ದಿನನಿತ್ಯ ಜಗಳವಾಡುತ್ತಿದ್ದಳೆಂದು ಪತ್ನಿಯ ಎದೆಗೇ ಗುಂಡಿಕ್ಕಿ ಕೊಂದ!

Public TV
2 Min Read
MURDER

ಮಡಿಕೇರಿ: ಹಲವು ವರ್ಷಗಳಿಂದ ಪತ್ನಿಯ ಮೇಲೆ ಸಂಶಯಗೊಂಡ ಪತಿ ರಾತ್ರಿ ಒಂಟಿ ನಳಿಕೆ ಕೋವಿಯಿಂದ ಹತ್ಯೆ ಮಾಡಿರುವ ಭೀಕರ ಘಟನೆ ಕೊಡಗು ಜಿಲ್ಲೆಯ ಕುಶಾಲನಗರ ತಾಲೂಕಿನ ಚೆಟ್ಟಳ್ಳಿಯಲ್ಲಿ ನಡೆದಿದೆ.

ಇಲಿನ ಚೆಟ್ಟಳ್ಳಿಯ ಬಟ್ಟೀರ ಗೋಪಾಲ ಅಲಿಯಾಸ್ ಕಿಶನ್(53) ಪತ್ನಿ ಶಶ್ಮಾ (34)ಳೊಂದಿಗೆ ಜಗಳವಾಡುತ್ತಿದ್ದ ವೇಳೆ ಒಂಟಿನಳಿಕೆ ಕೋವಿಯಿಂದ ಎದೆಯ ಭಾಗಕ್ಕೆ ಗುಂಡಿಕ್ಕಿ ಕೊಂಡಿದ್ದಾನೆ. ಇದನ್ನೂ ಓದಿ: ಗಂಡ ತೀರಿಕೊಂಡ ಬಳಿಕ ಮತ್ತೊಬ್ಬನ ಸಂಗ, ಅಕ್ರಮ ಸಂಬಂಧ ವಿರೋಧಿಸಿದಕ್ಕೆ ಮಗನನ್ನೇ ಕೊಂದ ತಾಯಿ

KILLING CRIME

ತಾನೇ ಕೊಂದು ಪತ್ನಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಕಥೆ ಕಟ್ಟಿ ಬೆಂಗಳೂರಿನಲ್ಲಿರುವ ತನ್ನ ಮಗ ನಿಧಿ ಹಾಗೂ ಪತ್ನಿಯ ತಂಗಿ ಶುಭಾ ಹಾಗೂ ಪತ್ನಿಯ ಕುಟುಂಬಸ್ಥರಿಗೆ ಕರೆ ಮಾಡಿ ತಿಳಿಸಿದ್ದಾನೆ. ಶಶ್ಮಾ ಸಾವಿನ ಬಗ್ಗೆ ಅನುಮಾನಗೊಂಡ ಗ್ರಾಮಸ್ಥರು ನಿನ್ನೆ ರಾತ್ರಿ ಚೆಟ್ಟಹಳ್ಳಿ ಪೋಲೀಸ್ ಉಪಠಾಣೆಗೆ ದೂರು ನೀಡಿದ್ದಾರೆ. ನಂತರ ಮೇಲಾಧಿಕಾರಿಗಳ ಆದೇಶದ ಮೇಲೆ ಎಎಸ್‌ಐ ಪಿ.ಟಿ.ಶ್ರೀನಿವಾಸ್ ತಕ್ಷಣವೇ ಆರೋಪಿಯನ್ನು ವಶಕ್ಕೆ ಪಡೆದು ತನಿಖೆ ನಡೆಸಿದ್ದಾರೆ. ಈ ವೇಳೆ ತಾನೇ ಗುಂಡು ಹಾರಿಸಿರುವುದಾಗಿ ಒಪ್ಪಿಕೊಂಡಿದ್ದಾನೆ.

crime

ದೂರಿನಲ್ಲಿ ಹೇಳಿದ್ದೇನು?
ತನ್ನ ಪತಿ ನಿತ್ಯವೂ ಜಗಳವಾಡಿ ಹಿಂಸೆ ನೀಡುತ್ತಿದ್ದು, ತವರು ಮನೆಗೆ ತೆರಳುವುದಾಗಿ ಮಗ ನಿಧಿ ಹಾಗೂ ನನಗೆ ದೂರವಾಣಿ ಕರೆ ಮಾಡಿ ತಿಳಿಸಿದ್ದಳು. ಈ ವೇಳೆ ತಂಗಿ ಶುಭಾ ನಾಳೆ ಬಂದು ಇತ್ಯರ್ಥ ಮಾಡುವುದಾಗಿ ಸಮಾಧಾನಪಡಿಸಿದ್ದರು. ಇದಾದ ದಿನ ರಾತ್ರಿಯೇ ಗುಂಡಿನ ದಾಳಿ ನಡೆದಿದೆ ಎಂದು ಮೃತಳ ತಂಗಿ ಎನ್.ಪಿ.ಶೋಭಾ ದೂರಿನಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ಪ್ರವೀಣ್ ಕುಮಾರ್ ನೆಟ್ಟಾರು ಹತ್ಯೆ ಪ್ರಕರಣದ ಆರೋಪಿಗಳ ಆಸ್ತಿ ಸೀಜ್: ಅಲೋಕ್ ಕುಮಾರ್

ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಇಂದು ಘಟನಾ ಸ್ಥಳಕ್ಕೆ ಎಸ್‌ಪಿ ಎಂ.ಎ.ಅಯ್ಯಪ್ಪ ಹಾಗೂ ಡಿವೈಎಸ್‌ಪಿ ಗಜೇಂದ್ರ ಪ್ರಸಾದ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ತಕ್ಷಣವೇ ಆರೋಪಿಯನ್ನು ಬಂಧಿಸುವಲ್ಲಿ ಕಾರ್ಯಪ್ರವೃತ್ತರಾದ ಎಸ್‌ಐ ಅನುಪ್ ಮಾದಪ್ಪ, ಪಿಎಸ್‌ಐ ದೇವರಾಜು, ವಾಣಿಶ್ರೀ ಚೆಟ್ಟಳ್ಳಿ, ಪೋಲಿಸ್ ಉಪಠಾಣಾ ಎಎಸ್‌ಐ ಶ್ರೀನಿವಾಸ್, ಸಿಬ್ಬಂದಿ ಉಮೇಶ್ ಹಾಗೂ ರಮೇಶ್ ಅವರಿಗೆ ಪ್ರಸಂಶೆ ವ್ಯಕ್ತಪಡಿಸಿದ್ದಾರೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *