ಇದನ್ನೂ ಓದಿ: ಲಿವ್ ಇನ್ ರಿಲೇಶನ್ಶಿಪ್ – ಮದುವೆ ಬಗ್ಗೆ ವಿದ್ಯಾ ಬಾಲನ್ ಹೇಳೋದೇನು?
ಇದೀಗ ಮಧ್ಯಮವೊಂದರಲ್ಲಿ ಬಾಹುಬಲಿ ಸಿನಿಮಾದ ನಿರ್ಮಾಪಕ ಪ್ರಸಾದ್ ದೇವಿನೇನಿ, ಎಸ್ಎಸ್ ರಾಜಮೌಳಿ ಅವರು ಮತ್ತೊಂದು ಬಾಹುಬಲಿ ಕಥೆಯನ್ನು ಹೇಳುವ ಸಾಧ್ಯತೆ ಇದೆ. ಜೀವನಕ್ಕಿಂತ ಪ್ರಪಂಚ ಮತ್ತು ಪಾತ್ರಗಳು ದೊಡ್ಡದಾಗಿದೆ. ಆದರೆ ನಾವು ಈಗಲೇ ಬಾಹುಬಲಿ-3 ಸಿನಿಮಾವನ್ನು ಪ್ರಾರಂಭಿಸುವುದರ ಬಗ್ಗೆ ಯೋಚಿಸಿಲ್ಲ. ಏಕೆಂದರೆ ರಾಜಮೌಳಿ ಅವರು ಒಂದೆರಡು ಕಮಿಟ್ಮೆಂಟ್ಗಳನ್ನು ಹೊಂದಿದ್ದಾರೆ. ಅದೆಲ್ಲ ಮುಗಿದ ಬಳಿಕ ನಾವು ಈ ಬಗ್ಗೆ ಯೋಚಿಸುತ್ತೇವೆ. ಎಲ್ಲವೂ ಸರಿಯಾಗಿದ್ದರೆ ಖಂಡಿತವಾಗಿಯೂ ಬಾಹುಬಲಿ-3 ಸಿನಿಮಾ ಮಾಡುತ್ತೇವೆ. ಸದ್ಯಕ್ಕೆ ಇದರ ಬಗ್ಗೆ ಯೋಚಿಸಿಲ್ಲ ಎಂದಿದ್ದಾರೆ.
ಇತ್ತೀಚೆಗೆ ನಾವು ಬಾಹುಬಲಿ ಸಿನಿಮಾ ಕಥೆಯನ್ನು ಬರೆದಿದ್ದ, ಕೆ.ವಿ ವಿಜಯೇಂದ್ರ ಪ್ರಸಾದ್ ಅವರನ್ನೂ ಸಂಪರ್ಕಿಸಿದ್ದೆವು. ಅವರು ಖಂಡಿತವಾಗಿವಾಗಿಯೂ ಬಹುಬಲಿ-3 ಸಿನಿಮಾಕ್ಕೆ ಕಥೆಯನ್ನು ಬರೆದುಕೊಡುತ್ತೇನೆ. ಆದರೆ ಅದಕ್ಕೂ ಮುನ್ನ ಮಹೇಶ್ ಬಾಬು ಅವರ ಪ್ರಾಜೆಕ್ಟ್ ಮುಗಿಯಬೇಕು. ಅದಕ್ಕೂ ಮುನ್ನ ಈ ಬಗ್ಗೆ ಯೋಚಿಸಲು ಸಾಧ್ಯವಿಲ್ಲ ಎಂದು ಹೇಳಿರುವುದಾಗಿ ತಿಳಿಸಿದ್ದಾರೆ. ಇದನ್ನೂ ಓದಿ: ಮೂರು ವರ್ಷದ ಪ್ರೀತಿ ಖತಂ: ಅನನ್ಯಾ ಪಾಂಡೆ ದೂರವಾಗಲು ಕಾರಣವೇನು?
ಇತ್ತೀಚೆಗಷ್ಟೇ ಬಿಡುಗಡೆಯಾದ ಆರ್ಆರ್ಆರ್ ಸಕ್ಸಸ್ ಅಲೆಯಲ್ಲಿ ರಾಜಮೌಳಿ ತೇಲುತ್ತಿದ್ದು, ಚಿತ್ರದಲ್ಲಿ ಜೂ. ಎನ್ಟಿಆರ್ ಮತ್ತು ರಾಮ್ ಚರಣ್ ನಾಯಕರಾಗಿ ಅಭಿನಯಿಸಿದ್ದಾರೆ. ಈ ಸಿನಿಮಾದ ಪ್ರಮುಖ ಪಾತ್ರದಲ್ಲಿ ಬಾಲಿವುಡ್ ಆಲಿಯಾ ಭಟ್ ಮತ್ತು ನಟ ಅಜಯ್ ದೇವಗನ್ ಕೂಡ ಕಾಣಿಸಿಕೊಂಡಿದ್ದಾರೆ.