ರಾಜ್ಯದಲ್ಲಿ ಅತಂತ್ರ ಸರ್ಕಾರ ನಿರ್ಮಾಣ- ಜ್ಯೋತಿರ್ವಿಜ್ಞಾನಿ ಪ್ರಕಾಶ್ ಅಮ್ಮಣ್ಣಾಯ ಭವಿಷ್ಯ

Public TV
1 Min Read
UDP PRAKASH

ಉಡುಪಿ: ಈ ಬಾರಿಯ ಚುನಾವಣಾ ಫಲಿತಾಂಶ ಕಬ್ಬಿಣದ ಕಡಲೆಯಾಗಿದೆ. ರಾಜ್ಯದಲ್ಲಿ ಅತಂತ್ರ ಸರ್ಕಾರ ಬರುತ್ತದೆ ಎಂದು ಕಾಪು ಜ್ಯೋತಿರ್ವಿಜ್ಞಾನಿ ಪ್ರಕಾಶ್ ಅಮ್ಮಣ್ಣಾಯ ಭವಿಷ್ಯ ನುಡಿದಿದ್ದಾರೆ.

ನಗರದಲ್ಲಿ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ನಾನೇ ಮುಂದಿನ ಸಿಎಂ ಅಂತ ಹೇಳುತ್ತಿದ್ದರು. ಈಗ ಸಿಎಂ ತನ್ನ ಪ್ಲೇಟ್ ಚೇಂಜ್ ಮಾಡಿದ್ದಾರೆ ಅಂತ ಹೇಳಿದ್ದಾರೆ.

CONG JDS BJP

ಕುಮಾರಸ್ವಾಮಿ ಸಾಯುವ ಮಾತನಾಡುತ್ತಾರೆ ಯಡಿಯೂರಪ್ಪ ಪ್ರಮಾಣ ವಚನ ದಿನಾಂಕ ಫಿಕ್ಸ್ ಮಾಡಿದ್ದಾರೆ. ಗೃಹಗತಿಯ ಪ್ರಕಾರ ಬಿಜೆಪಿ ನೂರರ ಗಡಿ ದಾಟುತ್ತದೆ, ಬಿಜೆಪಿಗೆ 105 ಸೀಟು ಸಿಗುತ್ತದೆ ಎಂದು ಅಮ್ಮಣ್ಣಾಯ ಜಾತಕ ಪುಸ್ತಕ ನೋಡಿ ಹೇಳಿದ್ರು.

ಸರ್ಕಾರ ರಚನೆಗೆ ಮಾಜಿ ಸಿಎಂ ಕುಮಾರಸ್ವಾಮಿ ಬೇಕೇ ಬೇಕು. ಕುಮಾರಸ್ವಾಮಿಗೆ ಮುಖ್ಯಮಂತ್ರಿಯಾಗುವ ಯೋಗವಿದೆ. ಅವರ ಲಾಭ ಸ್ಥಾನದಲ್ಲಿ ಗುರುವಿದ್ದಾನೆ. ಸಮ್ಮಿಶ್ರ ಸರ್ಕಾರಕ್ಕೆ ಬಾಳಿಕೆ ಬಹಳ ಕಡಿಮೆ. ಈ ಚುನಾವಣೆ ನಂತರ ಕಾಂಗ್ರೆಸ್ ಪತನದ ಹಾದಿ ಹಿಡಿಯುತ್ತದೆ. 2019ರ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಬಹಳ ಹಿನ್ನಡೆಯಾಗುತ್ತದೆ ಅಂತ ಪ್ರಕಾಶ್ ಅಮ್ಮಣ್ಣಾಯ ಶಾಕ್ ಕೊಟ್ಟಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *